ಪ್ರಧಾನಿ ನರೇಂದ್ರ ಮೋದಿ  
ದೇಶ

Partition Horrors Remembrance Day: ದೇಶಕ್ಕಾಗಿ ಧೈರ್ಯ, ತ್ಯಾಗ ತೋರಿಸಿದವರಿಗೆ ಗೌರವ ಸಲ್ಲಿಸುವ ದಿನ- ಪ್ರಧಾನಿ ಮೋದಿ

ದೇಶದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ರಕ್ಷಿಸಲು ಸರ್ಕಾರದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ. ದೇಶದ ವಿಭಜನೆಯಿಂದ ಸಾವಿರಾರು ಮಂದಿಯ ಮೇಲೆ ಪರಿಮಾಮ ಬೀರಿದ್ದು ಅನೇಕರು ತೊಂದರೆ ಅನುಭವಿಸಿದ್ದಾರೆ ಎಂದರು.

ನವದೆಹಲಿ: ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನಕ್ಕೆ ಮುನ್ನ ಇಂದು ಬುಧವಾರ ಆಗಸ್ಟ್ 14 ವಿಭಜನೆಯ ಭಯಾನಕ ನೆನಪಿನ ದಿನ (Partition Horrors Remembrance Day) ಎಂದು ಆಚರಿಸಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟಾಗ್ ಟ್ರೆಂಡಿಂಗ್ ನಲ್ಲಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಈ ದಿನವನ್ನು ಸ್ಮರಿಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ದೇಶದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ರಕ್ಷಿಸಲು ಸರ್ಕಾರದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ. ದೇಶದ ವಿಭಜನೆಯಿಂದ ಸಾವಿರಾರು ಮಂದಿಯ ಮೇಲೆ ಪರಿಣಾಮ ಬೀರಿದ್ದು ಅನೇಕರು ತೊಂದರೆ ಅನುಭವಿಸಿದ್ದಾರೆ ಎಂದರು.

ದೇಶಕ್ಕಾಗಿ ಧೈರ್ಯ, ತ್ಯಾಗ ತೋರಿಸಿದವರಿಗೆ ಗೌರವ ಸಲ್ಲಿಸುವ ದಿನವಾಗಿದೆ, ಇದು ಮಾನವನ ಸ್ಥಿತಿಸ್ಥಾಪಕತ್ವದ ಶಕ್ತಿಯನ್ನು ವಿವರಿಸುತ್ತದೆ. ವಿಭಜನೆಯಿಂದ ಪ್ರಭಾವಿತರಾದ ಬಹಳಷ್ಟು ಜನರು ತಮ್ಮ ಜೀವನವನ್ನು ಪುನರ್ನಿರ್ಮಿಸಿ ಯಶಸ್ಸು ಪಡೆಯಲು ಶ್ರಮಿಸಿದರು. ಇಂದು, ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ಯಾವಾಗಲೂ ರಕ್ಷಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಹೇಳಿದ್ದಾರೆ.

ವಿಭಜನೆಯ ಭೀಕರತೆಯನ್ನು ಸ್ಮರಿಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಇತಿಹಾಸದ ಅತ್ಯಂತ ಭೀಕರ ಸನ್ನಿವೇಶಗಳಲ್ಲಿ ಅಮಾನವೀಯ ನೋವುಗಳನ್ನು ಅನುಭವಿಸಿದ, ಜೀವ ಕಳೆದುಕೊಂಡ, ನಿರಾಶ್ರಿತರಾದ ಲಕ್ಷಾಂತರ ಜನರಿಗೆ ಗೌರವ ಸಲ್ಲಿಕೆಗಳು ಎಂದಿದ್ದಾರೆ.

ತನ್ನ ಇತಿಹಾಸವನ್ನು ನೆನಪಿಸಿಕೊಳ್ಳುವ ರಾಷ್ಟ್ರ ಮಾತ್ರ ತನ್ನ ಭವಿಷ್ಯವನ್ನು ನಿರ್ಮಿಸಲು ಮತ್ತು ಶಕ್ತಿಯುತವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಈ ದಿನವನ್ನು ಆಚರಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಒಂದು ಅಡಿಪಾಯದ ಅಭಿಯಾನವಾಗಿದೆ ಎಂದರು.

ವಿಭಜನೆಯ ಭಯಾನಕ ಸ್ಮರಣೆ ದಿನ: ಪ್ರಧಾನಿ ನರೇಂದ್ರ ಮೋದಿ ಅವರು 2021 ರಲ್ಲಿ ಆಗಸ್ಟ್ 14 ರಂದು 'ವಿಭಜನ್ ವಿಭಿಷಿಕಾ ಸ್ಮೃತಿ ದಿವಸ್' ಅಥವಾ ದೇಶ ವಿಭಜನೆಯ ಸಮಯದಲ್ಲಿ ಹುತಾತ್ಮರಾದವರ ನೆನಪಿಗಾಗಿ ಪ್ರತಿ ವರ್ಷ ದೇಶ ವಿಭಜನೆಯ ಭಯಾನಕ ಸ್ಮರಣೆ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿದ್ದರು.

ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು. ದ್ವೇಷ ಮತ್ತು ಹಿಂಸೆಯಿಂದಾಗಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ನಮ್ಮ ಜನರ ಹೋರಾಟಗಳು ಮತ್ತು ತ್ಯಾಗಗಳ ನೆನಪಿಗಾಗಿ ಆಗಸ್ಟ್ 14 ನ್ನು ವಿಭಜನೆಯ ಭೀಕರ ಸ್ಮರಣಾರ್ಥ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ 2021 ರಲ್ಲಿ ಟ್ವೀಟ್ ಮಾಡಿದ್ದರು.

ಭಾರತ ದೇಶ ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಪ್ರತಿ ವರ್ಷ ಆಗಸ್ಟ್ 15 ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನವು ಯಾವುದೇ ರಾಷ್ಟ್ರಕ್ಕೆ ಸಂತೋಷದಾಯಕ ಮತ್ತು ಹೆಮ್ಮೆಯ ಸಂದರ್ಭವಾಗಿದೆ. ಸ್ವಾತಂತ್ರ್ಯದ ಸಂತೋಷದೊಂದಿಗೆ ವಿಭಜನೆಯ ಕಹಿ ಅನುಭವವನ್ನು ಭಾರತ ದೇಶ ಕಂಡಿದೆ.

ದೇಶ ವಿಭಜನೆ: 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜನೆಯಾದಾಗ ಈ ದಿನ ಅನೇಕ ಜನರು ಸಹಿಸಲಾಗದ ನೋವನ್ನು ಅನುಭವಿಸಿದರು. 15 ಮಿಲಿಯನ್ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ಪಂಜಾಬ್, ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಸಮೃದ್ಧವಾಗಿರುವ ಪ್ರದೇಶವು ವಿಶೇಷವಾಗಿ ಕಷ್ಟಕರವಾಗಿತ್ತು, ಭೂಮಿ ಮತ್ತು ಸಂಪನ್ಮೂಲಗಳ ವಿಭಜನೆಯು ದುಃಖವನ್ನು ಉಲ್ಬಣಗೊಳಿಸಿತು.

ವಿಭಜನೆಯಿಂದಾಗಿ, ಅನೇಕ ಗಲಭೆಗಳೂ ನಡೆದವು. ಈ ಗಲಭೆಗಳಿಂದಾಗಿ ಲಕ್ಷಾಂತರ ಜನರು ಮತ್ತೊಮ್ಮೆ ಹೊಸ ನಗರಗಳು ಮತ್ತು ಹೊಸ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಈ ಅವಧಿಯಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT