ದೇಶ

ಜಮ್ಮು-ಕಾಶ್ಮೀರ: ಆರ್ ಎಸ್ ಪುರ ವಲಯದಲ್ಲಿ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆ

Sumana Upadhyaya

ಶ್ರೀನಗರ: ಪಾಕಿಸ್ತಾನದ ನುಸುಳುಕೋರನನ್ನು ಭದ್ರತಾ ಪಡೆ ಪೊಲೀಸರು ಮಂಗಳವಾರ ನಸುಕಿನ ಜಾವ ಕೊಂದು ಹಾಕಿದ್ದಾರೆ. 

ಈತ ಜಮ್ಮುವಿನ ಆರ್ ಎಸ್ ಪುರ ವಲಯದ ಅಂತಾರಾಷ್ಟ್ರೀಯ ಗಡಿಯ ಮೂಲಕ ಒಳನುಸುಳಿದ್ದ. ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಬೇಲಿಯ ಹತ್ತಿರ ಸಮೀಪಿಸುವಾಗ ಅವನಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಆತ ಲೆಕ್ಕಿಸದೆ ಒಳನುಸುಳಿದಾಗ ಭದ್ರತಾ ಪಡೆ ಗುಂಡಿಕ್ಕಿ ಕೊಂದು ಹಾಕಿತು. 

ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದಿಂದ ಇದುವರೆಗೆ ದಾಳಿ ನಡೆದಿಲ್ಲ. ಪ್ರದೇಶವನ್ನು ಸುತ್ತುವರಿಯಲಾಗಿದ್ದು ಶೋಧಕಾರ್ಯ ಮುಂದುವರಿದಿದೆ ಎಂದು ಹಿರಿಯ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT