ಬಂಧನ (ಸಂಗ್ರಹ ಚಿತ್ರ) online desk
ದೇಶ

ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಹೆಸರಿನಲ್ಲಿ 19 ವರ್ಷದ ಯುವಕನ ಅಪಹರಣ; ದರೋಡೆ

6 ಮಂದಿಯ ತಂಡ ಈ ಕುಕೃತ್ಯ ಎಸಗಿದ್ದು, ಅಪಹರಣಕ್ಕೆ ಒಳಗಾದ ಯುವಕನಿಂದ ಹಣ ದರೋಡೆ ಮಾಡಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ 19 ವರ್ಷದ ಯುವಕನನ್ನು ಅಪಹರಣ ಮಾಡಿ ದರೋಡೆ ಮಾಡಿರುವ ಘಟನೆ ಥಾಣೆ ನಗರದಲ್ಲಿ ವರದಿಯಾಗಿದೆ.

6 ಮಂದಿಯ ತಂಡ ಈ ಕುಕೃತ್ಯ ಎಸಗಿದ್ದು, ಅಪಹರಣಕ್ಕೆ ಒಳಗಾದ ಯುವಕನಿಂದ ಹಣ ದರೋಡೆ ಮಾಡಿದ್ದಾರೆ. ದರೋಡೆಗೂ ಮುನ್ನ ಆತನಿಗೆ ಸ್ಕ್ರೀನ್ ಶಾಟ್ ಒಂದನ್ನು ತೋರಿಸಿ ಅದನ್ನು ಕ್ರಿಪ್ಟೋ ಕರೆನ್ಸಿಯ ವರ್ಗಾವಣೆ ಎಂದು ಹೇಳಿದ್ದಾರೆ.

ಹಣ ನೀಡಲು ನಿರಾಕರಿಸಿದ್ದ ಯುವಕನನ್ನು ವಾಹನದೊಳಗೆ ಎಳೆದೊಯ್ದಿದ್ದು, ಮುಂಬ್ರಾ ಬೈಪಾಸ್ ಮೇಲ್ಸೇತುವೆ ಬಳಿ ಕರೆದೊಯ್ದು, 3000 ರೂಪಾಯಿಗಳನ್ನು ಕಿತ್ತುಕೊಂಡಿದ್ದಾರೆ. ಈ ಘಟನೆ ಸಂಬಂಧ FIR ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಾದ ಬಾಬು ಕೈಫ್, ಅರ್ಷದ್ ಆದಿಲ್ ಅನ್ಸಾರಿ, ಅಮೀರ್ ಖಾನ್, ಅಕಿಬ್ ಆರಿಫ್ ಖಾನ್, ಮೊಹಮ್ಮದ್ ಆದಿಲ್ ಅನ್ಸಾರಿ ಮತ್ತು ಫರ್ಹಾನ್ ಶೇಖ್ ಅವರು 19 ವರ್ಷದ ಯುವಕನನ್ನು ಹೋಗಲು ಬಿಡುವ ಮೊದಲು ಕ್ಯಾಮೆರಾದಲ್ಲಿ ಹೇಳುವಂತೆ ಒತ್ತಾಯಿಸಿದರು.

ಅರ್ಷದ್ ಮತ್ತು ಅಕಿಬ್ ಅವರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ನೌಪಾದ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್