ಆ್ಯಸಿಡ್ ದಾಳಿ ಸಂತ್ರಸ್ತೆ ಕೈಫಿ 
ದೇಶ

ಸಿಬಿಎಸ್ ಇ 10ನೇ ತರಗತಿ ಪರೀಕ್ಷೆ: ಶೇ.95.2 ರಷ್ಟು ಅಂಕ ಪಡೆದ ಆ್ಯಸಿಡ್​ ದಾಳಿ ಸಂತ್ರಸ್ತೆ!

ಯಶಸ್ಸಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಚಂಡೀಗಢದ ಈ ಬಾಲಕಿಯೇ ಸಾಕ್ಷಿ. ಹೌದು, ಆ್ಯಸಿಡ್​ ದಾಳಿಯಿಂದ ಬದುಳಿದಿರುವ 15 ವರ್ಷದ ಕೈಫಿ ಶುಕ್ರವಾರ ಪ್ರಕಟವಾದ ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 95.2% ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ.

ಚಂಡೀಗಢ: ಯಶಸ್ಸಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಚಂಡೀಗಢದ ಈ ಬಾಲಕಿಯೇ ಸಾಕ್ಷಿ. ಹೌದು, ಆ್ಯಸಿಡ್​ ದಾಳಿಯಿಂದ ಬದುಳಿದಿರುವ 15 ವರ್ಷದ ಕೈಫಿ ಶುಕ್ರವಾರ ಪ್ರಕಟವಾದ ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 95.2% ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ.

ಹಿಸಾರ್‌ನ ಹಳ್ಳಿಯೊಂದರಲ್ಲಿ ಮೂವರು ಕಿರಾತಕರು ಆಕೆಯ ಮೇಲೆ ಆಸಿಡ್ ಎಸೆದಾಗ ಕೇವಲ ಮೂರು ವರ್ಷ. ಪೋಷಕರಾದ ಪವನ್ ಮತ್ತು ಸುಮನ್ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗೆ ಕರೆದೊಯ್ದರೂ  ಆಕೆ ದೃಷ್ಟಿ ಕಳೆದುಕೊಂಡಳು.

ಈ ಹೀನ ಕೃತ್ಯವೆಸಗಿದ್ದ ಮೂವರು ಮಧ್ಯ ವಯಸ್ಸಿನ ಅಪರಾಧಿಗಳು ಕೇವಲ ಎರಡು ವರ್ಷಗಳಲ್ಲಿ ಜೈಲಿನಿಂದ ಹೊರಬಂದರು. ಆದರೆ, ಆಕೆಯ ಕಣ್ಣು ಮಾತ್ರ ವಾಪಸ್ ಬರಲಿಲ್ಲ. ಆದಾಗ್ಯೂ, ಆಕೆಯ ಉತ್ತಮ ಶಿಕ್ಷಣಕ್ಕಾಗಿ ಹಳ್ಳಿಯಿಂದ ಚಂಡೀಗಢಕ್ಕೆ ಕುಟುಂಬ ಸ್ಥಳಾಂತರವಾಗಿದೆ. ಆಕೆಯ ತಂದೆ ಹರಿಯಾಣದ ಸಚಿವಾಲಯದಲ್ಲಿ ಡಿ ದರ್ಜೆಯ ನೌಕರರಾಗಿದ್ದಾರೆ. 

"ವೀಡಿಯೋಗಳು ಮತ್ತು ಮಲ್ಟಿಮೀಡಿಯಾಗಳು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಉತ್ತಮ ನೆರವಾಗಿವೆ. ನನ್ನ ಕುಟುಂಬ ಮತ್ತು ಶಿಕ್ಷಕರ ಬೆಂಬಲದಿಂದ ಉತ್ತಮ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದೆ ಐಎಎಸ್ ಮಾಡಿ ದೇಶ ಸೇವೆ ಮಾಡುವುದು ಕೈಫಿಯ ಗುರಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT