ಮಿಚಾಂಗ್ ಚಂಡಮಾರುತದಿಂದ ಚೆನ್ನೈನ ಮಾಧವರಂ ಸರ್ಕಲ್ ನ ದೃಶ್ಯ 
ದೇಶ

ಮಿಚಾಂಗ್ ಚಂಡಮಾರುತ ಹವಾಮಾನ ಬದಲಾವಣೆಯ ಸ್ಪಷ್ಟ ಸೂಚನೆ: ತಜ್ಞರ ಅಭಿಮತ

ಹವಾಮಾನ ಬದಲಾವಣೆಯ ಮಾತುಕತೆಗಳು ದುಬೈನಲ್ಲಿ ಇತ್ತೀಚೆಗೆ ಸಿಒಪಿ 28ನಲ್ಲಿ ನಡೆಯುತ್ತಿರುವಂತೆ, ಸುಮಾರು 3,000 ಕಿಮೀ ದೂರದಲ್ಲಿರುವ ಚೆನ್ನೈ ಮಿಚಾಂಗ್ ನ ತೀವ್ರ ಚಂಡಮಾರುತಕ್ಕೆ ಸಿಕ್ಕಿ ನಲುಗಿಹೋಗಿದೆ. 

ದುಬೈ: ಹವಾಮಾನ ಬದಲಾವಣೆಯ ಮಾತುಕತೆಗಳು ದುಬೈನಲ್ಲಿ ಇತ್ತೀಚೆಗೆ ಸಿಒಪಿ 28ನಲ್ಲಿ ನಡೆಯುತ್ತಿರುವಂತೆ, ಸುಮಾರು 3,000 ಕಿಮೀ ದೂರದಲ್ಲಿರುವ ಚೆನ್ನೈ ಮಿಚಾಂಗ್ ನ ತೀವ್ರ ಚಂಡಮಾರುತಕ್ಕೆ ಸಿಕ್ಕಿ ನಲುಗಿಹೋಗಿದೆ. 

ಈ ಪ್ರದೇಶದಲ್ಲಿ ದಾಖಲೆಯ ಮಳೆ ಸುರಿದಿದ್ದು, ತೀವ್ರ ಪ್ರವಾಹವನ್ನು ಉಂಟುಮಾಡುವ ಮೂಲಕ ಜಲಾವೃತವಾಗಿದೆ. ಇಲ್ಲಿ ಹವಾಮಾನ ಬದಲಾವಣೆ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಸಿಒಪಿ28 ನಲ್ಲಿ, ಭಾರತವು ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಇಂಗಾಲದ ಹೊರಸೂಸಿವಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು.

ಕ್ಲೈಮೇಟ್ ಆಕ್ಷನ್ ನೆಟ್‌ವರ್ಕ್ ಸೌತ್ ಏಷ್ಯಾದ ನಿರ್ದೇಶಕ ಮತ್ತು COP28 ವೀಕ್ಷಕ ಸಂಜಯ್ ವಶಿಸ್ಟ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, “ವಿಜ್ಞಾನವು ನಿಸ್ಸಂದಿಗ್ಧವಾಗಿದೆ. ನಾವು ಇಂದು ಎದುರಿಸುತ್ತಿರುವ ಪ್ರವಾಹ, ಪ್ರಕೃತಿ ವಿಕೋಪಕ್ಕೆ ಹವಾಮಾನ ಬದಲಾವಣೆಯು ಕಾರಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಾದ್ಯಂತ ವ್ಯಾಪಕವಾದ ಪ್ರವಾಹಗಳು ಪ್ರಮುಖ ರಸ್ತೆ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡುತ್ತಿವೆ. ಬೆಳೆ ಭೂಮಿಗಳು, ಮನೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಾಶಮಾಡುತ್ತಿವೆ. ಜೀವನೋಪಾಯಗಳು ಮತ್ತು ಸ್ವತ್ತುಗಳನ್ನು ಮರುನಿರ್ಮಾಣ ಮಾಡುವುದು ಸವಾಲಾಗಿದೆ ಎನ್ನುತ್ತಾರೆ. 

