ಶಶಿ ತರೂರ್ 
ದೇಶ

'ರೋಗಗ್ರಸ್ಥ ಮನಸ್ಸುಗಳು': ಮಹಿಳೆಯೊಂದಿಗಿರುವ ಫೋಟೋ ಟ್ರೋಲ್; ಕಿಡಿಕಾರಿದ ಶಶಿ ತರೂರ್

ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಂದಿಗೆ ಇರುವ ಫೋಟೋವನ್ನು ಟ್ರೋಲ್ ಮಾಡಿದ ಟ್ರೋಲರ್ ಗಳ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಬುಧವಾರ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಂದಿಗೆ ಇರುವ ಫೋಟೋವನ್ನು ಟ್ರೋಲ್ ಮಾಡಿದ ಟ್ರೋಲರ್ ಗಳ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಬುಧವಾರ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಶಶಿತರೂರು ಅವರು, 'ತಮ್ಮ ನಿಂದನೆಯಲ್ಲಿ ನಿಜವಾದ ಮನುಷ್ಯರು ಭಾಗಿಯಾಗಿದ್ದಾರೆಯೇ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು’ ಎಂದು ಕಿಡಿಕಾರಿದ್ದಾರೆ.

ಟ್ರೋಲ್ ನಂತರ ತರೂರ್ ಅವರೊಂದಿಗಿನ ಚಿತ್ರಗಳನ್ನು ತೆಗೆದ ಮಹಿಳೆಯೊಬ್ಬರು ಟ್ವೀಟ್ ಮೂಲಕ ಕಾಮೆಂಟ್‌ ಮಾಡಿದ್ದು. “ಬಲಪಂಥೀಯ ಜನರು ತರೂರ್ ಸರ್ ಅವರೊಂದಿಗಿನ ನನ್ನ ಚಿತ್ರಗಳನ್ನು ಹೇಗೆ ತಪ್ಪು ಸಂದರ್ಭದಲ್ಲಿ ಬಳಸುತ್ತಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬುದು ನನ್ನ ಹೃದಯವನ್ನು ಒಡೆಯುತ್ತದೆ” ಎಂದು ಹೇಳಿದ್ದಾರೆ. ಅಂತೆಯೇ ಸಾಹಿತ್ಯೋತ್ಸವದಲ್ಲಿ ತರೂರ್ ಅವರನ್ನು ಭೇಟಿಯಾದೆ ಎಂದು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

”ಯಾವುದೇ ಇತರ ಜನರಂತೆ ನಾನು ಶ್ರೇಷ್ಠ ಲೇಖಕರೊಂದಿಗೆ ಕೆಲವು ಚಿತ್ರಗಳನ್ನು ಕ್ಲಿಕ್ ಮಾಡಿದ್ದೇನೆ. ಇದಕ್ಕೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಕಥೆಗಳಿಲ್ಲ. ನಾನು ಯಾವಾಗಲೂ ಅವರನ್ನು ನೋಡುತ್ತಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ತಿರುವನಂತಪುರಂನ ಕಾಂಗ್ರೆಸ್ ಸಂಸದ, ಲೇಖಕ ತರೂರ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಅವರ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದು ”ನಿಮ್ಮ ನಿಂದನೆಯಲ್ಲಿ ನಿಜವಾದ ಮನುಷ್ಯರು ಭಾಗಿಯಾಗಿದ್ದಾರೆಂಬುದನ್ನು ರಾಕ್ಷಸರು ಅರಿತುಕೊಳ್ಳಬೇಕು. “ಈ ಚಿಕ್ಕ ಹುಡುಗಿ ನೂರಕ್ಕೂ ಹೆಚ್ಚು ಜನರಿದ್ದ ಕಾರ್ಯಕ್ರಮದಲ್ಲಿ ತೆಗೆದ ಮುಗ್ಧ ಚಿತ್ರಕ್ಕಾಗಿ ನೊಂದಿದ್ದಾರೆ, ಅದರಲ್ಲಿ ನಾನು ಐವತ್ತಕ್ಕೂ ಹೆಚ್ಚು ಫೋಟೋಗಳಿಗೆ ಪೋಸ್ ನೀಡಿರಬೇಕು! ನಿಮ್ಮ ರೋಗಗ್ರಸ್ಥ ಮನಸ್ಸನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ, ರಾಕ್ಷಸರೆ!” ಎಂದು ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT