ಆನೆಗಳ ಕಾದಾಟ 
ದೇಶ

ಗಜ ಕಾಳಗಕ್ಕೆ ಬೆಚ್ಚಿ ಬಿದ್ದ ದಟ್ಟಾರಣ್ಯ; ಮದಗಜಗಳ ಕಾದಾಟದ ವಿಡಿಯೋ ವೈರಲ್

ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶವು ಅಪಾಯಕಾರಿಯಾಗಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ನವದೆಹಲಿ: ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶವು ಅಪಾಯಕಾರಿಯಾಗಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಆನೆಗಳು ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳಾಗಿವೆ ಮತ್ತು ಬೃಹತ್ ದೇಹಗಳು, ದೊಡ್ಡ ಕಿವಿಗಳು ಮತ್ತು ಉದ್ದವಾದ ಸೊಂಡಿಲನ್ನು ಹೊಂದಿವೆ. ಅವುಗಳ ಸೊಂಡಿಲಿನ ಎರಡೂ ಬದಿಯಲ್ಲಿರುವ ಬಿಳಿಯ ದಂತಗಳು ಅವುಗಳ ದೈತ್ಯತೆಯನ್ನು ಹೆಚ್ಚಿಸುತ್ತವೆ. 

ಸಾಮಾನ್ಯವಾಗಿ ಆನೆಗಳು ಕೋಪಗೊಳ್ಳದ ಅಥವಾ ಪ್ರಚೋದಿಸದ ಹೊರತು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ ಒಮ್ಮೆ ಅವುಗಳಿಗೆ ಕೋಪ ಬಂದರೆ ಮಾತ್ರ ವಿಧ್ವಂಸ ಗ್ಯಾರಂಟಿ..

ಅದರಲ್ಲೂ ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶವು ಅಪಾಯಕಾರಿಯಾಗಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಎರಡು ದೈತ್ಯ ಆನೆಗಳು ಕ್ರೂರ ಕಾಳಗದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಭಾರತೀಯ ಅರಣ್ಯ ಅಧಿಕಾರಿ (ಐಎಫ್‌ಎಸ್) ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಆನೆಗಳ ಕಾದಾಟಕ್ಕೆ ಕಾರಣದ ಬಗ್ಗೆ ಅರಣ್ಯಾಧಿಕಾರಿ ಮಾಹಿತಿ ನೀಡಿಲ್ಲ. "ಟೈಟಾನ್ಸ್ ಪರಸ್ಪರ ಘರ್ಷಣೆಗಿಳಿದಾಗ, ಅರಣ್ಯವು ನಡುಗುತ್ತದೆ" ಎಂದು ಸೂಕ್ತವಾಗಿ ಶೀರ್ಷಿಕೆ ವಿಡಿಯೋ ಷೇರ್ ಮಾಡಿದ್ದಾರೆ.

ಈ ವಿಡಿಯೋವನ್ನು 28,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದು, 1,000 ಲೈಕ್‌ಗಳು ಬಂದಿವೆ.  

ವೀಡಿಯೊ ಚಿತ್ರೀಕರಣಗೊಂಡ ಸ್ಥಳ ತಿಳಿದಿಲ್ಲ.. ಆದರೆ ಎರಡು ಆನೆಗಳು ರಸ್ತೆಯ ಮಧ್ಯದಲ್ಲಿ ಕಾದಾಡುತ್ತಿರುವುದು ಕಂಡುಬಂದಿದೆ.

ದೈತ್ಯ ಆನೆಗಳು ತಮ್ಮ ದಂತಗಳನ್ನು ಒಂದೊಕ್ಕೊಂದು ತಿವಿದುಕೊಂಡು ಪರಸ್ಪರ ಹೂಳಿಡುತ್ತಾ ಹಿಂದಕ್ಕೆ ಮುಂದಕ್ಕೆ ತಳ್ಳಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ದೈತ್ಯ ಆನೆಗಳ ಸಂಘರ್ಷ ಮತ್ತು ಶಬ್ದಕ್ಕೆ ಸುತ್ತಮುತ್ತಲ ಪ್ರಾಣಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ದು, ಆನೆಗಳ ಸಂಘರ್ಷ ನೋಡಿದ ಪಕ್ಷಿಗಳು ಆತಂಕದಿಂದ ಕಿರುಚಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT