ಉತ್ತರಾಖಂಡದ ಜೋಶಿಮಠದಲ್ಲಿ ಮತ್ತೆ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು 
ದೇಶ

ಜೋಶಿಮಠ ಬಿಕ್ಕಟ್ಟು: ಮನೆಗಳಲ್ಲಿ ಮತ್ತೆ ಹೊಸ ಬಿರುಕು, ಸ್ಥಳೀಯರಲ್ಲಿ ಮನೆಮಾಡಿದ ಆತಂಕ

ಭೂಮಿ ಕುಸಿದ ಪರಿಣಾಮವಾಗಿ ಈಗಾಗಲೇ ಸಂಕಷ್ಟಕ್ಕೊಳಗಾಗಿದ್ದ ಉತ್ತರಾಖಂಡದ ಜೋಶಿಮಠದಲ್ಲಿ ವಸತಿ ಕಟ್ಟಡಗಳಲ್ಲಿನ ಬಿರುಕುಗಳು ಅಗಲವಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಬಿರುಕುಗಳ ಜತೆಗೆ ಇನ್ನೂ ಐದಾರು ಮನೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಜೋಶಿಮಠ: ಭೂಮಿ ಕುಸಿದ ಪರಿಣಾಮವಾಗಿ ಈಗಾಗಲೇ ಸಂಕಷ್ಟಕ್ಕೊಳಗಾಗಿದ್ದ ಉತ್ತರಾಖಂಡದ ಜೋಶಿಮಠದಲ್ಲಿ ವಸತಿ ಕಟ್ಟಡಗಳಲ್ಲಿನ ಬಿರುಕುಗಳು ಅಗಲವಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಬಿರುಕುಗಳ ಜತೆಗೆ ಇನ್ನೂ ಐದಾರು ಮನೆಗಳಲ್ಲಿ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ಈ ಪ್ರದೇಶಕ್ಕೆ ಆಗಮಿಸಿ ಮನೆಗಳನ್ನು ಬುಧವಾರ ಪರಿಶೀಲಿಸಿದರು.

ಕ್ರ್ಯಾಕೊಮೀಟರ್‌ಗಳನ್ನು ಅಳವಡಿಸಿರುವ ಮನೆಗಳಲ್ಲಿ ಹಳೆಯ ಬಿರುಕುಗಳ ಗಾತ್ರ ಹೆಚ್ಚಾಗಿದೆ ಎಂದು ಖುರಾನಾ ಗುರುವಾರ ಹೇಳಿದ್ದಾರೆ.

ಜನವರಿಯಲ್ಲಿ ಮನೋಹರ್ ಬಾಗ್ ವಾರ್ಡ್‌ನ ಹೊಲಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಸಂತ್ರಸ್ತ ಹೊಲವೊಂದರ ಮಾಲೀಕ ಸೂರಜ್ ಕಪರ್ವಾನ್ ಮಾತನಾಡಿ, ಜಿಲ್ಲಾಡಳಿತವು ಮಣ್ಣು ಮತ್ತು ಪ್ಲಾಸ್ಟಿಕ್‌ನಿಂದ ಆ ಬಿರುಕುಗಳನ್ನು ತುಂಬಿದೆ ಎಂದಿದ್ದಾರೆ.

ಜನವರಿ 20ರ ನಂತರ ಪವಿತ್ರ ನಗರದಲ್ಲಿ ಹೊಸ ಬಿರುಕುಗಳು ಕಾಣಿಸಿಕೊಳ್ಳುವುದು ನಿಂತಿದೆ. ಆದರೆ, ಇದೀಗ ಮತ್ತೆ ಪ್ರಾರಂಭವಾಗಿದೆ. ಇದು ಸ್ಥಳೀಯರು ಮತ್ತು ಆಡಳಿತದ ಚಿಂತೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಮನೋಹರ್ ಬಾಗ್ ಮತ್ತು ಸಿಂಘಧಾರ್ ವಾರ್ಡ್‌ನ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಜೋಶಿಮಠದ ಸಿಂಘಧಾರ್ ವಾರ್ಡ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಹರಿಯುತ್ತಿದ್ದ ನೈಸರ್ಗಿಕ ಹೊಳೆ ಏಕಾಏಕಿ ಬತ್ತಿ ಹೋಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT