ಟಾಲಿವುಡ್ ನಟಿ ಪೂನಂ ಕೌರ್ 
ದೇಶ

Sex Scandal: 'ಪ್ರಾಣಿಗಳೂ ಕೂಡ ಹೀಗೆ ಮಾಡಲ್ಲ'; Prajwal Revanna​ ವಿರುದ್ಧ ನಟಿ Poonam Kaur ಕಿಡಿ

ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಪೂನಂ ಕೌರ್ ಕಿಡಿಕಾರಿದ್ದು, ನಾವು ಹೀಗೆಯೇ ಇದ್ದರೆ ಈತ ಕೂಡ ತನ್ನ ಪ್ರಭಾವ ಬಳಸಿ ಬಚಾವ್ ಆಗ್ತಾರೆ ಎಂದು ಕಿಡಿಕಾರಿದ್ದಾರೆ.

ಹೈದರಾಬಾದ್: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಪೂನಂ ಕೌರ್ ಕಿಡಿಕಾರಿದ್ದು, ನಾವು ಹೀಗೆಯೇ ಇದ್ದರೆ ಈತ ಕೂಡ ತನ್ನ ಪ್ರಭಾವ ಬಳಸಿ ಬಚಾವ್ ಆಗ್ತಾರೆ ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿರುವ ನಟಿ ಪೂನಂ ಕೌರ್, 'ಸಚಿವರ ಮಗ ಹುಡುಗಿಯ ಫೋನ್ ಕದ್ದಾಲಿಕೆ ಮಾಡಿದ್ದಾನೆ. ಮತ್ತೊಬ್ಬ ಸಚಿವರ ಮಗ ಅಂಕಿತಾ ಎಂಬ ಹುಡುಗಿಯನ್ನು ಬೆಟ್ಟದಿಂದ ತಳ್ಳಿದ. ಮತ್ತೊಬ್ಬ ಹುಡುಗಿಗೆ ಸಚಿವರ ಮಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಮತ್ತೊಬ್ಬ ಸಚಿವ ಬಾಲಕಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಇದೀಗ ಮಾಜಿ ಸಚಿವರ ಮಗನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಿದೆ'.

'ಆತ 2,800ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರೆಲ್ಲರ ವಿಡಿಯೋ ಮಾಡಿರುವ ಬಗ್ಗೆ ಸಾವಿರಾರು ವಿಡಿಯೋಗಳು ಹರಿದಾಡುತ್ತಿವೆ. ಆತ ಹಣ ಮತ್ತು ಅಧಿಕಾರದಿಂದ ತಪ್ಪಿಸಿಕೊಂಡು ಜರ್ಮನಿಗೆ ಪರಾರಿಯಾಗಿದ್ದಾನೆ. ಪ್ರತಿ ಮಹಿಳೆಗೆ, ಪ್ರತಿ ಹೆಣ್ಣು ಮಗುವಿಗೆ, ಪ್ರತಿ ಸಹೋದರನಿಗೆ ನಾನು ಎರಡು ಕೈಗಳನ್ನು ಮುಗಿದು ಮನವಿ ಮಾಡುತ್ತೇನೆ.

ನಿಮ್ಮ ಪ್ರೀತಿಯ ಮಗಳು ಮತ್ತು ಸಹೋದರಿಗೆ ನ್ಯಾಯ ಸಿಗಬೇಕಾದರೆ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ. ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ಮತ ನೀಡಬೇಕು. ಹೆಣ್ಣನ್ನು ಹೆಣ್ಣೆಂದು ಪರಿಗಣಿಸುವ ವ್ಯಕ್ತಿಗೆ ಮತ ಹಾಕಬೇಕು'.

ಇಂಥವರು ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು?. ಅಲ್ಲದೇ ಜನ ತಿರುಗಿ ಬೀಳುವವರಿಗೂ ಇಂತವರನ್ನು ಶಿಕ್ಷಿಸಲು ಸಾಧ್ಯವೇ ಇಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಮತ ಹಾಕಬೇಡಿ ಎಂದು ವಿಡಿಯೋ ಮೂಲಕ ನಟಿ ಪೂನಂ ಕೌರ್ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT