ಭಾರತೀಯ ರೈಲ್ವೆ TNIE
ದೇಶ

ಟಿಕೆಟ್ ಕ್ಯಾನ್ಸಲ್‌ನಿಂದ ರೈಲ್ವೇಗೆ 6,112 ಕೋಟಿ ರೂ. ಗಳಿಕೆ, RTI ಬಹಿರಂಗ!

ಟಿಕೆಟ್‌ಗಳ ರದ್ದತಿಯಿಂದ ಭಾರತೀಯ ರೈಲ್ವೇಗೆ ಸಿಗುವ ಆದಾಯ ಎಷ್ಟು ಎಂಬ ಊಹೆ ನಿಮಗಿದೆಯೇ? ಹೌದು.. 2019 ರಿಂದ 2023ರ ನಡುವೆ ಸಂಗ್ರಹವಾದ ಮೊತ್ತ 6,112 ಕೋಟಿ ರೂಪಾಯಿ ಆಗಿದ್ದು ಇದನ್ನು ಸಣ್ಣ ಮೊತ್ತವೆಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಇದು ರಾಷ್ಟ್ರೀಯ ಸಾಗಣೆದಾರರ ಗಳಿಕೆಯ ಭಾಗವಲ್ಲ ಎಂದರು.

ರಾಯ್‌ಪುರ: ಟಿಕೆಟ್‌ಗಳ ರದ್ದತಿಯಿಂದ ಭಾರತೀಯ ರೈಲ್ವೇಗೆ ಸಿಗುವ ಆದಾಯ ಎಷ್ಟು ಎಂಬ ಊಹೆ ನಿಮಗಿದೆಯೇ? ಹೌದು.. 2019 ರಿಂದ 2023ರ ನಡುವೆ ಸಂಗ್ರಹವಾದ ಮೊತ್ತ 6,112 ಕೋಟಿ ರೂಪಾಯಿ ಆಗಿದ್ದು ಇದನ್ನು ಸಣ್ಣ ಮೊತ್ತವೆಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಇದು ರಾಷ್ಟ್ರೀಯ ಸಾಗಣೆದಾರರ ಗಳಿಕೆಯ ಭಾಗವಲ್ಲ ಎಂದರು.

ರಾಯಪುರ ಮೂಲದ ಸಾಮಾಜಿಕ ಕಾರ್ಯಕರ್ತ ಕುನಾಲ್ ಶುಕ್ಲಾ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಮನವಿಗೆ ಪ್ರತಿಕ್ರಿಯೆಯಾಗಿ ರೈಲ್ವೆ ಸಚಿವಾಲಯವು ಟಿಕೆಟ್ ರದ್ದತಿಯಿಂದ ಸಂಗ್ರಹವಾದ ವರ್ಷವಾರು ಮೊತ್ತವನ್ನು ಬಹಿರಂಗಪಡಿಸಿದೆ. ಆರ್‌ಟಿಐ ಕಾರ್ಯಕರ್ತನಿಗೆ ಸಿಕ್ಕ ಮಾಹಿತಿ ಪ್ರಕಾರ, 2019-20ನೇ ಸಾಲಿನಲ್ಲಿ ಟಿಕೆಟ್ ರದ್ದತಿಯಿಂದ 1,724 ಕೋಟಿ ರೂ., 2020-21ನೇ ಸಾಲಿನಲ್ಲಿ 710 ಕೋಟಿ ರೂ., 2021-22ನೇ ಸಾಲಿನಲ್ಲಿ 1,569 ಕೋಟಿ ರೂ., 2022-23ನೇ ಸಾಲಿನಲ್ಲಿ ರದ್ದತಿಯಿಂದ 2109.74 ಕೋಟಿ ರೂ. (ತಾತ್ಕಾಲಿಕ) ಸಂಗ್ರಹವಾಗಿದೆ.

ಒಟ್ಟಾರೆ ನಾಲ್ಕು ವರ್ಷಗಳು ಸೇರಿದರೆ ಭಾರತೀಯ ರೈಲ್ವೇಯು ಕೇವಲ ಟಿಕೆಟ್ ರದ್ದತಿಯಿಂದ 6,112 ಕೋಟಿ ರೂಪಾಯಿಗಳನ್ನು ಗಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಯಾಣಿಕರ ದರವನ್ನು 85 ಪ್ರತಿಶತದಷ್ಟು ಹೆಚ್ಚಿಸಲಾಗಿದೆ ಎಂದು ಶುಕ್ಲಾ ಹೇಳಿದರು.

