ದೇಶ

ರಸ್ತೆ ಬದಿಯ ಟೀ ಸ್ಟಾಲ್ ಬಳಿ ಬೆಂಗಾವಲು ಪಡೆ ನಿಲ್ಲಿಸಿ, ಜನರಿಗೆ ಪಕೋಡಾ ಹಂಚಿದ ಸಿಎಂ ಮಮತಾ: ವಿಡಿಯೋ

Nagaraja AB

ಕೊಲ್ಕತ್ತಾ: ನೇರ ನಡೆ, ನುಡಿ, ನಿಷ್ಠುರ ನಡವಳಿಕೆಯಿಂದ ದೇಶಾದ್ಯಂತ ಹೆಸರುವಾಸಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲವೊಂದು ವಿಶಿಷ್ಠ ಕಾರಣಗಳಿಂದಲೂ ಆಗಾಗ್ಗೆ ಸುದ್ದಿಯಾಗುತ್ತಾರೆ.

ಇಂದು ಕೂಡಾ ಆದೇ ರೀತಿಯಲ್ಲಿ ಜನರಿಗೆ ಪಕೋಡಾ ಹಂಚುವ ಮೂಲಕ ಪರೋಕ್ಷವಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಹೌದು. ಜಾರ್ಗ್ರಾಮ್ ನ ರಸ್ತೆ ಬದಿಯ ಟೀ ಸ್ಟಾಲ್ ವೊಂದರ ಬಳಿ ಬೆಂಗಾವಲು ಪಡೆಯನ್ನು ನಿಲ್ಲಿಸಿದ ಮಮತಾ ಬ್ಯಾನರ್ಜಿ, ಅಲ್ಲಿದ್ದ ಜನರಿಗೆ ಪಕೋಡಾ ಹಂಚಲು ಆರಂಭಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
 

SCROLL FOR NEXT