ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ) 
ದೇಶ

ಸಗಟು ಹಣದುಬ್ಬರ 20 ತಿಂಗಳಲ್ಲೇ ಗರಿಷ್ಠ ಕುಸಿತ, ಆದರೂ ಗ್ರಾಹಕರಿಗೆ ಪ್ರಯೋಜನ ಇಲ್ಲ!

ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಅಕ್ಟೋಬರ್ ತಿಂಗಳಲ್ಲಿ 20 ತಿಂಗಳಲ್ಲೇ ಗರಿಷ್ಠ ಕುಸಿತ ದಾಖಲಿಸಿದೆ. ಮಾ.2021 ರ ಬಳಿಕ ಅಕ್ಟೋಬರ್ ತಿಂಗಳ ಡಬ್ಲ್ಯುಪಿಐ ಗರಿಷ್ಠ ಅಂದರೆ, ಶೇ.8.39 ಕ್ಕೆ ಕುಸಿದಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ವರ್ಗಾವಣೆಯಾಗಿಲ್ಲ.

ನವದೆಹಲಿ: ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಅಕ್ಟೋಬರ್ ತಿಂಗಳಲ್ಲಿ 20 ತಿಂಗಳಲ್ಲೇ ಗರಿಷ್ಠ ಕುಸಿತ ದಾಖಲಿಸಿದೆ. ಮಾ.2021 ರ ಬಳಿಕ ಅಕ್ಟೋಬರ್ ತಿಂಗಳ ಡಬ್ಲ್ಯುಪಿಐ ಗರಿಷ್ಠ ಅಂದರೆ, ಶೇ.8.39 ಕ್ಕೆ ಕುಸಿದಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ವರ್ಗಾವಣೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಶೇ.10.70 ಕ್ಕೆ ಡಬ್ಲ್ಯುಪಿಐ ಕುಸಿತ ಕಂಡಿತ್ತು.

18 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಗಟು ಹಣದುಬ್ಬರ 2 ಅಂಕಿಗಳಿಗಿಂತ ಕಡಿಮೆ ದಾಖಲಾಗಿದೆ. ಮೇ.2022 ರಲ್ಲಿ ಡಬ್ಲ್ಯುಪಿಐ ಶೇ.15.88 ಕ್ಕೆ ಏರಿತ್ತು ಇದಕ್ಕೂ ಮೊದಲು 2021 ರ ಅಕ್ಟೋಬರ್ ತಿಂಗಳಲ್ಲಿ ಶೇ.13.83 ರಷ್ಟಿತ್ತು. ಖನಿಜ ತೈಲಗಳ ಬೆಲೆ ಇಳಿಕೆ, ಮೂಲ ಲೋಹಗಳು, ತಯಾರಿಸಿದ ಲೋಹದ ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಹೊರತುಪಡಿಸಿ, ಜವಳಿ, ಇತರ ಲೋಹವಲ್ಲದ ಖನಿಜ ಉತ್ಪನ್ನಗಳು, ಖನಿಜಗಳು ಮುಂತಾದ ಪದಾರ್ಥಗಳ ಬೆಲೆ ಇಳಿಕೆಯಾಗಿದ್ದರಿಂದ ಅಕ್ಟೋಬರ್ 2022 ರ ಹಣದುಬ್ಬರ ಕುಸಿತ ಕಂಡಿದೆ ಎಂದು ಅಧಿಕೃತ ಪ್ರಕಟನೆಯಲ್ಲಿ ಸರ್ಕಾರ ತಿಳಿಸಿದೆ.

ಪ್ರಾಥಮಿಕ ಪದಾರ್ಥಗಳ ಹಣದುಬ್ಬರ ಶೇ.11.-04 ರಷ್ಟಿದ್ದರೆ, ಆಹಾರ ಪದಾರ್ಥಗಳ ಹಣದುಬ್ಬರ 2021 ರ ಅಕ್ಟೋಬರ್ ನಲ್ಲಿ ಶೇ.8.33 ರಷ್ಟಿತ್ತು. ಈ ಅಂಕಿ-ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಆರ್ ಇ ರೇಟಿಂಗ್ಸ್ ನ ಮುಖ್ಯ ಅರ್ಥಶಾಸ್ತ್ರಜ್ಞ ರಣಜಿ ಸಿನ್ಹಾ, 18 ತಿಂಗಳಲ್ಲಿ ಮೊದಲ ಬಾರಿಗೆ ಡಬ್ಲ್ಯುಪಿಐ ಹಣದುಬ್ಬರ ಒಂದು ಅಂಕಿಗೆ ಕುಸಿದಿದೆ. ಡಬ್ಲ್ಯುಪಿಐ ಹಣದುಬ್ಬರ ಕುಸಿತಕ್ಕೆ ಜಾಗತಿಕ ಸರಕು ಬೆಲೆಗಳಲ್ಲಿ ಇಳಿಕೆ ಮತ್ತು ಅನುಕೂಲಕರ ಬೇಸ್ ಗಳು ಮತ್ತಷ್ಟು ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.

ದುರ್ಬಲ ರೂಪಾಯಿ ಹಾಗೂ ಆಹಾರ ಹಣದುಬ್ಬರದಿಂದ ಆಮದು ಹಣದುಬ್ಬರ ಹೆಚ್ಚಾಗಲಿದ್ದು ಸಗಟು ಡಬ್ಲ್ಯುಪಿಐ ಹಣದುಬ್ಬರದ ಮೇಲಿನ ಒತ್ತಡ ಇನ್ನೂ ಕೆಲ ಕಾಲ ಮುಂದುವರೆಯಲಿದೆ 2023 ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಸಿಪಿಐ ಹಣದುಬ್ಬರ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT