ದೇಶ

ಅಂಬೇಡ್ಕರ್ ಜೀವನ ಕುರಿತ ಶಶಿ ತರೂರ್ ರ ಪುಸ್ತಕ ಗುರುವಾರ ಬಿಡುಗಡೆ

Nagaraja AB

ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜೀವನ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತೂರೂರ್ ಬರೆದಿರುವ ಪುಸ್ತಕ ಗುರುವಾರ ಬಿಡುಗಡೆಯಾಗಲಿದೆ.

ತೀನ್ ಮೂರ್ತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ  ಪುಸ್ತಕ ಲೋಕಾರ್ಪಣೆಯಾಗಲಿದೆ. ಕಾಂಗ್ರೆಸ್ ಗೆ ಸುಸ್ಥಿರತೆ ತರುವ ನಿಟ್ಟಿನಲ್ಲಿ ಅವರು ಪ್ರಯತ್ನಿಸಲಿಲ್ಲ ಎಂದು ಅವರು ಪುಸ್ತಕದಲ್ಲಿ ಬರೆದಿದ್ದಾರೆ. 

ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮದನ್ ಲೊಕುರ್, ಶಿಕ್ಷಣ ತಜ್ಞ ಡಾ. ಬಾಲಚಂದ್ರ ಮತ್ತು ಸುಪ್ರೀಂಕೋರ್ಟ್ ವಕೀಲ ಕರುಣಾ ನುಂದಿ ಮತ್ತಿತರೊಂದಿಗೆ ಶಶಿ ತರೂರ್ ಸಂವಾದ ನಡೆಸಲಿದ್ದಾರೆ. 

ನೀವು ಈ ಪುಸ್ತಕ ಬಿಡುಗಡೆಯ ಸಂವಾದದಲ್ಲಿ ಆಸಕ್ತಿ ಹೊಂದಿದ್ದರೆ publicity@alephbookcompany.com ಅಥವಾ delhi@pkfoundation.org ಇಮೇಲ್ ಮಾಡಬಹುದು. 

ಶಶಿ ತರೂರ್ ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದು,  ದಲಿತ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದಾರೆ.

SCROLL FOR NEXT