ದೇಶ

ಹಸು ಕಳ್ಳತನದ ಶಂಕೆ; ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಗುಂಪು, 14 ಮಂದಿಯನ್ನು ಬಂಧಿಸಿದ ಪೊಲೀಸರು

Ramyashree GN

ಗುವಾಹಟಿ: ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಹಸು ಕಳ್ಳತನದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದು, ಇದುವರೆಗೆ 14 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಶಿವಸಾಗರ ಪೊಲೀಸ್ ಅಧೀಕ್ಷಕ ಶುವ್‌ರಾಜ್ಯೋತಿ ಬೋರಾಹ್ ಮಾತನಾಡಿ, 'ಭಾನುಪುಕುರಿ ಟೀ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಹಸು ಕಳ್ಳತನದ ಶಂಕೆಯಲ್ಲಿ ಜನರ ಗುಂಪೊಂದು ನಾಜಿ ಅಲಿ ಎಂಬಾತನನ್ನು ಥಳಿಸಿತ್ತು. ನಂತರ ಆತನನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಜಯಸಾಗರ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವಿಗೀಡಾಗಿದ್ದಾನೆ' ಎಂದು ತಿಳಿಸಿದ್ದಾರೆ. 

'ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ನಾವು 14 ಜನರನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಬೋರಾಹ್ ಹೇಳಿದರು.

ಈಮಧ್ಯೆ, ನಾಜಿ ಅಲಿ ಈ ಹಿಂದೆ ಹಸು ಕಳ್ಳತನದ ಆರೋಪಿಯಾಗಿದ್ದು, ಒಂದಕ್ಕಿಂತ ಹೆಚ್ಚು ಬಾರಿ ಬಂಧಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

14 ಮಂದಿಯ ಬಂಧನದ ವಿರುದ್ಧವೂ ಅವರು ‘ನಿರಪರಾಧಿಗಳು’ ಎಂದು ಪ್ರತಿಭಟಿಸಿದರು.

SCROLL FOR NEXT