ರೈಲ್ವೇ ಕೌಂಟರ್ ಟಿಕೆಟ್ ಅಥವಾ ಆನ್‌ಲೈನ್ ಇ-ಟಿಕೆಟ್ ಮೂಲಕ ಕಾಯ್ದಿರಿಸುವಿಕೆಗಾಗಿ ರೈಲ್ವೆ ಟಿಕೆಟ್‌ಗಳನ್ನು ಪಡೆಯಬಹುದು. ಆದಾಗ್ಯೂ, ಲಾಭ ಗಳಿಸುತ್ತಿರುವ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಸ್ (SECR) ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಲಾಸ್‌ಪುರ್, ವಿಕಾಸ್ ಕಶ್ಯಪ್ ಪ್ರಕಾರ, ರದ್ದತಿಯಿಂದ ಪಡೆದ ಮೊತ್ತವು ಟಿಕೆಟ್ ರದ್ದತಿಯ ವಿರುದ್ಧ ತೆಗೆದುಕೊಳ್ಳಲಾದ ಕನಿಷ್ಠ ಕ್ಲೆರಿಕಲ್ ಶುಲ್ಕಗಳು ಮತ್ತು ರೈಲ್ವೆಗೆ ಸೇರಿಸುವುದಿಲ್ಲ ಎಂದರು. ಟಿಕೆಟ್ ರದ್ದತಿಯ ಸಂಪೂರ್ಣ ಮೊತ್ತವು ಸ್ವತಂತ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗೆ ಹೋಗುತ್ತದೆ. ಭಾರತದಾದ್ಯಂತ ಪ್ರತಿದಿನ ಸುಮಾರು 70-80 ಲಕ್ಷದಷ್ಟು ಟಿಕೆಟ್‌ಗಳನ್ನು ಬುಕಿಂಗ್ ಆಗುತ್ತದೆ. ಆದರೆ ರದ್ದತಿಯಿಂದ ಸಂಗ್ರಹವಾಗಿರುವುದು ಸಣ್ಣ ಮೊತ್ತದ್ದು ಎಂದು ಕಶ್ಯಪ್ ಹೇಳಿದರು.

ಈ ಹಿಂದಿನ RTIಗೆ ಸಿಕ್ಕ ಮಾಹಿತಿ ಪ್ರಕಾರ, ವಲಯದಲ್ಲಿ 2020 ರಿಂದ ಏಪ್ರಿಲ್ 2023 ರವರೆಗೆ 67600 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು SECR ಒಪ್ಪಿಕೊಂಡಿದೆ. ಇದು ಅರ್ಜಿದಾರ ಕಮಲ್ ದುಬೆ ಬಿಲಾಸ್‌ಪುರದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಯಿತು. ರೈಲ್ವೇಯು ವಿವಿಧ ಕಾರಣಗಳಿಗಾಗಿ ಅನಿರೀಕ್ಷಿತವಾಗಿ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿರುವುದು ಪ್ರಯಾಣಿಕರ ಸಂಕಟವನ್ನು ಹೆಚ್ಚಿಸಿದೆ. ಅಂತಹ ಸುದೀರ್ಘ ಅನಾನುಕೂಲತೆ ಎಂದಿಗೂ ಕಡಿಮೆಯಾಗಿಲ್ಲ, ಆದರೆ ಅದೇ ಮಾರ್ಗಗಳಲ್ಲಿ ಸರಕು ರೈಲುಗಳ ಚಲನೆಗೆ ಯಾವುದೇ ನಿರ್ಬಂಧವಿಲ್ಲ. ನ್ಯಾಯಾಲಯವು ಇದನ್ನು ಗಂಭೀರ ಎಂದು ಕಳವಳ ವ್ಯಕ್ತಪಡಿಸಿತ್ತು. ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದ್ದರೆ ಅದೇ ಮಾರ್ಗದಲ್ಲಿ ಸರಕು ರೈಲುಗಳನ್ನು ಯಾವು ನೀತಿಯಡಿ ಓಡಿಸಲಾಗುತ್ತದೆ. ಈ ಬಗ್ಗೆ ಉತ್ತರವನ್ನು ಸಲ್ಲಿಸುವಂತೆ ರೈಲ್ವೆಗೆ ಸೂಚಿಸಿತು.

ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರಿಗೆ ಕೆಲವು ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕು ಅಥವಾ ಪ್ಯಾಸೆಂಜರ್ ರೈಲುಗಳ ಯಾವುದೇ ಸೇವೆಗಳು ಲಭ್ಯವಿಲ್ಲ ಎಂದು ತಿಳಿಸಬೇಕು. ಆಗ ಜನರು ಪರ್ಯಾಯ ಸಾರಿಗೆ ವಿಧಾನವನ್ನು ಆರಿಸಿಕೊಳ್ಳುತ್ತಾರೆ ಎಂದು ನ್ಯಾಯಾಲಯವು ರೈಲ್ವೆಗೆ ಕೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

SCROLL FOR NEXT