ಉದಯನಿಧಿ ಸ್ಟಾಲಿನ್ 
ದೇಶ

ಸನಾತನ ಧರ್ಮದ ಬಗ್ಗೆ ಹೇಳಿಕೆ: ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಅಯೋಧ್ಯೆಯ ಸಾಧು

ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಯೋಧ್ಯಯ ಸಾಧು ಓರ್ವರು ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಅಯೋಧ್ಯೆ: ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ನೀಡಿದ್ದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಯೋಧ್ಯಯ ಸಾಧು ಓರ್ವರು ಉದಯನಿಧಿ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಅಯೋಧ್ಯೆಯ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ ದಾಸ್ ಅವರು ಉದಯನಿಧಿ ತಲೆಯನ್ನು ತೆಗೆದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಸನಾತನ ಧರ್ಮ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕಳೆದ 2,000 ವರ್ಷಗಳಲ್ಲಿ ಹಲವು ಧರ್ಮಗಳು ಬಂದು ನಶಿಸಿಹೋಗಿವೆ. ಭೂಮಿಯಲ್ಲಿ ನಿರಂತರವಾಗಿರುವುದು ಒಂದೇ ಅದು ಸನಾತನ ಧರ್ಮ ಎಂದು ಮಹಾಂತ್ ಪರಮಹಂಸ ದಾಸ್ ಹೇಳಿದ್ದಾರೆ. ಸನಾತನ ಧರ್ಮಕ್ಕೆ ಆದಿ ಅಂತ್ಯಗಳಿಲ್ಲ. ಸನಾತನ ಧರ್ಮವನ್ನು ಹಿಂದೆಂದೂ ನಾಶ ಮಾಡಲು ಸಾಧ್ಯವಾಗಿಲ್ಲ, ಮುಂದೆಯೂ ನಾಶ ಮಾಡಲು ಸಾಧ್ಯವಿಲ್ಲ ಎಂದು ನಾಶ ಮಾಡಲು ಯತ್ನಿಸುವವರಿಗೆ ಮಹಾಂತ್ ಪರಮಹಂಸ ದಾಸ್ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಯಾರೂ ಉದಯನಿಧಿ ತಲೆ ತರದೇ ಇದ್ದರೆ, ನಾನೇ ನನ್ನ ಕೈಗಳಿಂದ ಆ ಕೆಲಸ ಮಾಡುತ್ತೇನೆ ಡಿಎಂಕೆ ನಾಯಕನ ತಲೆ ತೆಗೆಯಲು ನಾನು ಖಡ್ಗವನ್ನು ಸಿದ್ಧಪಡಿಸಿದ್ದೇನೆ ಎಂದು ಮಹಾಂತ್ ಪರಮಹಂಸ ದಾಸ್ ಹೇಳಿದ್ದಾರೆ. ಉದಯನಿಧಿ ಬೇರೆ ಧರ್ಮಗಳ ಬಗ್ಗೆಯೂ ಹೀಗೆಯೇ ಮಾತನಾಡಲಿ ಎಂದು ಮಹಾಂತ್ ಪರಮಹಂಸ ದಾಸ್  ಸವಾಲು ಹಾಕಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video