ಬಂಧನ (ಸಂಗ್ರಹ ಚಿತ್ರ) online desk
ದೇಶ

ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಹೆಸರಿನಲ್ಲಿ 19 ವರ್ಷದ ಯುವಕನ ಅಪಹರಣ; ದರೋಡೆ

6 ಮಂದಿಯ ತಂಡ ಈ ಕುಕೃತ್ಯ ಎಸಗಿದ್ದು, ಅಪಹರಣಕ್ಕೆ ಒಳಗಾದ ಯುವಕನಿಂದ ಹಣ ದರೋಡೆ ಮಾಡಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ 19 ವರ್ಷದ ಯುವಕನನ್ನು ಅಪಹರಣ ಮಾಡಿ ದರೋಡೆ ಮಾಡಿರುವ ಘಟನೆ ಥಾಣೆ ನಗರದಲ್ಲಿ ವರದಿಯಾಗಿದೆ.

6 ಮಂದಿಯ ತಂಡ ಈ ಕುಕೃತ್ಯ ಎಸಗಿದ್ದು, ಅಪಹರಣಕ್ಕೆ ಒಳಗಾದ ಯುವಕನಿಂದ ಹಣ ದರೋಡೆ ಮಾಡಿದ್ದಾರೆ. ದರೋಡೆಗೂ ಮುನ್ನ ಆತನಿಗೆ ಸ್ಕ್ರೀನ್ ಶಾಟ್ ಒಂದನ್ನು ತೋರಿಸಿ ಅದನ್ನು ಕ್ರಿಪ್ಟೋ ಕರೆನ್ಸಿಯ ವರ್ಗಾವಣೆ ಎಂದು ಹೇಳಿದ್ದಾರೆ.

ಹಣ ನೀಡಲು ನಿರಾಕರಿಸಿದ್ದ ಯುವಕನನ್ನು ವಾಹನದೊಳಗೆ ಎಳೆದೊಯ್ದಿದ್ದು, ಮುಂಬ್ರಾ ಬೈಪಾಸ್ ಮೇಲ್ಸೇತುವೆ ಬಳಿ ಕರೆದೊಯ್ದು, 3000 ರೂಪಾಯಿಗಳನ್ನು ಕಿತ್ತುಕೊಂಡಿದ್ದಾರೆ. ಈ ಘಟನೆ ಸಂಬಂಧ FIR ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಾದ ಬಾಬು ಕೈಫ್, ಅರ್ಷದ್ ಆದಿಲ್ ಅನ್ಸಾರಿ, ಅಮೀರ್ ಖಾನ್, ಅಕಿಬ್ ಆರಿಫ್ ಖಾನ್, ಮೊಹಮ್ಮದ್ ಆದಿಲ್ ಅನ್ಸಾರಿ ಮತ್ತು ಫರ್ಹಾನ್ ಶೇಖ್ ಅವರು 19 ವರ್ಷದ ಯುವಕನನ್ನು ಹೋಗಲು ಬಿಡುವ ಮೊದಲು ಕ್ಯಾಮೆರಾದಲ್ಲಿ ಹೇಳುವಂತೆ ಒತ್ತಾಯಿಸಿದರು.

ಅರ್ಷದ್ ಮತ್ತು ಅಕಿಬ್ ಅವರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ನೌಪಾದ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT