ಥಿಂಕ್ ಎಡುವಿನಲ್ಲಿ ವಿವಿಧ ಪಕ್ಷಗಳ ನಾಯಕರು 
ದೇಶ

ಟಿವಿ ಜನರ್ಲಿಸಂ ರೋಚಕತೆಗಿಂತ ವಸ್ತುನಿಷ್ಠತೆ ಮೇಲೆ ಗಮನ ಕೇಂದ್ರೀಕರಿಸಬೇಕು: ThinkEdu ನಲ್ಲಿ ರಾಜಕೀಯ ನಾಯಕರು

ವಿ ಪತ್ರಿಕೋದ್ಯಮ ಮನೋರಂಜನೆ ಹಾಗೂ ಸೆನ್ಸೆಷನಲ್ ಗಿಂತ ದೂರವಾಗಿ ವಸ್ತುನಿಷ್ಠ ಹಾಗೂ ವಿಷಯಾಧಾರಿತ ಚರ್ಚೆಗೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ರಾಜಕೀಯ ನಾಯಕರು ಒತ್ತಿ ಹೇಳಿದ್ದಾರೆ.

ಚೆನ್ನೈ:  ಟಿವಿ ಪತ್ರಿಕೋದ್ಯಮ ಮನೋರಂಜನೆ ಹಾಗೂ ಸೆನ್ಸೆಷನಲ್ ಗಿಂತ ದೂರವಾಗಿ ವಸ್ತುನಿಷ್ಠ ಹಾಗೂ ವಿಷಯಾಧಾರಿತ ಚರ್ಚೆಗೆ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ ಎಂದು ರಾಜಕೀಯ ನಾಯಕರು ಒತ್ತಿ ಹೇಳಿದ್ದಾರೆ.

ಚೆನ್ನೈನಲ್ಲಿ  ಗುರುವಾರ SASTRA ವಿಶ್ವವಿದ್ಯಾನಿಲಯ ಆಯೋಜಿಸಿದ್ದ 13th ThinkEdu ಕಾನ್ಕ್ಲೇವ್ 2024 ಪ್ರಸ್ತುತದಲ್ಲಿನ ಟಿವಿ ಪತ್ರಿಕೋದ್ಯಮ ಕುರಿತು ಮಾತನಾಡಿದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಎಂಕೆಯ ರಾಷ್ಟ್ರೀಯ ವಕ್ತಾರ ಧರಣಿಧರನ್ ಸೆಲ್ವಂ, ಟಿವಿ ಪತ್ರಿಕೋದ್ಯಮದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಚಾನೆಲ್‌ಗಳು ಕೇವಲ ರಾಜಕೀಯ ದೃಷ್ಟಿಕೋನಗಳನ್ನು ಬಯಸುವವರಿಗೆ ಮನರಂಜನೆ ಒದಗಿಸಬಾರದು ಎಂದರು. ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜೈ ಅಧ್ಯಕ್ಷತೆಯಲ್ಲಿ ನಡೆದ “ಪ್ರೈಮ್ ಟೈಮ್ ಪಾರ್ಟಿ ಟೈಮ್: ದಿ ಟಿವಿ ವಾರಿಯರ್ಸ್” ವಿಷಯದ ಕುರಿತು ಎರಡನೇ ದಿನದ ಸಮಾವೇಶದಲ್ಲಿ ಮಾತನಾಡಿದ ಸೆಲ್ವಂ, ಸಂಬಂಧಿತ ಜನರ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವ ಟಿವಿ ಚರ್ಚೆಗಳ ಅಗತ್ಯವನ್ನು ತಿಳಿಸಿದರು.

ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಸಮಿತಿಯ ಐಶ್ವರ್ಯ ಮಹಾದೇವ್ ಮಾತನಾಡಿ, ಟಿವಿ ಚರ್ಚೆ ವ್ಯವಸ್ಥಿತ ಕ್ಷೀಣತೆಗೆ ಪ್ರೈಮ್‌ಟೈಮ್ ವೀಕ್ಷಕರ ಆದ್ಯತೆ ಪೂರೈಸುವ ಒಲವು ಕಾರಣವಾಗಿದೆ. "ಹೆಚ್ಚುತ್ತಿರುವ ಹಣದುಬ್ಬರ ಅಥವಾ ಮಾನವ ಹಕ್ಕುಗಳ ಕಾಳಜಿಯಂತಹ ವಿಷಯಗಳ ಕುರಿತು ಅನೇಕರು ಚರ್ಚೆ ಬಯಸುತ್ತಾರೆ, ಆದರೆ ವಿಶಾಲವಾದ ಮಾರುಕಟ್ಟೆಯು ಕುತೂಹಲಕಾರಿ, ರಂಜನಿಯ ವಿಷಯಗಳ ಕಡೆಗೆ ಹೆಚ್ಚು ಒಲವು ತೋರುತ್ತಿದೆ, ಉದಾಹರಣೆಗೆ ನಿರ್ದಿಷ್ಟ ಪೂಜಾ ಸ್ಥಳಗಳಲ್ಲಿನ ಘಟನೆಗಳು ಅಥವಾ ನದಿಗಳಲ್ಲಿ ಸ್ನಾನ ಮಾಡುವ ವ್ಯಕ್ತಿಗಳತ್ತ ಹೆಚ್ಚಿನ ಆದ್ಯತೆ ನೀಡುವುದು ವಿಷಾಧನೀಯವಾಗಿದೆ ಎಂದರು.

ಇಂತಹವುಗಳನ್ನು ರಾಜಕೀಯ ಆಯಾಮಾದಲ್ಲಿ ಮನಬಂದಂತೆ ಹೇಳುವ ಮೂಲಕ ಸಾಮಾನ್ಯವಾಗಿ ಪ್ರಾಥಮಿಕ ಕೇಂದ್ರಬಿಂದುವಾಗುತ್ತವೆ ಎಂದು ಮಹಾದೇವ್ ಹೇಳಿದರು.  ದ್ವೇಷ ಪ್ರೋತ್ಸಾಹಿಸುವ ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವಿಕೆ ತಡೆಯುವ ಬದ್ಧತೆಯೊಂದಿಗೆ ಕಾಂಗ್ರೆಸ್ ಪಕ್ಷ ಕೆಲವೊಂದು ಚಾನೆಲ್ ಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು.  

ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಮಾತನಾಡಿ, ತಮಿಳು ಟಿವಿ ಚಾನೆಲ್ ಚರ್ಚೆಗಳಲ್ಲಿ ಅಸಮಾನ ಪ್ರಾತಿನಿಧ್ಯದ ಮೇಲೆ ಬೆಳಕು ಚೆಲ್ಲಿದರು. ರಚನಾತ್ಮಕ ಚರ್ಚೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡುವುದು ಅತ್ಯಗತ್ಯ. ದುರದೃಷ್ಟವಶಾತ್, ತಮಿಳುನಾಡಿನ ಸಂದರ್ಭದಲ್ಲಿ, ಅಂತಹ ಸಮಾನ ಪ್ರಾತಿನಿಧ್ಯವು ಗಮನಾರ್ಹವಾಗಿ ಇರುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT