ಸಾಂದರ್ಭಿಕ ಚಿತ್ರ 
ದೇಶ

ವಿಮಾನದಲ್ಲಿ ಅಶಿಸ್ತಿನ ವರ್ತನೆ ಪ್ರಕರಣ: 25 ಸಾವಿರ ರು. ದಂಡ ಕಟ್ಟಲು ನಿರಾಕರಿಸಿದ ಏರ್ ಇಂಡಿಯಾ ಪ್ರಯಾಣಿಕ ಜೈಲು ಪಾಲು!

ಏರ್ ಇಂಡಿಯಾ ವಿಮಾನದಲ್ಲಿ ಅಶಿಸ್ತಿನ ವರ್ತನೆ ಮತ್ತು ಧೂಮಪಾನದ ಆರೋಪದ ಮೇಲೆ ದಂಡ ಕಟ್ಟಲು ನಿರಾಕರಿಸಿದ  ಆರೋಪಿಯನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ.

ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಅಶಿಸ್ತಿನ ವರ್ತನೆ ಮತ್ತು ಧೂಮಪಾನದ ಆರೋಪದ ಮೇಲೆ  ದಂಡ ಕಟ್ಟಲು ನಿರಾಕರಿಸಿದ ಆರೋಪಿಯನ್ನು ನ್ಯಾಯಾಲಯವು ಜೈಲಿಗೆ ಕಳುಹಿಸಿದೆ. ಅವರು ಜಾಮೀನಿಗಾಗಿ 25,000 ರೂಪಾಯಿಗಳನ್ನು ಪಾವತಿಸಲು ನಿರಾಕರಿಸಿದ ಆತ ಕೇವಲ 250 ರೂ. ದಂಡ ಪಾವತಿ ಮಾಡುವುದಾಗಿ ವಾದಿಸಿದ್ದ.

ಲಂಡನ್​ನಿಂದ ಮುಂಬಯಿಗೆ ಆಗಮಿಸುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ, ಗಲಾಟೆ ಸೃಷ್ಟಿಸಿದ್ದ ಪ್ರಯಾಣಿಕನಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಯಾಣಿಕನ ಹೆಸರು ರತ್ನಾಕರ್​ ದ್ವಿವೇದಿ​ ಎಂದಾಗಿದ್ದು, 37ವರ್ಷ.

ಮಾರ್ಚ್​ 10ರಂದು ಲಂಡನ್​​ನಿಂದ ಮುಂಬಯಿಗೆ ಆಗಮಿಸುತ್ತಿದ್ದಾಗ ವಿಮಾನದ ಶೌಚಗೃಹಕ್ಕೆ ಹೋಗಿ ಸಿಗರೇಟ್​ ಸೇದಿದ್ದ. ಅದನ್ನು ನೋಡಿ ತಡೆಯಲು ಹೋದ ವಿಮಾನ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದ. ಆಗ ಸಿಬ್ಬಂದಿ ಆತನ ಕೈಕಾಲು ಕಟ್ಟಿ ಕೂರಿಸಿ, ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಮುಂಬಯಿ ಪೊಲೀಸರಿಗೆ ಒಪ್ಪಿಸಿದ್ದರು.

ಪೊಲೀಸರು ರತ್ನಾಕರ್​​​ನನ್ನು ಅಂಧೇರಿ ಮೆಟ್ರೋಪಾಲಿಟಿನ್​ ಕೋರ್ಟ್​ಗೆ ಹಾಜರುಪಡಿಸಿದ್ದರು. ಕೋರ್ಟ್​​ ಆತನಿಗೆ 25 ಸಾವಿರ ರೂಪಾಯಿ ನಗದು ಆಧಾರಿತ ಜಾಮೀನು ನೀಡಿತ್ತು. ಆದರೆ ರತ್ನಾಕರ್​ ಅಷ್ಟು ಹಣವನ್ನು ಪಾವತಿ ಮಾಡಲು ಒಪ್ಪಲಿಲ್ಲ.

ಅದರ ಬದಲಿಗೆ, ‘ನಾನು ಆನ್​ಲೈನ್​​ನಲ್ಲಿ ಹುಡುಕಿದ್ದೇನೆ. ನನ್ನ ವಿರುದ್ಧ ದಾಖಲಾದ ಐಪಿಸಿ ಸೆಕ್ಷನ್​ 330ರಡಿಯಲ್ಲಿ (ಇತರರ ಜೀವ ಮತ್ತು ಖಾಸಗಿ ಸುರಕ್ಷತೆಗೆ ಅಪಾಯವೊಡ್ಡಿದ ಆರೋಪ) ಜಾಮೀನು ಪಡೆಯುವ ದಂಡ ಕೇವಲ 250 ರೂಪಾಯಿ. ನಾನು ಅಷ್ಟನ್ನು ಮಾತ್ರ ಪಾವತಿ ಮಾಡುತ್ತೇನೆ’ ಎಂದು ವಾದಿಸಿದ್ದ. ಹೀಗಾಗಿ ಕೋರ್ಟ್​ ಆತನನ್ನು ಜೈಲಿಗೆ ಕಳಿಸಿದೆ.

ಆರೋಪಿ ವಿಮಾನದಲ್ಲಿ ಗೊಂದಲವನ್ನುಂಟು ಮಾಡಿದರು ಮತ್ತು ಎಲ್ಲಾ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡಿದರು, ಜೊತೆಗೆ ಪೈಲಟ್‌ನ ಮೌಖಿಕ ಮತ್ತು ಲಿಖಿತ ಸೂಚನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಶ್ರೀಲಂಕಾ ವಿರುದ್ಧ 165 ರನ್ ಗಳಿಂದ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!