ಗೆಲಾಕ್ಸಿ ಥಿಯೇಟರ್  
ದೇಶ

ಮುಂಬೈ: ಥಿಯೇಟರ್ ನಲ್ಲಿ 'ಸ್ಪ್ರೇ'; ಪ್ರೇಕ್ಷಕರಿಗೆ ಕೆಮ್ಮು, ವಾಂತಿ; Pushpa 2 ಪ್ರದರ್ಶನಕ್ಕೆ ಅಡ್ಡಿ

ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ.

ಮುಂಬೈ: ಬಹುನಿರೀಕ್ಷಿತ ' Pushpa 2: The Rule' ದೇಶಾದ್ಯಂತ ಭರ್ಜರಿ ಓಪನಿಂಗ್ ಪಡೆದಿರುವಂತೆಯೇ ಥಿಯೇಟರ್ ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ಪ್ರೇ' ಸಿಂಪಡಿಸಿ ಪ್ರದರ್ಶನಕ್ಕೆ ಅಡ್ಡಿಯಾದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.

ಬಾಂದ್ರಾದ ಗೆಲಾಕ್ಸಿ ಥಿಯೇಟರ್ ನಲ್ಲಿ ನಡೆದಿರುವ ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಂಟರ್ವಲ್ ಮುಗಿಯುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿಯೊಬ್ಬ ಸಿಂಪಡಿಸಿದ ಸ್ಪ್ರೇನಿಂದ ವಾಂತಿ, ಗಂಟಲು ಕೆರೆತ, ವಾಂತಿ ಮತ್ತಿತರ ಕಿರಿಕಿರಿ ಉಂಟಾಗಿದೆ. ಬಳಿಕ ಸುಮಾರು 15-20 ನಿಮಿಷಗಳ ಕಾಲ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.

ಇಂಟರ್ವಲ್ ಮುಗಿಯುದ ನಂತರ ಥಿಯೇಟರ್ ಒಳಗೆ ಹೋದಾಗ, ಅಪರಿಚಿತ ವ್ಯಕ್ತಿಯೊಬ್ಬ 'ಸ್ಪ್ರೇ' ಸಿಂಪಡಿಸಿರುವುದು ಕಂಡುಬಂದಿತ್ತು. ನಂತರ ಸುಮಾರು 10-15 ನಿಮಿಷಗಳ ಕಾಲ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಬಂದು ಎಲ್ಲಾರನ್ನು ಪರಿಶೀಲಿಸಿದರು ಎಂದು ಪ್ರೇಕ್ಷಕ ದೀನ್ ದಯಾಳ್ ತಿಳಿಸಿದರು.

ಚಿತ್ರ ಪ್ರದರ್ಶನ ಮುಗಿದ ನಂತರ ಥಿಯೇಟರ್ ಹೊರಗೆ ಬಂದು ಮಾತನಾಡಿದ ರಂಜಾನ್, ವಿರಾಮದ ನಂತರ ಕೆಮ್ಮ ಆರಂಭವಾಯಿತು. ಬಾತ್ ರೂಂ ಗೆ ಹೋಗಿ ವಾಂತಿ ಮಾಡಿದ್ದೇವು. ಸುಮಾರು 10-15 ನಿಮಿಷ ಸ್ಪ್ರೇ ವಾಸನೆ ಇತ್ತು. ಬಾಗಿಲು ತೆಗೆದ ನಂತರ ವಾಸನೆ ಹೋಯಿತು. ನಂತರ ಚಿತ್ರ ಪ್ರದರ್ಶನ ಪುನರಾರಂಭವಾಯಿತು ಎಂದು ಹೇಳಿದರು.

ಡಿಸೆಂಬರ್ 4 ರಂದು ಹೈದರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋ ವೇಳೆ ವೇಳೆಯಲ್ಲಿ ಭಾರಿ ಜನಸಂದಣಿಯಿಂದ ಉಂಟಾದ ನೂಕು ನುಗ್ಗಲಿನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅವರ ಮಗು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮೃತ ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಡಿ: ತಮಿಳುನಾಡು CM Vijay ಭೇಟಿಗೆ ಬ್ರೇಕ್ ಹಾಕಿದ ಡಿಕೆಶಿ! "ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ" ಎಂದ ಸಿಎಂ

ಕಾವೇರಿ ಹೋರಾಟ: 'ಕೈ ಮುಗಿದು ಕೇಳುತ್ತೇನೆ.. ಬಂದ್ ಬೇಡ, ರಾಜ್ಯದ ಹಿತ ಕಾಪಾಡಲು ಎಲ್ಲ ಕಾನೂನು ಹೋರಾಟ ನಡೆಸಿದ್ದೇವೆ': CM ಡಿಕೆ ಶಿವಕುಮಾರ್ ಮನವಿ

ದೇಶದ ಅರ್ಧದಷ್ಟು ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್; ನಂಬರ್ ಒನ್ ಯಾರು? ಡಿಕೆಶಿ ಮೇಲೆ ಇರುವ ಪ್ರಕರಣಗಳೇಷ್ಟು?

ಕಾವೇರಿ ಕಿಚ್ಚು: KRSಗೆ ಬಿಜೆಪಿ ಮುತ್ತಿಗೆ ಯತ್ನ, ವಿಜಯೇಂದ್ರ, ಆರ್. ಅಶೋಕ್ ಸೇರಿ ಹಲವು ನಾಯಕರು ವಶಕ್ಕೆ!

ಕಾವೇರಿ ಜಲ ವಿವಾದ: ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್; ವಾಟಾಳ್ ನಾಗರಾಜ್ ಘೋಷಣೆ