ಗೆಲಾಕ್ಸಿ ಥಿಯೇಟರ್  
ದೇಶ

ಮುಂಬೈ: ಥಿಯೇಟರ್ ನಲ್ಲಿ 'ಸ್ಪ್ರೇ'; ಪ್ರೇಕ್ಷಕರಿಗೆ ಕೆಮ್ಮು, ವಾಂತಿ; Pushpa 2 ಪ್ರದರ್ಶನಕ್ಕೆ ಅಡ್ಡಿ

ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ.

ಮುಂಬೈ: ಬಹುನಿರೀಕ್ಷಿತ ' Pushpa 2: The Rule' ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆದಿರುವಂತೆಯೇ ಥಿಯೇಟರ್ ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ಪ್ರೇ' ಸಿಂಪಡಿಸಿ ಪ್ರದರ್ಶನಕ್ಕೆ ಅಡ್ಡಿಯಾದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.

ಬಾಂದ್ರಾದ ಗೆಲಾಕ್ಸಿ ಥಿಯೇಟರ್ ನಲ್ಲಿ ನಡೆದಿರುವ ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ. ಬಳಿಕ ಸುಮಾರು 15-20 ನಿಮಿಷಗಳ ಕಾಲ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.

ಇಂಟರ್ವಲ್ ಮುಗಿಯುದ ನಂತರ ಥಿಯೇಟರ್ ಒಳಗೆ ಹೋದಾಗ, ಅಪರಿಚಿತ ವ್ಯಕ್ತಿಯೊಬ್ಬ 'ಸ್ಪ್ರೇ' ಸಿಂಪಡಿಸಿರುವುದು ಕಂಡುಬಂದಿತ್ತು. ನಂತರ ಸುಮಾರು 10-15 ನಿಮಿಷಗಳ ಕಾಲ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಬಂದು ಎಲ್ಲಾರನ್ನು ಪರಿಶೀಲಿಸಿದರು ಎಂದು ಪ್ರೇಕ್ಷಕ ದೀನ್ ದಯಾಳ್ ತಿಳಿಸಿದರು.

ಚಿತ್ರ ಪ್ರದರ್ಶನ ಮುಗಿದ ನಂತರ ಥಿಯೇಟರ್ ಹೊರಗೆ ಬಂದು ಮಾತನಾಡಿದ ರಂಜಾನ್, ವಿರಾಮದ ನಂತರ ಕೆಮ್ಮ ಆರಂಭವಾಯಿತು. ಬಾತ್ ರೂಂ ಗೆ ಹೋಗಿ ವಾಂತಿ ಮಾಡಿದ್ದೇವು. ಸುಮಾರು 10-15 ನಿಮಿಷ ಸ್ಪ್ರೇ ವಾಸನೆ ಇತ್ತು. ಬಾಗಿಲು ತೆಗೆದ ನಂತರ ವಾಸನೆ ಹೋಯಿತು. ನಂತರ ಚಿತ್ರ ಪ್ರದರ್ಶನ ಪುನರಾರಂಭವಾಯಿತು ಎಂದು ಹೇಳಿದರು.

ಡಿಸೆಂಬರ್ 4 ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋ ವೇಳೆ ವೇಳೆಯಲ್ಲಿ ಭಾರಿ ಜನಸಂದಣಿಯಿಂದ ಉಂಟಾದ ನೂಕು ನುಗ್ಗಲಿನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅವರ ಮಗು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮೃತ ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT