ಚೀತಾಗಳು 
ದೇಶ

ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸಿದಾಗ ಸಾವುಗಳ ಸಂಭವ ಸಹಜ: ನಮೀಬಿಯಾ ರಾಯಭಾರಿ

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ...

ಕೋಲ್ಕತ್ತಾ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸುವಾಗ ಸಾವುಗಳು ಸಾವುಗಳು ಸಹಜವಾಗಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ.

ಚೀತಾಗಳು ಭಾರತದ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಈ ವರ್ಷದ ಮಾರ್ಚ್‌ನಿಂದ ಎರಡು ದೇಶಗಳಿಂದ ತಂದ 20 ಚಿರತೆಗಳ ಪೈಕಿ ಒಂಬತ್ತು ಚಿರತೆಗಳು ಸಾವನ್ನಪ್ಪಿವೆ. ನೀವು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಪರಿಚಯಿಸುವಾಗ, ಸಾವುನೋವುಗಳಂತಹ ಕೆಲವು ಸವಾಲುಗಳು ಇದ್ದೇ ಇರುತ್ತದೆ. ಇದು ಈ ರೀತಿಯ ಯಾವುದೇ ಯೋಜನೆಯ ಒಂದು ಭಾಗವಾಗಿರುತ್ತದೆ ಎಂದು ಸಿನಿಂಬೊ ಹೇಳಿದರು.

ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿದ್ದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಈ ವೇಳೆ ನಮೀಬಿಯಾದಿಂದ ಚೀತಾ 'ಜ್ವಾಲಾ'ಗೆ ನಾಲ್ಕು ಮರಿಗಳು ಜನಿಸಿದವು. ಈ 24 ಚೀತಾಗಳ ಪೈಕಿ ಮೂರು ಮರಿಗಳು ಸೇರಿದಂತೆ ಒಂಬತ್ತು ಸಾವನ್ನಪ್ಪಿವೆ.

ದೊಡ್ಡ ಬೆಕ್ಕು ಜಾತಿಯ ಚೀತಾಗಳನ್ನು ಭಾರತದಲ್ಲಿ ಮತ್ತೆ ಮರುಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ಒಂದು ವಿನೂತನ ಯೋಜನೆಯಾಗಿದೆ. ಪರಸ್ಪರ ಬೆಂಬಲಿಸುವ ನಮ್ಮ ಸಂಬಂಧವನ್ನು ಗಮನಿಸಿದರೆ ನಮೀಬಿಯಾ ಈ ಉಪಕ್ರಮದಿಂದ ಸಾಕಷ್ಟು ಸಂತಸಗೊಂಡಿದೆ ಎಂದು ಸಿನಿಂಬೊ ಹೇಳಿದರು.

ಆಗಸ್ಟ್ 2ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಂಬತ್ತನೆಯ ಚಿರತೆಯ ಕೊನೆಯ ಸಾವು ವರದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT