ಸಂಗ್ರಹ ಚಿತ್ರ 
ದೇಶ

ಘಾಜಿಯಾಬಾದ್: ನನ್ನ ಖಾಸಗಿ ಅಂಗವನ್ನು ಮುಟ್ಟಿ, ಅಕ್ರಮ ಸಂಬಂಧ ಹೊಂದುವಂತೆ ಒತ್ತಡ: ಪೊಲೀಸರ ವಿರುದ್ಧ ಮಹಿಳೆ ಆರೋಪ

ಗಾಜಿಯಾಬಾದ್‌ನ ಪಾರ್ಕ್‌ನಲ್ಲಿ ವಾಕಿಂಗ್‌ಗೆ ತೆರಳಿದ್ದ ವೇಳೆ ಮಹಿಳೆಗೆ ಪಿಆರ್‌ವಿ ವ್ಯಾನ್‌ನಲ್ಲಿ ನಿಯೋಜನೆಗೊಂಡ ಪೊಲೀಸರು ಕಿರುಕುಳ ನೀಡಿ ಬೆದರಿಸಿ ಅಕ್ರಮ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಪೇದೆಯೊಬ್ಬರು...

ನವದೆಹಲಿ/ಗಾಜಿಯಾಬಾದ್‌: ಗಾಜಿಯಾಬಾದ್‌ನ ಪಾರ್ಕ್‌ನಲ್ಲಿ ವಾಕಿಂಗ್‌ಗೆ ತೆರಳಿದ್ದ ವೇಳೆ ಮಹಿಳೆಗೆ ಪಿಆರ್‌ವಿ ವ್ಯಾನ್‌ನಲ್ಲಿ ನಿಯೋಜನೆಗೊಂಡ ಪೊಲೀಸರು ಕಿರುಕುಳ ನೀಡಿ ಬೆದರಿಸಿ ಅಕ್ರಮ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಪೇದೆಯೊಬ್ಬರು ಅಕ್ರಮ ಸಂಬಂಧ ಹೊಂದುವಂತೆ ಒತ್ತಡ ಹೇರಿದ್ದು, ಪೇಟಿಎಂನಿಂದ ಒಂದು ಸಾವಿರ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಂತ್ರಸ್ತೆ 2023ರ ಸೆಪ್ಟೆಂಬರ್ 16ರಂದು ತನಗೆ ಮದುವೆ ನಿಶ್ಚಯವಾಗಿದ್ದ ವರನೊಂದಿಗೆ ಸಾಯಿ ಉಪ್ವಾನ್ ಅನ್ನು ಭೇಟಿ ಮಾಡಲು ಹೋಗಿದ್ದಳು ಎಂದು ಹೇಳಿದರು. 12 ಗಂಟೆ ಸುಮಾರಿಗೆ ಪಿಆರ್‌ವಿ ಬೈಕ್‌ನಲ್ಲಿ ಬಂದ ಇಬ್ಬರು ಪೊಲೀಸರು ಹಾಗೂ ಸಾಮಾನ್ಯ ಉಡುಪಿನಲ್ಲಿದ್ದ ಮತ್ತೊಬ್ಬರು ಬೆದರಿಸಿದರು. ಅಲ್ಲದೇ ಮಹಿಳೆಯ ವರನಿಗೂ ಕಪಾಳಮೋಕ್ಷ ಮಾಡಿದ್ದನು. 

ಪೊಲೀಸ್ ಪೇದೆಯೂ ಹಣ ಕೇಳಿದ್ದಾನೆ. ಭಯದ ಕಾರಣ ಅವರು ಪೊಲೀಸರಲ್ಲಿ ಕ್ಷಮೆಯಾಚಿಸಿದರು. ಅಷ್ಟೇ ಅಲ್ಲದೆ ಕಾಲುಗಳನ್ನು ಹಿಡಿದುಕೊಂಡರು ಪ್ರಯೋಜನವಾಗಲಿಲ್ಲ. ಪೊಲೀಸ್ ನಮ್ಮೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸಿದರು. ನನ್ನೊಂದಿಗೆ ಅನುಚಿತವಾಗಿ ಮಾತನಾಡಿದ್ದಲ್ಲದೆ ನನ್ನ ಖಾಸಗಿ ಅಂಗಗಳನ್ನೂ ಮುಟ್ಟಿದರು ಎಂದು ಆರೋಪಿಸಿದ್ದಾರೆ. ಇನ್ನು ಸೆಪ್ಟೆಂಬರ್ 19ರಂದು ಪೊಲೀಸರು ನನಗೆ ಕರೆ ಮಾಡಿದ್ದಾರೆ. ಅದರ ರೆಕಾರ್ಡಿಂಗ್ ಸಹ ನನ್ನ ಬಳಿ ಇದೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಎಸಿಪಿ ಕೊತ್ವಾಲಿ ನಿಮಿಷ್ ಪಟೇಲ್ ಅವರು, 2023ರ ಸೆಪ್ಟೆಂಬರ್ 28ರಂದು, ಕೊತ್ವಾಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಉಪ್ವಾನ್‌ನಲ್ಲಿ ಪಿಆರ್‌ವಿ 122 ರಲ್ಲಿ ನಿಯೋಜಿಸಲಾದ ಇಬ್ಬರು ಪೊಲೀಸ್ ಸಿಬ್ಬಂದಿ ತನ್ನನ್ನು ಕಿರುಕುಳ ನೀಡಿದ್ದು ಅಲ್ಲದೆ ತನ್ನ ನಿಶ್ಚಿತ ವರ ಜೊತೆ ಅನುಚಿತವಾಗಿ ವರ್ತಿಸಿದರು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಮಹಿಳೆ ಮತ್ತು ಆಕೆಯ ವರನಿಂದಲೂ ಹಣಕ್ಕೆ ಬೇಡಿಕೆಯಿಟ್ಟಿದ್ದರು. 

ಪೊಲೀಸರು ತಕ್ಷಣ ಘಟನೆಯ ಅರಿವನ್ನು ತೆಗೆದುಕೊಂಡು ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಪಿಆರ್‌ಸಿ 4757 ರಲ್ಲಿ ನಿಯೋಜನೆಗೊಂಡ ಪೊಲೀಸ್ ಮತ್ತು ಹೋಮ್ ಗಾರ್ಡ್ ಸೇರಿದ್ದಾರೆ. ಕಾನ್‌ಸ್ಟೆಬಲ್ ಅನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಾರ್ಹ ಕ್ರಮಕ್ಕಾಗಿ ಗೃಹರಕ್ಷಕ ದಳದ ಇಲಾಖೆಗೆ ಪತ್ರವ್ಯವಹಾರ ಕಳುಹಿಸಲಾಗಿದೆ. ಘಟನೆಯಲ್ಲಿ ಮೂರನೇ ವ್ಯಕ್ತಿಯ ಹುಡುಕಾಟವೂ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ನಂತರ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT