ದೇಶ

ಕರ್ನಾಟಕದಲ್ಲಿ 'ಅಮುಲ್'ಗೆ ವಿರೋಧ, ಕೇರಳದಲ್ಲಿ 'ನಂದಿನಿ' ನಮಗೆ ಬೇಡ ಅಂತಿದ್ದಾರೆ ಕೇರಳಿಗರು!

Sumana Upadhyaya

ತಿರುವನಂತಪುರ: ಕರ್ನಾಟಕದಲ್ಲಿ ಗುಜರಾತ್ ಮೂಲದ ಅಮುಲ್ ಹಾಲಿನ ಪ್ರವೇಶಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆ ಹೊತ್ತಿನಲ್ಲಿ ವಿರೋಧ ಪಕ್ಷಗಳು ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿವೆ. 

ಇನ್ನೊಂದೆಡೆ ಕರ್ನಾಟಕ ಹಾಲು ಮಾರಾಟ ಒಕ್ಕೂಟವು ತನ್ನ ನಂದಿನಿ ಬ್ರಾಂಡ್ ನ್ನು ನೆರೆಯ ಕೇರಳ ರಾಜ್ಯಕ್ಕೆ ಪರಿಚಯಿಸುತ್ತಿದೆ. ಕೇರಳದ ಅಸ್ಮಿತೆಯಾದ ಮಿಲ್ಮಾ ಬ್ರ್ಯಾಂಡ್‌ನಿಂದ ಕರೆಯಲ್ಪಡುವ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟಕ್ಕೆ (KCMMF) ಇದು ಎಚ್ಚರಿಕೆಯ ಗಂಟೆಯಾಗಿದೆ. 

ಕೇರಳ ರಾಜ್ಯದಲ್ಲಿ ಹಾಲು ಮಾರಾಟದಲ್ಲಿ ಏಕಸ್ವಾಮ್ಯವನ್ನು ಹೊಂದಿರುವ ಕೆಸಿಎಂಎಂಫ್, ನೆರೆಯ ರಾಜ್ಯದ ಬ್ರಾಂಡ್‌ನ ಪ್ರವೇಶವನ್ನು ತನ್ನ ವ್ಯಾಪಾರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂದು ನೋಡುತ್ತಿದೆ. 

ಮಿಲ್ಮಾ ಅಧ್ಯಕ್ಷೆ ಕೆ ಎಸ್ ಮಣಿ, ಕರ್ನಾಟಕ ಹಾಲು ಮಾರಾಟ ಫೆಡರೇಶನ್ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಮತ್ತು ಸಹಕಾರ ಮನೋಭಾವವನ್ನು ಉಲ್ಲಂಘಿಸುತ್ತಿದೆ ಎಂದು ಹೇಳುತ್ತಾರೆ. ರಾಜ್ಯ ಪ್ರದೇಶವನ್ನು ಉಲ್ಲಂಘಿಸುವ ಪ್ರವೃತ್ತಿಯು ರಾಜ್ಯಗಳ ನಡುವೆ ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮ್ಮತವನ್ನು ರೂಪಿಸಲು ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. 

ಇತ್ತೀಚೆಗೆ ನಂದಿನಿ ಬ್ರ್ಯಾಂಡ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಕೇರಳದಲ್ಲಿ ಮಾರಾಟ ಮಾಡಲು ವಿವಿಧ ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆದಿದೆ. 

ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯುವ ಮೂಲಕ ಅಥವಾ ಫ್ರಾಂಚೈಸಿಗಳಲ್ಲಿ ನೀಡುವ ಮೂಲಕ ಒಬ್ಬರ ಸ್ವಾಧೀನದ ಹೊರಗಿನ ಮಾರುಕಟ್ಟೆಗಳನ್ನು ಪ್ರವೇಶಿಸುವ ಪ್ರವೃತ್ತಿಯನ್ನು ತಪ್ಪಿಸಬೇಕು ಎಂದು ಅವರು ಹೇಳುತ್ತಾರೆ.

SCROLL FOR NEXT