ಸನ್ನಿ ಡಿಯೋಲ್ 
ದೇಶ

ನಟ ಸನ್ನಿ ಡಿಯೋಲ್ ಬಂಗಲೆ ಹರಾಜು ಹಿಂಪಡೆದ ಬ್ಯಾಂಕ್ ಆಫ್ ಬರೋಡಾ: ಕಾರಣ ಕೇಳಿದ ಕಾಂಗ್ರೆಸ್

ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ಬಾಲಿವುಡ್ ​ ನಟ ಸನ್ನಿ ಡಿಯೋಲ್ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್​ ಮನೆ ಹರಾಜಿನ‌ ನೋಟೀಸ್ ಹಿಂಪಡೆದಿದೆ

ಮುಂಬೈ: ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ಬಾಲಿವುಡ್ ​ ನಟ ಸನ್ನಿ ಡಿಯೋಲ್ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್​ ಮನೆ ಹರಾಜಿನ‌ ನೋಟೀಸ್ ಹಿಂಪಡೆದಿದೆ. ತಾಂತ್ರಿಕ ಕಾರಣಗಳ ಹಿನ್ನಲೆಯಲ್ಲಿ ಮನೆ ಹರಾಜಿನ‌ ನೋಟೀಸ್  ವಾಪಸ್ ಪಡೆದುಕೊಂಡಿದೆ.

ಬಾಲಿವುಡ್ ನಟ ಸನ್ನಿ ಡಿಯೋಲ್ ಮುಂಬೈನ ಜುಹು ಬಂಗಲೆಯ ಮೇಲೆ 56 ಕೋಟಿ ರೂಪಾಯಿಯನ್ನು ಬ್ಯಾಂಕ್​ ಆಪ್​ ಬರೋಡಾದ ಮೂಲಕ ಸಾಲ ಪಡೆದುಕೊಂಡಿದ್ದರು. ಬ್ಯಾಂಕ್​ ಆಫ್​ ಬರೋಡಾಗೆ ಸನ್ನಿ ಡಿಯೋಲ್​ 56 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. ಆದರೆ ಸಾಲ ಮರುಪಾವತಿಸದೇ ಇರುವ ಕಾರಣ ಸೆಪ್ಟೆಂಬರ್ 25 ರಂದು ಮನೆಯನ್ನು ಹರಾಜು ಹಾಕುವುದಾಗಿ ಬ್ಯಾಂಕ್​ ಜಾಹೀರಾತು ನೀಡಿತ್ತು.

ಇನ್ನು ಈ ಬಗ್ಗೆ ಕಾಂಗ್ರೆಸ್​ ವಕ್ತಾರ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಯಾರ ಕಾರಣದಿಂದ ಮನೆ ಹರಾಜಿನ ನೋಟೀಸ್ ವಾಪಸ್ ಪಡೆಯಲಾಯ್ತು, ಇದನ್ನೂ ದೇಶದ ಜನತೆ ತಿಳಿಯಬೇಕು ಎಂದು ಹೇಳಿದ್ದಾರೆ. ನಿನ್ನೆ ಹರಾಜು ನೋಟಿಸ್ ನೀಡಲಾಗಿತ್ತು, 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, 'ತಾಂತ್ರಿಕ ಕಾರಣಗಳಿಂದ' ಬ್ಯಾಂಕ್ ಆಫ್ ಬರೋಡಾ ಹರಾಜು ನೋಟಿಸ್  ಹಿಂಪಡೆದಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದಾರೆ.

ಸನ್ನಿ ಡಿಯೋಲ್ ಅಭಿನಯದ ಗದ್ದರ್-2 ಸಿನಿಮಾ ಬಿಡುಗಡೆಗೊಂಡು ಭರ್ಜರಿಯಾಗಿ ಪ್ರದರ್ಶನ‌ ಕಾಣುತ್ತಿದೆ. ಆದರೆ ಇದರ ನಡುವೆ ಸನ್ನಿ ಡಿಯೋಲ್ ಮನೆ ಹರಾಜಿಗೆ ಬಂದು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಬೇಗನೇ 56 ಕೋಟಿ ರೂಪಾಯಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದರೆ ಮನೆಯನ್ನು ಹಿಂತಿರುಗಿ ಪಡೆಯಬಹುದು ಎಂದು ಹೇಳಲಾಗಿತ್ತು. ಆದರೆ ಈ ಮಾತುಗಳ ನಡುವೆ ಬ್ಯಾಂಕ್​ ಆಫ್​ ಬರೋಡಾ ತಾನು ಹೊರಡಿಸಿದ್ದ ಹರಾಜು ಜಾಹೀರಾತನ್ನು ಹಿಂಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT