ಅಜಿತ್ ಪವಾರ್-ಶರದ್ ಪವಾರ್ 
ದೇಶ

ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು ಚಿಹ್ನೆ: ಶರದ್ ಪವಾರ್ ಗೆ ತೀವ್ರ ಹಿನ್ನಡೆ!

ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.

ನವದೆಹಲಿ: ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ. 

ಚುನಾವಣಾ ಆಯೋಗದೊಂದಿಗೆ ಈ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದ್ದು, ಶರದ್ ಪವಾರ್ ಅವರ ಕಡೆಯವರು ಕೂಡ ವಾದ ಮಂಡಿಸಿದ್ದರು. ಆದರೆ ಇದೀಗ ಅಲ್ಲಿಂದ ಅಜಿತ್ ಬಣಕ್ಕೆ ಜಯ ಸಿಕ್ಕಿದ್ದು ನಿಜವಾದ ಎನ್‌ಸಿಪಿ ಎಂದರೆ ಅಜಿತ್ ಬಣ ಎಂದು ಒತ್ತಿ ಹೇಳಿದೆ.

ಕಳೆದ ವರ್ಷವೇ, ಅಜಿತ್ ಬಣ ಬಂಡಾಯವೆದ್ದು ಎನ್‌ಸಿಪಿಯನ್ನು ಎರಡು ತುಂಡು ಮಾಡಿತ್ತು. ಅನೇಕ ಶಾಸಕರ ಜೊತೆಗೂಡಿ ಶಿಂಧೆ ಸರ್ಕಾರವನ್ನು ಬೆಂಬಲಿಸಿದರು. ಈ ಕಾರಣಕ್ಕೆ ಅಜಿತ್ ಉಪ ಮುಖ್ಯಮಂತ್ರಿಯೂ ಆದರು. ಆಗ ಅಜಿತ್ ಅವರು ನಿಜವಾದ ಎನ್‌ಸಿಪಿ ಎಂದು ಹೇಳಿಕೊಂಡಿದ್ದರು. ಇದರ ಹಿಂದಿನ ತರ್ಕವೆಂದರೆ ತಮಗೆ ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ವಾದಿಸಿದ್ದರು. ಅದೇ ಸಮಯದಲ್ಲಿ, ಶರದ್ ಪವಾರ್ ಕೂಡ ತಮ್ಮ ಹಕ್ಕು ಮಂಡಿಸಿದ್ದರು. ಶರದ್ ಅಜಿತ್ ಅನ್ನು ಹೊರಹಾಕುವ ಕೆಲಸವನ್ನು ಮಾಡಿದ್ದಾರೆ.

ಆದರೆ ಇದೀಗ ಚುನಾವಣಾ ಆಯೋಗವು ಅಖಾಡದಲ್ಲಿನ ಎಲ್ಲಾ ಸಮೀಕರಣಗಳನ್ನು ಬದಲಾಯಿಸಿದೆ. ಇಸಿ ಅಜಿತ್ ಬಣಕ್ಕೆ ದೊಡ್ಡ ರಿಲೀಫ್ ನೀಡಿದ್ದು, ಅವರನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT