ಏಕನಾಥ್ ಶಿಂಧೆ 
ದೇಶ

ಮಹಾ ಉಪ ಚುನಾವಣೆ: ಶಿಂಧೆ ಬಣಕ್ಕೆ ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ನೀಡಿದ ಚುನಾವಣಾ ಆಯೋಗ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ‘ಎರಡು ಕತ್ತಿಗಳು ಮತ್ತು ಗುರಾಣಿ’ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ...

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ‘ಎರಡು ಕತ್ತಿಗಳು ಮತ್ತು ಗುರಾಣಿ’ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಆಯೋಗವು ಈಗಾಗಲೇ ಅವರ ಗುಂಪಿಗೆ “ಬಾಳಾಸಾಹೆಬಂಚಿ ಶಿವಸೇನಾ” ಎಂಬ ಹೆಸರನ್ನು ಸಹ ನೀಡಿದೆ.

ಶಿಂಧೆ ಬಣ ಸೂಚಿಸಿದ “ಧಲ್ ತಲ್ವಾರ್” ಉಚಿತ ಚಿಹ್ನೆಗಳ ಪಟ್ಟಿಯಲ್ಲಿಲ್ಲ ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.

ಇದು 2004 ರಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲಾಗಿದ್ದ ‘ಪೀಪಲ್ಸ್ ಡೆಮಾಕ್ರಟಿಕ್ ಮೂವ್ ಮೆಂಟ್ ನ ಹಿಂದೆ ಕಾಯ್ದಿರಿಸಿದ ಚಿಹ್ನೆ ‘ದೋ ತಲ್ವಾರಿನ್ ಔರ್ ಏಕ್ ಧಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಹೋಲುತ್ತದೆ… ನಿಮ್ಮ ವಿನಂತಿಯನ್ನು ದಿನಾಂಕ 11.10.2022 ರಂದು ಸ್ವೀಕರಿಸಿದ ನಂತರ ‘ದೋ ತಲ್ವಾರಿನ್ ಔರ್ ಏಕ್ ಧಾಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಉಚಿತ ಚಿಹ್ನೆ ಎಂದು ಘೋಷಿಸಲು ನಿರ್ಧರಿಸಿದೆ ಮತ್ತು ವಿವಾದದಲ್ಲಿ ಅಂತಿಮ ಆದೇಶವನ್ನು ಅಂಗೀಕರಿಸುವವರೆಗೆ ಅದನ್ನು ಹಂಚಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆಯಲ್ಲಿ ತಿಳಿಸಿದೆ.

ಏಕನಾಥ್ ಶಿಂಧೆ ಮತ್ತು ಅವರ ಎದುರಾಳಿ ಉದ್ಧವ್ ಠಾಕ್ರೆ ಅವರಿಗೆ ಚುನಾವಣಾ ಆಯೋಗ ಹೊಸ ಹೆಸರು ಮತ್ತು ಚಿಹ್ನೆಗಳನ್ನು ನೀಡಿದೆ. ನಿಜವಾದ ಸೇನೆಗಾಗಿ ಹೋರಾಡುತ್ತಿರುವ ಠಾಕ್ರೆ ಮತ್ತು ಶಿಂಧೆ ಉಪಚುನಾವಣೆಯಲ್ಲಿ ಪಕ್ಷದ ಬಿಲ್ಲು- ಬಾಣ ಚಿಹ್ನೆ ಪಡೆಯಲು ಮುಂದಾಗಿದ್ದರು. ಆದರೆ ಇದನ್ನು ಆಯೋಗ ತಡೆಹಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!