ವಿಶ್ವ ನಾಯಕರು ತುರ್ತಾಗಿ ಗ್ಲೋಬಲ್ ಗೋಲ್ ಆನ್ ಅಡಾಪ್ಟೇಶನ್ (GGA) ಕುರಿತು ಸಮಗ್ರ ಚೌಕಟ್ಟನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳಬೇಕು ಮತ್ತು ಕಾರ್ಯಗತಗೊಳಿಸಬೇಕು. ಜಿಜಿಎಯಲ್ಲಿ ರಾಜಕೀಯವಾಗಿ ಹೊಂದಾಣಿಕೆಯನ್ನು ಅದೇ ಮಟ್ಟಕ್ಕೆ ಏರಿಸಲು ಶಾಶ್ವತ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ. 

ಈ ವರ್ಷ, ಬಿಹಾರವು ಅತಿ ಹೆಚ್ಚು 502 ಸಾವುಗಳು ವರದಿಯಾಗಿವೆ. ಮಧ್ಯಪ್ರದೇಶ 97 ಮತ್ತು ಗುಜರಾತ್ 94 ನಂತರದ ಸ್ಥಾನದಲ್ಲಿದೆ. ಕಳೆದ ತಿಂಗಳು ತನ್ನ ಮಾರಣಾಂತಿಕ ಭೂಕುಸಿತ ಮತ್ತು ಪ್ರವಾಹಗಳನ್ನು ಕಂಡ ಹಿಮಾಚಲ ಪ್ರದೇಶವು 88 ಸಾವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಬಿಪರ್‌ಜೋಯ್ ಚಂಡಮಾರುತದಿಂದಾಗಿ ಗುಜರಾತ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ 1,212 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಚೆನ್ನೈನಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳುತ್ತಿರುವ ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು, ಅಂತಾರಾಷ್ಟ್ರೀಯ ನಿಧಿಗಳ ಪ್ರವೇಶವನ್ನು ಸುಲಭಗೊಳಿಸಿದರೆ, ದುರಂತದ ನಂತರ ಚೇತರಿಕೆ ವೇಗವಾಗಿರುತ್ತದೆ ಎಂದು ಹೇಳಿದರು.

ಮಿಚಾಂಗ್ ಚಂಡಮಾರುತದಲ್ಲಿ ಹವಾಮಾನ ಬದಲಾವಣೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಭಾರತದ ವಿಶ್ವ ಸಂಪನ್ಮೂಲ ಸಂಸ್ಥೆಯ ಹವಾಮಾನ ಸ್ಥಿತಿಸ್ಥಾಪಕತ್ವ ನಿರ್ದೇಶಕ ಸಿಒಪಿ ಅನುಭವಿ ನಂಬಿ ಅಪ್ಪಾದುರೈ ಹೇಳುತ್ತಾರೆ. ನಾವು ಸುಮಾರು ಎಂಟು ವರ್ಷಗಳ ಹಿಂದೆ 2015 ರಲ್ಲಿ ಇದೇ ಪರಿಸ್ಥಿತಿ ಉಂಟಾಗಿತ್ತು. ಈ ವರ್ಷ ಪರಿಣಾಮವು ತೀವ್ರಗೊಂಡಿದೆ. ಚೆನ್ನೈನ ಸ್ಥಳಾಕೃತಿಯೂ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆ, ಅದರ ಭೂಪ್ರದೇಶವು ಬಹುತೇಕ ಸಮತಟ್ಟಾಗಿದೆ. ಹವಾಮಾನ ನಿರೋಧಕ ಕ್ರಮಗಳಿಗಾಗಿ ನಾವು ಈಗ ಖರ್ಚು ಮಾಡುವುದು ಸಮರ್ಪಕವಲ್ಲ ಎಂದು ನಂಬಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT