ಪ್ರಾತಿನಿಧಿಕ ಚಿತ್ರ 
ದೇಶ

ತಿರುವನಂತಪುರಂನಲ್ಲಿ 'ಕಿಡ್ನಿ, ಲಿವರ್ ಮಾರಾಟಕ್ಕಿದೆ' ಎಂಬ ಪೋಸ್ಟರ್; ಜನರಲ್ಲಿ ಆತಂಕ ಸೃಷ್ಟಿ!

ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್‌ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾತನೇ ಈ ಬೋರ್ಡ್ ಹಾಕಿದ್ದ.

ತಿರುವನಂತಪುರಂ: 'ಕಿಡ್ನಿ, ಲಿವರ್ ಮಾರಾಟಕ್ಕಿದೆ', ಇದು ತಿರುವನಂತಪುರದ ಮಣಕೌಡ್ ಎಂಬಲ್ಲಿನ ಮನೆಯೊಂದರ ಮುಂದೆ ಕಾಣಿಸಿಕೊಂಡ ಪೋಸ್ಟರ್. ಮೊದಲಿಗೆ ಇದು ಯಾರೋ ಮಾಡಿದ ಚೇಷ್ಟೆ ಅಥವಾ ಸರ್ಕಾರವನ್ನು ಟ್ರೋಲ್ ಮಾಡಲು ಮಾಡಿದ್ದು ಎಂದೇ ಆರಂಭದಲ್ಲಿ ಜನರು ಭಾವಿಸುವಂತೆ ಮಾಡಿತು.

ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್‌ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾತನೇ ಈ ಬೋರ್ಡ್ ಹಾಕಿದ್ದ.

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಅಪಘಾತ ಸಂಭವಿಸಿದೆ ಎಂದು ಸಂತೋಷ್ ತಿಳಿಸಿದ್ದಾರೆ.

ಚಿಕಿತ್ಸೆಗೆ ಒಳಗಾಗಬೇಕಾಗಿದ್ದ ಅವರ ಬಳಿ ಈಗ ಹಣವಿಲ್ಲ. ಮಣಕೌಡ್ ಜಂಕ್ಷನ್‌ನಲ್ಲಿರುವ ಕುಟುಂಬದ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಲು ಅವರು ಬಯಸಿದ್ದರು. ಆದರೆ, ಜಮೀನಿನ ವಿಚಾರವಾಗಿ ಸಹೋದರನ ಜತೆ ಜಗಳವಾಗಿತ್ತು.
ಆಸ್ತಿ ಅವರ ತಾಯಿಯ ಹೆಸರಿನಲ್ಲಿದೆ ಮತ್ತು ಈಗ ಸಂತೋಷ್ ಸೇರಿದಂತೆ ಆರು ಸಹೋದರರ ಹೆಸರಿನಲ್ಲಿದೆ ಎಂದು ಅವರ ಸಹೋದರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತನ್ನ ಪತ್ನಿ ಕೆಲವು ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಕೋವಿಡ್-19 ನಂತರ ಅದೂ ನಿಂತುಹೋಯಿತು ಎನ್ನುತ್ತಾರೆ ಸಂತೋಷ್.

ಅಂತಹ ಕಠಿಣ ಪರಿಸ್ಥಿತಿಯಲ್ಲಿ, ತಮ್ಮ ಪ್ರಮುಖ ಅಂಗಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ ಎಂದು ಕುಟುಂಬ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT