ದೇಶ

ಬಂಗಾಳ ಪ್ರವಾಸೋದ್ಯಮದ ಹೊಸ ರಾಯಭಾರಿಯಾಗುವಂತೆ ನಟ-ಸಂಸದ ದೇವ್ ಗೆ ಮಮತಾ ಮನವಿ

Lingaraj Badiger

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇವ್ ಎಂದೇ ಜನಪ್ರಿಯರಾಗಿರುವ ನಟ ಹಾಗೂ ಸಂಸದ ದೀಪಕ್ ಅಧಿಕಾರಿ ಅವರಿಗೆ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಹೊಸ ಬ್ರಾಂಡ್ ಅಂಬಾಸಿಡರ್ ಆಗುವಂತೆ ಬುಧವಾರ ಕೇಳಿಕೊಂಡಿದ್ದಾರೆ.

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಪ್ರಸ್ತುತ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು "ಬ್ಯುಸಿ" ಆಗಿರುವುದನ್ನು ಗಮನಿಸಿದ ಮಮತಾ ಬ್ಯಾನರ್ಜಿ, ದೇವ್ ಅವರಿಗೆ ಆ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ.

2012 ರಲ್ಲಿ ಶಾರುಖ್ ಖಾನ್ ಅವರು ಅವರು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

"ನಮ್ಮಲ್ಲಿ ಶಾರುಖ್(ಖಾನ್) ಇದ್ದಾರೆ. ಅವರು ವೀಡಿಯೋವನ್ನು ಸಹ ಮಾಡಿದ್ದಾರೆ. ಆದರೆ ಅವರು ಸಾಮಾನ್ಯವಾಗಿ ತುಂಬಾ ಬ್ಯುಸಿ ಆಗಿರುತ್ತಾರೆ. ದೇವ್ ನೀವು ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿ ಸ್ವಲ್ಪ ಕೆಲಸ ಮಾಡಿ. ನಿಮ್ಮನ್ನು ರಾಯಭಾರಿ ಆಗಿ ಮಾಡುವಂತೆ ನಾನು ಪ್ರವಾಸೋದ್ಯಮ ಇಲಾಖೆದೆ ಸೂಚಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರು ತಮ್ಮ ನೇತೃತ್ವದ ಕೈಗಾರಿಕಾ ಪ್ರಚಾರ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯ ಈ ಕೋರಿಕೆಯಿಂದ ಆಶ್ಚರ್ಯಗೊಂಡ ಟಿಎಂಸಿ ಸಂಸದ ದೇವ್ ಅವರು, ನನ್ನನ್ನು ಬ್ರಾಂಡ್ ಅಂಬಾಸಿಡರ್ ಮಾಡಿರುವುದು ನನಗೆ ಅತ್ಯಂತ ವಿಶೇಷವಾಗಿದೆ ಎಂದಿದ್ದಾರೆ.

SCROLL FOR NEXT