ಮದಗಜಗಳ ಕಾದಾಟ IANS
ದೇಶ

ಕೇರಳ: ದೇಗುಲ ಉತ್ಸವದ ವೇಳೆ ಮದಗಜಗಳ ಕಾದಾಟ, ಮಾವುತರು ಸೇರಿ ಹಲವರಿಗೆ ಗಾಯ, ವಿಡಿಯೋ ವೈರಲ್

ಕೇರಳದಲ್ಲಿ ಮತ್ತೊಂದು ಆನೆ ಸಂಘರ್ಷ ವರದಿಯಾಗಿದ್ದು, ದೇಗುಲ ಉತ್ಸವದ ವೇಳೆ ಸಂಪೂರ್ಣವಾಗಿ ಅಲಂಕರಿಸಿ ತಂದಿದ್ದ ಮದಗಜಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಹಲವು ಮಾವುತರಿಗೆ ಗಾಯಗಳಾಗಿವೆ.

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಆನೆ ಸಂಘರ್ಷ ವರದಿಯಾಗಿದ್ದು, ದೇಗುಲ ಉತ್ಸವದ ವೇಳೆ ಸಂಪೂರ್ಣವಾಗಿ ಅಲಂಕರಿಸಿ ತಂದಿದ್ದ ಮದಗಜಗಳು ಪರಸ್ಪರ ಕಾದಾಟಕ್ಕಿಳಿದಿದ್ದು, ಹಲವು ಮಾವುತರಿಗೆ ಗಾಯಗಳಾಗಿವೆ.

ಕೇರಳದ ತ್ರಿಶೂರ್​ನಲ್ಲಿ ನಡೆದ ಆರಾಟ್ಟುಪುಳ ಉತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಉತ್ಸವಕ್ಕಾಗಿ ಸಂಪೂರ್ಣವಾಗಿ ಅಲಂಕರಿಸಿದ ಎರಡು ಆನೆಗಳನ್ನು ತರಲಾಗಿತ್ತು. ಈ ವೇಳೆ ಆನೆಯೊಂದು ಮತ್ತೊಂದು ಆನೆಯೊಂದಿಗೆ ಘರ್ಷಣೆಗೆ ಇಳಿದಿದೆ.

ಸ್ಥಳೀಯ ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ 10.30 ರ ಸುಮಾರಿಗೆ ಗುರುವಾಯೂರು ರವಿಕೃಷ್ಣನ್ ಎಂಬ ಆನೆ ಹಿಂಸಾತ್ಮಕವಾಗಿ ವರ್ತಿಸಿದೆ. ನೋಡನೋಡುತ್ತಲೇ ಆನೆ ಸಂಘರ್ಷಕ್ಕೆ ಮುಂದಾಗಿದ್ದು. ತನ್ನನ್ನು ಹಿಡಿದಿದ್ದಾ ಮಾವುತರನ್ನೇ ತಳ್ಳಿ ಹಿಂಬಂದಿಯಲ್ಲಿದ್ದ ಮತ್ತೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನನ್ನು ಗುರಿಯಾಗಿಸಿಕೊಂಡು ಘರ್ಷಣೆಗೆ ಮುಂದಾಗಿದೆ.

ಈ ವೇಳೆ ಎರಡೂ ಆನೆಗಳ ನಡುವೆ ಘರ್ಷಣೆಯಾಗಿದ್ದು, ಈ ವೇಳೆ ಪುತ್ತುಪ್ಪಲ್ಲಿ ಅರ್ಜುನ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ಆದರೂ ಬಿಡದ ಗುರುವಾಯೂರು ರವಿಕೃಷ್ಣನ್ ಆನೆ ಅದನ್ನು ಅಟ್ಟಾಡಿಸಿದೆ. ಈ ವೇಳೆ ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.

ಏನಿದು ಘಟನೆ?

ಗುರುವಾಯೂರು ರವಿಕೃಷ್ಣನ್ ಮತ್ತು ಪುತ್ತುಪ್ಪಲ್ಲಿ ಅರ್ಜುನ ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆಗೆ ಸಿದ್ಧತೆ ಮಾಡಲಾಗಿತ್ತು. ಈ ದೇವಾಲಯದ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ರವಿಕೃಷ್ಣನ್ ಆನೆ ಕೆರಳಿತ್ತು, ಅದರ ಮುಂದೆ ಹೋಗುತ್ತಿದ್ದವನ ಮೇಲೆ ದಾಳಿ ಮಾಡಿತ್ತು. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಆನೆ ಮತ್ತೊಂದು ಬದಿಯಲ್ಲಿದ್ದ ಪುತ್ತುಪ್ಪಲ್ಲಿ ಅರ್ಜುನ ಆನೆ ಮೇಲೂ ದಾಳಿಗೆ ಮುಂದಾಗಿ ಎರಡೂ ಆನೆಗಳ ನಡುವೆ ಕಾಳಗ ನಡೆಯಿತು. ಆನೆಗಳನ್ನು ಹತೋಟೆಗೆ ತರಲು ಮಾವುತರು ಪರದಾಡಿದ್ದಾರೆ. ಒಂದು ಗಂಟೆಯ ಬಳಿಕ ಆನೆಗಳು ಶಾಂತವಾದವು ಬಳಿಕ ಸರಪಳಿ ಹಾಕಿ ದೇವಸ್ಥಾನಕ್ಕೆ ಕರೆತರಲಾಯಿತು.

ಆರಾಟ್ಟುಪುಳ ದೇವಾಲಯವನ್ನು 8ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಶ್ರೀರಾಮನ ಗುರು ವಶಿಷ್ಠರ ದೈವಿ ಆತ್ಮವು ಈ ದೇವಾಲಯದ ವಿಗ್ರಹಗಳಲ್ಲಿ ನೆಲೆಸಿದೆ ಎಂಬ ಪ್ರತೀತಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT