ಅಜಂ ಖಾನ್ 
ದೇಶ

ಎಸ್ ಪಿ ಮುಖಂಡ ಅಜಂ ಖಾನ್ ಮಾಲೀಕತ್ವದ ಶಾಲೆ ವಶಕ್ಕೆ ಪಡೆದ ಸರ್ಕಾರ: ಶಿಕ್ಷಣ ಇಲಾಖೆಗೆ ಹಸ್ತಾಂತರ

ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್‌ ಮಾಲೀಕತ್ವದ ಶಾಲೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ ಸಂಪುಟ ಸಭೆಯ ನಿರ್ಣಯದಂತೆ, ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.

ರಾಮ್‌ಪುರ: ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್‌ ಮಾಲೀಕತ್ವದ ಶಾಲೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ ಸಂಪುಟ ಸಭೆಯ ನಿರ್ಣಯದಂತೆ, ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಆಜಂ ಖಾನ್ ಅವರ ಟ್ರಸ್ಟ್‌ ರಾಮ್‌ಪುರ ಪಬ್ಲಿಕ್ ಶಾಲೆಯನ್ನು ನಡೆಸುತ್ತಿತ್ತು. ಮಹಮ್ಮದ್ ಅಲಿ ಜೌಹಾರ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಿದ್ದ 41,000 ಚದರಡಿ ಜಾಗದಲ್ಲಿ ಸರ್ಕಾರಿ ಆದೇಶ ಉಲ್ಲಂಘನೆಯಾಗಿದೆ ಎಂದು ರಾಜ್ಯ ಸರ್ಕಾರ ಅದನ್ನು ಹಿಂಪಡೆಯಲು ಅ. 31ರಂದು ನಿರ್ಧರಿಸಿತ್ತು. ಈ ಸಂಬಂಧ ಕಟ್ಟಡವನ್ನು ಕೂಡಲೇ ತೆರವುಗೊಳಿಸುವಂತೆ ನ. 2ರಂದು ಆದೇಶಿಸಿತ್ತು.

ರಾಮ್‌ಪುರ ಕೋಟೆ ಬಳಿ ಇರುವ ಮುರ್ತಝಾ ಹಳೆಯ ಶಾಲಾ ಕಟ್ಟಡದಲ್ಲಿ ಮೊದಲು ಜಿಲ್ಲಾ ಶಾಲಾ ನಿರೀಕ್ಷಕರ ಕಚೇರಿ ಇತ್ತು. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ, ಖಾನ್ ಅವರು ಮಂತ್ರಿ ಆಗಿದ್ದರು. ಆ ಅವಧಿಯಲ್ಲಿ ಈ ಜಾಗವನ್ನು ವಾರ್ಷಿಕ ಭೂಬಾಡಿಗೆ 100 ರು. ರಂತೆ ಮಹಮ್ಮದ್ ಅಲಿ ಜೌಹಾರ್‌ ಟ್ರಸ್ಟ್‌ಗೆ ನೀಡಲಾಗಿತ್ತು.

ಮೌಲಾನಾ ಮಹಮ್ಮದ್ ಅಲಿ ಜೌಹಾರ್ ಟ್ರಸ್ಟ್‌ ಅಡಿಯಲ್ಲಿ ಅದೇ ಹೆಸರಿನ ವಿಶ್ವವಿದ್ಯಾಲಯವನ್ನೂ ಈ ಜಾಗದಲ್ಲೇ ಆರಂಭಿಸಲಾಗಿತ್ತು. ಸದ್ಯ ಜೈಲಿನಲ್ಲಿರುವ ಆಜಂ ಖಾನ್‌ ಅವರು ಸಂಸ್ಥಾಪಕ ಕುಲಾಧಿಪತಿಯಾಗಿದ್ದರು. 2012ರಲ್ಲಿ ಈ ವಿಶ್ವವಿದ್ಯಾಲಯವನ್ನು ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲೋಕಾರ್ಪಣೆಗೊಳಿಸಿದ್ದರು.

ಈ ಶಾಲೆಯ ಪಕ್ಕದಲ್ಲೇ ಖಾನ್ ಅವರ ಕಚೇರಿ ಇತ್ತು. ಸಮಾಜವಾದಿ ಪಕ್ಷದ ರಾಮ್‌ಪುರ ಘಟಕದ ಪಕ್ಷದ ಕಾರ್ಯಗಳು ಇದೇ ಕಟ್ಟಡದಲ್ಲಿ ನಡೆಯುತ್ತಿತ್ತು. ಇಲ್ಲಿ ಶಾಲೆಗಾಗಿ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ 30 ವರ್ಷಗಳ ಗುತ್ತಿಗೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ಜಾಗವನ್ನು ವಶಕ್ಕೆ ಪಡೆಯಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT