ಬಿಕಿನಿ ಧರಿಸಿ ಬಸ್ಸಿಗೆ ಹತ್ತಿದ ಮಹಿಳೆ 
ದೇಶ

ಡೆಲ್ಲಿಯಲ್ಲೇ ಯಾಕೆ ಇಂತಹ ಕರ್ಮಕಾಂಡ: ಬಿಕಿನಿ ಧರಿಸಿ ಬಸ್ಸಿಗೆ ಹತ್ತಿದ ಮಹಿಳೆ, ಸೀಟು ಬಿಟ್ಟು ಹೋದ ಸಹ ಪ್ರಯಾಣಿಕ, ವಿಡಿಯೋ

ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್ ಗೆ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.

ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್ ಗೆ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.

ಜನದಟ್ಟಣೆಯ ಬಸ್‌ನಲ್ಲಿ ಬಿಕಿನಿ ತೊಟ್ಟಿರುವ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ವಿಡಿಯೋದಲ್ಲಿ ಇತರ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ಸೆರೆಯಾಗಿದೆ. ಅವರಲ್ಲಿ ಕೆಲವರು ಆಶ್ಚರ್ಯಪಟ್ಟರೆ ಇತರರು ಅಸಡ್ಡೆ ತೋರುತ್ತಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲವರು ಈ ಉಡುಪನ್ನು ಸಾರ್ವಜನಿಕ ಸಾರಿಗೆಗೆ ಸೂಕ್ತವಲ್ಲ ಎಂದು ಟೀಕಿಸಿದರೇ, ಇನ್ನು ಕೆಲವರು ತನ್ನ ಸ್ವಂತ ಉಡುಪನ್ನು ಆಯ್ಕೆ ಮಾಡುವ ಮಹಿಳೆಯ ಹಕ್ಕನ್ನು ಸಮರ್ಥಿಸಿಕೊಂಡರು.

X ನಲ್ಲಿ ವೈರಲ್ ವೀಡಿಯೊ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ ಬಿಕಿನಿ ತೊಟ್ಟ ಮಹಿಳೆ ಬಸ್ ಹತ್ತಿದಳು. ಹತ್ತಿರ ನಿಂತಿದ್ದ ಇನ್ನೊಬ್ಬ ಮಹಿಳಾ ಪ್ರಯಾಣಿಕರು ಪಕ್ಕಕ್ಕೆ ಹೋಗುವಂತೆ ಪ್ರೇರೇಪಿಸಿದರು. ದೃಶ್ಯಾವಳಿಗಳು ಮುಂದುವರಿದಂತೆ, ಇನ್ನೊಬ್ಬ ಪ್ರಯಾಣಿಕನು ತಾನು ಕುಳಿತಿದ್ದ ಸೀಟನ್ನು ಬಿಟ್ಟು ಮಹಿಳೆಯಿಂದ ದೂರ ಹೋಗಲು ನಿರ್ಧರಿಸುತ್ತಾನೆ.

ಅಧಿಕಾರಿಗಳಿಂದ ಅಧಿಕೃತ ಪ್ರತಿಕ್ರಿಯೆ ಇಲ್ಲ!

ಇದೇ ವೇಳೆ ದೆಹಲಿ ಮೆಟ್ರೋದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಬ್ರಾ ಮತ್ತು ಮಿನಿಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರು. ವಿಡಿಯೋ ಆನ್‌ಲೈನ್‌ನಲ್ಲಿ ಕೋಲಾಹಲ ಉಂಟುಮಾಡಿತು. ಈ ಬಗ್ಗೆ ಮಾತನಾಡಿದ್ದ ಅಧಿಕಾರಿಗಳು ಸಾರ್ವಜನಿಕರು ಓಡಾಡುವ ಸಾರಿಗೆಯಲ್ಲಿ ಈ ರೀತಿಯ ಘಟನೆಗಳು ಸರಿಯಲ್ಲ ಎಂದು ಟೀಕಿಸಿದ್ದರು. ಆದರೆ ಇದು ನಡೆದಿದ್ದು ಬಸ್ ನಲ್ಲಿ ಆಗಿರುವುದರಿಂದ ಡಿಟಿಸಿ ಯಾವುದು ಪ್ರತಿಕ್ರಿಯೆ ಕೊಟ್ಟಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶವಿರೋಧಿ ಚಟುವಟಿಕೆ ಆರೋಪ: ಕಾಶ್ಮೀರ ಟೈಮ್ಸ್ ದಿನಪತ್ರಿಕೆ ಕಚೇರಿಯ SIA ದಾಳಿ; Ak-47 ಕಾರ್ಟ್ರಿಡ್ಜ್‌, ಗ್ರೆನೇಡ್ ಲಿವರ್‌ ವಶಕ್ಕೆ!

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರದ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ, 24 ಗಂಟೆಯೊಳಗೆ ಗಡಿಪಾರು!

"ಕೆಲಸದ ಹೊರೆ ನಿರ್ವಹಣೆ ಅಗತ್ಯವಿದ್ದರೆ, IPL ಬಿಡಿ": ಶುಭ್‌ಮನ್ ಗಿಲ್‌ಗೆ ಖಡಕ್ ಸಂದೇಶ!

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!

SCROLL FOR NEXT