ಏಕನಾಥ್ ಶಿಂಧೆ 
ದೇಶ

ಮಹಾ ಉಪ ಚುನಾವಣೆ: ಶಿಂಧೆ ಬಣಕ್ಕೆ ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ನೀಡಿದ ಚುನಾವಣಾ ಆಯೋಗ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ‘ಎರಡು ಕತ್ತಿಗಳು ಮತ್ತು ಗುರಾಣಿ’ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ...

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಚಿಹ್ನೆಯಾಗಿ ‘ಎರಡು ಕತ್ತಿಗಳು ಮತ್ತು ಗುರಾಣಿ’ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಆಯೋಗವು ಈಗಾಗಲೇ ಅವರ ಗುಂಪಿಗೆ “ಬಾಳಾಸಾಹೆಬಂಚಿ ಶಿವಸೇನಾ” ಎಂಬ ಹೆಸರನ್ನು ಸಹ ನೀಡಿದೆ.

ಶಿಂಧೆ ಬಣ ಸೂಚಿಸಿದ “ಧಲ್ ತಲ್ವಾರ್” ಉಚಿತ ಚಿಹ್ನೆಗಳ ಪಟ್ಟಿಯಲ್ಲಿಲ್ಲ ಎಂದು ಆಯೋಗವು ತನ್ನ ಪತ್ರದಲ್ಲಿ ತಿಳಿಸಿದೆ.

ಇದು 2004 ರಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲಾಗಿದ್ದ ‘ಪೀಪಲ್ಸ್ ಡೆಮಾಕ್ರಟಿಕ್ ಮೂವ್ ಮೆಂಟ್ ನ ಹಿಂದೆ ಕಾಯ್ದಿರಿಸಿದ ಚಿಹ್ನೆ ‘ದೋ ತಲ್ವಾರಿನ್ ಔರ್ ಏಕ್ ಧಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಹೋಲುತ್ತದೆ… ನಿಮ್ಮ ವಿನಂತಿಯನ್ನು ದಿನಾಂಕ 11.10.2022 ರಂದು ಸ್ವೀಕರಿಸಿದ ನಂತರ ‘ದೋ ತಲ್ವಾರಿನ್ ಔರ್ ಏಕ್ ಧಾಲ್ (ಎರಡು ಕತ್ತಿಗಳು ಮತ್ತು ಗುರಾಣಿ)’ ಅನ್ನು ಉಚಿತ ಚಿಹ್ನೆ ಎಂದು ಘೋಷಿಸಲು ನಿರ್ಧರಿಸಿದೆ ಮತ್ತು ವಿವಾದದಲ್ಲಿ ಅಂತಿಮ ಆದೇಶವನ್ನು ಅಂಗೀಕರಿಸುವವರೆಗೆ ಅದನ್ನು ಹಂಚಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆಯಲ್ಲಿ ತಿಳಿಸಿದೆ.

ಏಕನಾಥ್ ಶಿಂಧೆ ಮತ್ತು ಅವರ ಎದುರಾಳಿ ಉದ್ಧವ್ ಠಾಕ್ರೆ ಅವರಿಗೆ ಚುನಾವಣಾ ಆಯೋಗ ಹೊಸ ಹೆಸರು ಮತ್ತು ಚಿಹ್ನೆಗಳನ್ನು ನೀಡಿದೆ. ನಿಜವಾದ ಸೇನೆಗಾಗಿ ಹೋರಾಡುತ್ತಿರುವ ಠಾಕ್ರೆ ಮತ್ತು ಶಿಂಧೆ ಉಪಚುನಾವಣೆಯಲ್ಲಿ ಪಕ್ಷದ ಬಿಲ್ಲು- ಬಾಣ ಚಿಹ್ನೆ ಪಡೆಯಲು ಮುಂದಾಗಿದ್ದರು. ಆದರೆ ಇದನ್ನು ಆಯೋಗ ತಡೆಹಿಡಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT