ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗಣ್ಯರು 
ದೇಶ

ಒಡಿಶಾ ಸಾಹಿತ್ಯ ಉತ್ಸವ: ಟಿಎನ್ಐಇಯ ಪ್ರಥಮ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ನ ಮೊದಲ ಆವೃತ್ತಿಯನ್ನು ಒಡಿಶಾ ಲಿಟರರಿ ಫೆಸ್ಟ್-2023ದಲ್ಲಿ ಘೋಷಣೆ ಮಾಡಲಾಗಿದೆ.

ಭುವನೇಶ್ವರ್: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ನ ಮೊದಲ ಆವೃತ್ತಿಯನ್ನು ಒಡಿಶಾ ಲಿಟರರಿ ಫೆಸ್ಟ್-2023ದಲ್ಲಿ ಘೋಷಣೆ ಮಾಡಲಾಗಿದೆ.

ಬರಹಗಾರರನ್ನು ಗೌರವಿಸುವುದಕ್ಕಾಗಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸುವುದಕ್ಕಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ.

ಜೀವಮಾನವಿಡೀ ತಾರತಮ್ಯದ ವಿರುದ್ಧ ಮಾತನಾಡಿದ ಪೆರುಮಾಳ್ ಮುರುಗನ್, ಮಾಧೋರುಬಗನ್ (ಒಂದು ಭಾಗ ಮಹಿಳೆ) ಮತ್ತು ಪೂಕುಝಿ (ಪೈರೆ) ಲೇಖಕರಿಗೆ ಸಾಹಿತ್ಯ ಶ್ರೇಷ್ಠತೆಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ನೀಡಲಾಯಿತು. ಸಂಶೋಧಕ ಮತ್ತು ಬರಹಗಾರ ಅನಿರುದ್ಧ್ ಕಣಿಸೆಟ್ಟಿ ಅವರು ಭಾರತದ ಗತಕಾಲದ ಗುಪ್ತ ಕಥೆಗಳನ್ನು ಬಿಚ್ಚಿಡಲು ಮತ್ತು ಇತಿಹಾಸಕ್ಕೆ ಜೀವ ತುಂಬಲು ತೋರಿದ ಬದ್ಧತೆಗಾಗಿ ಅತ್ಯುತ್ತಮ ನಾನ್-ಫಿಕ್ಷನ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2023 ರ ಸಾಹಿತ್ಯಿಕ ತಾರೆ ದೇವಿಕಾ ರೇಗೆ ಅವರ ಚೊಚ್ಚಲ ಕಾದಂಬರಿ ಕ್ವಾರ್ಟರ್‌ಲೈಫ್‌ನ ಆಳ ಮತ್ತು ಪ್ರಬುದ್ಧತೆ ಬೆರಗುಗೊಳಿಸಿದ್ದು ಅತ್ಯುತ್ತಮ ಕಾದಂಬರಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.

ಪ್ರಶಸ್ತಿಗಳನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪ್ರಧಾನಿ ಮೋದಿ ಅವರ ಆರ್ಥಿಕ ಸಲಹಾ ಪರಿಷತ್ ನ ಅಧ್ಯಕ್ಷ ವಿವೇಕ್ ಡೆಬ್ರಾಯ್,  ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ನ ಜ್ಯೂರಿ ಅಧ್ಯಕ್ಷರಾದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಅಧ್ಯಕ್ಷರು ಹಾಗೂ ಎಂಡಿ ಮನೋಜ್ ಕುಮಾರ್ ಸೋಂತಾಲಿಯಾ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಟಿಎನ್ ಐಇ ಸಮೂಹದ ಸಂಪಾದಕರಾದ ಸಾಂತ್ವನ ಭಟ್ಟಾಚಾರ್ಯ, ಟಿಎನ್ಐಇ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಮೆನನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದು ಸೆಪ್ಟೆಂಬರ್ 24, 2023 ರಂದು ಭುವನೇಶ್ವರದ ಮೇಫೇರ್ ಕನ್ವೆನ್ಷನ್‌ನಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಒಡಿಶಾ ಸಾಹಿತ್ಯೋತ್ಸವದ ಅತ್ಯಂತ ಅರ್ಥಪೂರ್ಣ ಸಮಾರೋಪ ಇದಾಗಿದೆ.

ವಿಜೇತರ ಬಗ್ಗೆ ಮಾಹಿತಿ:
ಪೆರುಮಾಳ್ ಮುರುಗನ್- ಅಪರೂಪದ ಸಹಾನುಭೂತಿ ಮತ್ತು ಒಳನೋಟದ ಸಾಹಿತಿ, ಅವರು ತಮ್ಮ ಕಾಲ್ಪನಿಕ, ಕಾಲ್ಪನಿಕವಲ್ಲದ ಮತ್ತು ಕಾವ್ಯದ ರಚನೆಯಲ್ಲಿ, ಗ್ರಾಮೀಣ ಜೀವನದ ಲಯವನ್ನು ಅಪರೂಪದ ಸೂಕ್ಷ್ಮ ವ್ಯತ್ಯಾಸದೊಂದಿಗೆ ಚಿತ್ರಿಸಿದ್ದಾರೆ. ಅನಿರುದ್ಧ ಕಣಿಸೆಟ್ಟಿ - ಲೇಖಕರು ಕೇವಲ ರಾಜರು, ಆಸ್ಥಾನಗಳು ಮತ್ತು ಯುದ್ಧಗಳ ಕಥೆಗಳಿಗೆ ಜೀವ ತುಂಬಿಲ್ಲ, ಅವರು ವಿಕಸನಗೊಳ್ಳುತ್ತಿರುವ ಸಾಹಿತ್ಯ, ನಂಬಿಕೆ, ಕಲೆಗಳು ಮತ್ತು ಭೌತಿಕ ಸಂಸ್ಕೃತಿಗಳೊಂದಿಗೆ ಸನ್ನಿವೇಶವನ್ನು ಹೊಂದಿಸಿದ್ದಾರೆ.

ದೇವಿಕಾ ರೇಗೆ - ಲೇಖಕರು ಯುವ ಮತ್ತು ಪ್ರಕ್ಷುಬ್ಧ ಭಾರತಕ್ಕೆ ಸಂಬಂಧಿಸಿದಂತೆ ಬರೆದಿದ್ದು, ವೈಯಕ್ತಿಕ ರಾಜಕೀಯ ಮತ್ತು ಸಾಮೂಹಿಕ ದುರಾಸೆಯ ಕಥೆಯನ್ನು ತಂದಿದ್ದಾರೆ. ಕ್ವಾರ್ಟರ್‌ಲೈಫ್‌ನೊಂದಿಗೆ, ಕಾದಂಬರಿಯು ಏನನ್ನು ಸಾಧಿಸಬಹುದು ಎಂಬುದರ ಮಿತಿಗಳನ್ನು ಅವರು ಅವಲೋಕಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT