ಅಭಿಷೇಕ್ ಮತ್ತು ಅಂಜಲಿ 
ದೇಶ

ಗಾಜಿಯಾಬಾದ್ ದಂಪತಿ ದುರಂತ: ಹೃದಯಾಘಾತದಿಂದ ಪತಿ ಸಾವು, ಕಟ್ಟಡದಿಂದ ಜಿಗಿದು ಪತ್ನಿ ಆತ್ಮಹತ್ಯೆ

ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 23 ವರ್ಷದ ಮಹಿಳೆ ತನ್ನ ವಸತಿ ಕಟ್ಟಡದ 7ನೇ ಮಹಡಿಯಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ನವದೆಹಲಿ: ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ 23 ವರ್ಷದ ಮಹಿಳೆ ತನ್ನ ವಸತಿ ಕಟ್ಟಡದ 7ನೇ ಮಹಡಿಯಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಪತಿಯ ಮೃತದೇಹವನ್ನು ಮನೆಗೆ ತಂದ ಕೆಲವೇ ಕ್ಷಣಗಳಲ್ಲಿ ಪತ್ನಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಗಾಜಿಯಾಬಾದ್‌ನ ವೈಶಾಲಿ ಪ್ರದೇಶದ ಸೆಕ್ಟರ್ 3 ರಲ್ಲಿ ಹೈರೈಸ್ ಅಲ್ಕಾನ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಈ ದುರಂತ ಘಟನೆ ವರದಿಯಾಗಿದೆ. ಮೃತ ದಂಪತಿಯನ್ನು ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಭಿಷೇಕ್ ಮತ್ತು ಅಂಜಲಿ ಎಂದು ಗುರುತಿಸಲಾಗಿದೆ.

ಗಾಜಿಯಾಬಾದ್ ಪೊಲೀಸ್ ಅಧಿಕಾರಿಯ ಪ್ರಕಾರ, ಅಭಿಷೇಕ್ ಮತ್ತು ಅಂಜಲಿ ಇಬ್ಬರೂ ಸೋಮವಾರ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್ ಅವರ ಆರೋಗ್ಯ ಹದಗೆಟ್ಟಿತು ಮತ್ತು ಅವರನ್ನು ಮೊದಲು ಗುರು ತೇಗ್ ಬಹದೌರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ದಕ್ಷಿಣ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.

ಅಂಜಲಿ ಆಸ್ಪತ್ರೆಯಲ್ಲಿ ಸ್ವಲ್ಪ ಸಮಯದವರೆಗೆ ತನ್ನ ಗಂಡನ ಪಕ್ಕದಲ್ಲಿದ್ದರು. ಆದರೆ ಕೆಲವು ಗಂಟೆಗಳ ನಂತರ ಅಂಜಲಿ ಸಂಜೆ ಗಾಜಿಯಾಬಾದ್‌ನಲ್ಲಿರುವ ತನ್ನ ಮನೆಗೆ ಮರಳಿದ್ದರು. ಅಭಿಷೇಕ್ ಇನ್ನೂ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಪತ್ನಿ ಮನೆಗೆ ತೆರಳಿದ ಕೆಲವು ಗಂಟೆಗಳ ನಂತರ ಅಭಿಷೇಕ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಸಾವಿಗೆ ಹೃದಯಾಘಾತವೇ ಕಾರಣ ಎಂದು ಗುರುತಿಸಲಾಗಿದೆ.

ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅಭಿಷೇಕ್ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ನಂತರ ಮೃತದೇಹವನ್ನು ಗಾಜಿಯಾಬಾದ್‌ನ ಅಲ್ಕಾನ್ ಅಪಾರ್ಟ್‌ಮೆಂಟ್‌ಗೆ ತೆಗೆದುಕೊಂಡು ಹೋಗಲಾಗಿದೆ. ಪತಿಯ ಹಠಾತ್ ಸಾವಿನ ಸುದ್ದಿ ಕೇಳಿದ ಅಂಜಲಿ ತೀವ್ರ ಆಘಾತಕ್ಕೊಳಗಾಗಿದ್ದರು.

ಅಭಿಷೇಕ್ ಶವವನ್ನು ಲಿವಿಂಗ್ ರೂಮ್‌ನಲ್ಲಿ ನೆಲದ ಮೇಲೆ ಇರಿಸಲಾಗಿತ್ತು ಮತ್ತು ಅಂಜಲಿ ಅದರ ಪಕ್ಕದಲ್ಲಿ ಕುಳಿತು ಅಳುತ್ತಿದ್ದರು. ಇದ್ದಕ್ಕಿದ್ದಂತೆ ಎದ್ದು ನಿಂತು ಬಾಲ್ಕನಿಯತ್ತ ಓಡಿ ಹೋಗಿ ಕಟ್ಟಡದಿಂದ ಜಿಗಿದರು ಎಂದು ಅಂಜಲಿ ಸಂಬಂಧಿಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು; 100 ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ- ಕಾಂಗ್ರೆಸ್

ಬಾಯಿ ಮುಚ್ಚಿಕೊಂಡು ಇರಬೇಕೆಂಬ ಆದೇಶವನ್ನು ಎಲ್ಲರೂ ಪಾಲಿಸಬೇಕು: ನಾನು- ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ; ಡಿಕೆ ಶಿವಕುಮಾರ್

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ಅಂಬಾನಿ, ಪತ್ನಿಗೆ EDಯಿಂದ ಹೊಸ ಸಮನ್ಸ್ ಜಾರಿ

ನೀವು ಪೆಂಗ್ವಿನ್ ಸಂಸ್ಥೆಯನ್ನು ನಂಬುತ್ತೀರೋ ಎಂಎಂ ನರವಾಣೆ ಅವರನ್ನು ನಂಬುತ್ತೀರೋ?: ವರದಿಗಾರರಿಗೆ ರಾಹುಲ್ ಗಾಂಧಿ ಪ್ರಶ್ನೆ

ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆ!

SCROLL FOR NEXT