ಯೋಗಿ ಆದಿತ್ಯನಾಥ 
ದೇಶ

ನೋಯ್ಡಾ ವಿಮಾನ ನಿಲ್ದಾಣ ಭೂಸ್ವಾಧೀನ: ಸಿಎಂ ಆದಿತ್ಯನಾಥ್ ಭಾವನಾತ್ಮಕ ಮನವಿಗೂ ಜಗ್ಗದ ರೈತರು!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಹೆಚ್ಚಳದ ಭರವಸೆ ನೀಡಿದರೂ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಲು ರೈತರು ನಿರಾಕರಿಸುತ್ತಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

ನೋಯ್ಡಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಹೆಚ್ಚಳದ ಭರವಸೆ ನೀಡಿದರೂ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಲು ರೈತರು ನಿರಾಕರಿಸುತ್ತಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಮೊದಲ ಹಂತವು ಪೂರ್ಣಗೊಂಡಿದ್ದು ಈ ವಿಮಾನ ನಿಲ್ದಾಣ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದ್ದು ಅಂದಾಜು 29,560 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 75 ಕಿಮೀ ದೂರದಲ್ಲಿರುವ ಪಶ್ಚಿಮ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಜೆವಾರ್ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ.

ಯುಪಿ ಸರ್ಕಾರದ ಮೆಗಾ ವಿಮಾನ ನಿಲ್ದಾಣ ​​ಯೋಜನೆಯೂ ಈ ವರ್ಷದ ಆರಂಭದಲ್ಲಿ ಪ್ರಕ್ಷುಬ್ಧತೆ ಉಂಟುಮಾಡಿತ್ತು. ಅಧಿಕಾರಿಗಳ ಪ್ರಕಾರ, ಆರು ಹಳ್ಳಿಗಳ ರೈತರು ಪರಿಹಾರದ ಹೊರತಾಗಿಯೂ ತಮ್ಮ ಜಮೀನನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು. ಇನ್ನು ವಿಮಾನ ನಿಲ್ದಾಣದ ಎರಡನೇ ಹಂತದ ಅಭಿವೃದ್ಧಿಗೆ ರಣಹೇರಾ, ಕುರೇಬ್, ದಯಾನತ್‌ಪುರ್, ಕರೌಲಿ ಬಂಗಾರ್, ಮುಂಡ್ರಾ ಮತ್ತು ಬಿರಾಮ್‌ಪುರ ಎಂಬ ಆರು ಗ್ರಾಮಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ಸ್ವಾಧೀನ, ಪುನರ್ವಸತಿ ಕಾಯ್ದೆ 2013ರ ಪ್ರಕಾರ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕುಗಳ ಪ್ರಕಾರ, ಸ್ವಾಧೀನಪಡಿಸಿಕೊಳ್ಳಲು ಕನಿಷ್ಠ 70 ಪ್ರತಿಶತ ಭೂ ಮಾಲೀಕರ ಒಪ್ಪಿಗೆ ಅಗತ್ಯವಿದೆ. ಸರ್ಕಾರವು ಭೂಸ್ವಾಧೀನವನ್ನು ಮುಂದುವರಿಸಲು ಪರಿಹಾರದ ದರ, ಪುನರ್ವಸತಿ ಮತ್ತು ಪುನರ್ವಸತಿ ಸೌಲಭ್ಯಗಳಂತಹ ಹಲವಾರು ಇತರ ವೈಶಿಷ್ಟ್ಯಗಳನ್ನು ಕಾನೂನು ಕಡ್ಡಾಯಗೊಳಿಸುತ್ತದೆ.

ಕಳೆದ ಅಕ್ಟೋಬರ್ 14ರಂದು ಜೇವರ್ ಶಾಸಕ ಧೀರೇಂದ್ರ ಸಿಂಗ್ ಸುಮಾರು 200 ರೈತರ ನೇತೃತ್ವದಲ್ಲಿ ಲಖನೌಗೆ ತೆರಳಿ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿಗಳು ಚದರ ಮೀಟರ್‌ಗೆ 3,400 ರೂ.ಗಳ(ಬಡ್ಡಿ ಮೊತ್ತವನ್ನು ಒಳಗೊಂಡಂತೆ) ಹೆಚ್ಚಿಸಿದ ಪರಿಹಾರದ ಭರವಸೆ ನೀಡಿದರೂ ರೈತರು ತಮ್ಮ ಜಮೀನು ನೀಡಲು ನಿರಾಕರಿಸಿದ್ದಾರೆ.

ಜೇವರ್‌ನ ಜನರು ತನಗೆ 'ಕುಟುಂಬದಂತೆ' ಎಂದು ಒತ್ತಿ ಹೇಳಿದ ಆದಿತ್ಯನಾಥ್, 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆ ನಿಮ್ಮ ಪೀಳಿಗೆಗೆ ಇರುತ್ತದೆ ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದರೂ ರೈತರು ಇದಕ್ಕೆ ಜಗ್ಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT