ಪ್ರಾತಿನಿಧಿಕ ಚಿತ್ರ 
ದೇಶ

ಕೇರಳ: ಓಣಂ ಸಂದರ್ಭ ಒಂದು ವಾರದಲ್ಲಿ 624 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿದ ಬೆವ್ಕೋ

ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್‌ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.

ತಿರುವನಂತಪುರಂ: ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್‌ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.

ಕೇರಳದ ಐದು ಮಳಿಗೆಗಳಾದ ಕೊಲ್ಲಂನ ಆಶ್ರಮಮ್, ತಿರುವನಂತಪುರಂನ ಪವರ್ ಹೌಸ್ ರಸ್ತೆ, ತ್ರಿಶ್ಶೂರ್‌ನ ಇರಿಂಜಲಕುಡ, ಚೆರ್ತಲದ ಕೋರ್ಟ್ ಜಂಕ್ಷನ್ ಮತ್ತು ಕಣ್ಣೂರಿನ ಪಯ್ಯನ್ನೂರ್‌ಗಳಲ್ಲಿ ಸೆಪ್ಟೆಂಬರ್ 7 ರ 'ಉತ್ರಾಡಮ್ ದಿನ'ದಂದು ಅಂದರೆ ಓಣಂಗೂ ಒಂದು ದಿನ ಮೊದಲು ತಲಾ ಒಂದು ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಆಶ್ರಮಮ್ ಔಟ್ಲೆಟ್‌ನಲ್ಲಿ ಬುಧವಾರದಂದು 1.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.

ಈ ಉತ್ರಾಡಮ್ ದಿನದಂದು ಬೆವ್ಕೋ ದಾಖಲೆಯ 118 ಕೋಟಿ ರೂಪಾಯಿಯ ಮದ್ಯ ಮಾರಾಟ ಮಾಡಿದೆ. ಕಳೆದ ವರ್ಷ ಇದು 81 ಕೋಟಿ ರೂಪಾಯಿ ಆಗಿತ್ತು. ಅಂದು ಕೆಲವು ಮಳಿಗೆಗಳಲ್ಲಿ 10,000ಕ್ಕೂ ಹೆಚ್ಚು ಜನರು ಸೇರಿದ್ದರು. ಸೆಪ್ಟೆಂಬರ್ 1 ರಿಂದ 11 ರವರೆಗೆ ಓಣಂ ಸೀಸನ್. ಹೀಗಾಗಿ ಸೆಪ್ಟೆಂಬರ್ 1 ರಿಂದ 7 ರ ಅವಧಿಯಲ್ಲಿ ನಾವು ದಾಖಲೆಯ 624 ಕೋಟಿ ರೂಪಾಯಿಯ ಮಾರಾಟವನ್ನು ಹೊಂದಿದ್ದೇವೆ ಎಂದು ಬೆವ್ಕೊ ಸಿಎಂಡಿ ಯೋಗೇಶ್ ಗುಪ್ತಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಓಣಂ ಋತುವಿನಲ್ಲಿ 561 ಕೋಟಿ ರೂ. ಆಗಿತ್ತು. ಆದರೆ, ಈ ಬಾರಿ ಓಣಂ ಸೀಸನ್ ಮುಗಿಯದಿದ್ದರೂ ಈಗಾಗಲೇ 634 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿದೆ. 'ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಶೇ 30 ರಷ್ಟು ಹೆಚ್ಚಳವಾಗಿದ್ದು, ಈ ಓಣಂ ಋತುವಿನ ಅಂತ್ಯದ ವೇಳೆಗೆ ನಾವು 750 ಕೋಟಿ ರೂಪಾಯಿಗಳ ಮಾರಾಟವನ್ನು ನಿರೀಕ್ಷಿಸಿದ್ದೇವೆ' ಎಂದು ಗುಪ್ತಾ ಹೇಳಿದರು.

ರಾಜ್ಯಾದ್ಯಂತ 301 ಸರ್ಕಾರಿ ಮದ್ಯದಂಗಡಿಗಳಿವೆ. 2020 ರಲ್ಲಿ ಸರ್ಕಾರವು ಹೆಚ್ಚುವರಿ ಆದಾಯವನ್ನು ಪಡೆಯಲು ಮದ್ಯದ ಬೆಲೆಯನ್ನು ಶೇ 10-35 ರಷ್ಟು ಹೆಚ್ಚಿಸಿತು.

ಸದ್ಯ ಐಎಂಎಲ್‌ಎಫ್ (ಭಾರತೀಯ ನಿರ್ಮಿತ ವಿದೇಶಿ ಮದ್ಯ) ಮೇಲಿನ ಮಾರಾಟ ತೆರಿಗೆಯು 400 ರೂ.ವರೆಗಿನ ಬ್ರಾಂಡ್‌ಗಳಿಗೆ ಶೇ 237 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮದ್ಯಕ್ಕೆ ಶೇ 247 ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT