ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ 
ದೇಶ

''ನಾನು RSS ಸದಸ್ಯನಾಗಿದ್ದೆ, ಸಂಘಟನೆ ಬಯಸಿದರೆ ಮರಳಲು ಸಿದ್ಧ'': ವಿದಾಯ ಭಾಷಣದಲ್ಲಿ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ Chitta Ranjan Dash!

ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸದಸ್ಯರಾಗಿದ್ದವರು ಎಂದು ಹೇಳಿದ್ದಾರೆ.

ಕೋಲ್ಕತಾ: ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸದಸ್ಯರಾಗಿದ್ದವರು ಎಂದು ಹೇಳಿದ್ದಾರೆ.

ನ್ಯಾಯಾಧೀಶರು ಮತ್ತು ಬಾರ್‌ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಹೈಕೋರ್ಟ್‌ನಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಚಿತ್ತರಂಜನ್ ದಾಶ್, "ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯನಾಗಿದ್ದೆ ಎಂದು ಇಂದು ಹೇಳಿಕೊಳ್ಳುತ್ತಿದ್ದೇನೆ.

ನಾನು ನನ್ನ ಬಾಲ್ಯದಿಂದ ಮತ್ತು ನನ್ನ ಯೌವನದುದ್ದಕ್ಕೂ RSS ನೊಂದಿಗೆ ಇದ್ದೆ. ನಾನು ಧೈರ್ಯಶಾಲಿ, ನೇರವಾಗಿರಲು ಮತ್ತು ಇತರರಿಗೆ ಸಮಾನವಾದ ದೃಷ್ಟಿಕೋನವನ್ನು ಹೊಂದಲು ಸಂಘಟನೆಯಿಂದ ಕಲಿತಿದ್ದೇನೆ ಮತ್ತು ದೇಶಭಕ್ತಿ ಮತ್ತು ಕೆಲಸದ ಬದ್ಧತೆಯ ಪ್ರಜ್ಞೆಯ ಮೇಲೆ ಕೆಲಸ ಮಾಡುವುದನ್ನು ಕಲಿತಿದ್ದೇನೆ. ನಾನು ಸಂಘಟನೆಗೆ ತುಂಬಾ ಋಣಿಯಾಗಿದ್ದೇನೆ. ಯಾವುದೇ ಸಹಾಯಕ್ಕಾಗಿ ಅಥವಾ ಅವರು ಸಮರ್ಥವಾಗಿರುವ ಯಾವುದೇ ಕೆಲಸಕ್ಕಾಗಿ ತಮ್ಮನ್ನು ಕರೆದರೆ ಹಿಂತಿರುಗಲು ತಾವು ಸಿದ್ಧ ಎಂದು ಹೇಳಿದರು.

ಕೆಲಸದಿಂದಾಗಿ ಸುಮಾರು 37 ವರ್ಷಗಳ ಕಾಲ RSS ಸಂಘಟನೆಯಿಂದ ಸಂಸ್ಥೆಯಿಂದ ದೂರವಿದ್ದೆ. ನಾನು ಸಂಘಟನೆಯ ಸದಸ್ಯತ್ವವನ್ನು ನನ್ನ ವೃತ್ತಿಜೀವನದ ಯಾವುದೇ ಪ್ರಗತಿಗೆ ಬಳಸಿಲ್ಲ. ಏಕೆಂದರೆ ಅದು ಸಂಘಟನೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದ ದಾಶ್ ಹೇಳಿದರು.

ಅಲ್ಲದೆ ಶ್ರೀಮಂತ ವ್ಯಕ್ತಿಯಾಗಿರಲಿ, ಕಮ್ಯುನಿಸ್ಟ್ ಆಗಿರಲಿ ಅಥವಾ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಅಥವಾ ತೃಣಮೂಲ ಕಾಂಗ್ರೆಸ್‌ನಿಂದ ಬಂದವರೆಲ್ಲರನ್ನೂ ನಾನು ಸಮಾನವಾಗಿ ಪರಿಗಣಿಸಿದ್ದೇನೆ. ನನ್ನ ಮುಂದೆ ಎಲ್ಲರೂ ಸಮಾನರು, ನಾನು ಯಾರಿಗೂ ಅಥವಾ ಯಾವುದೇ ರಾಜಕೀಯ ತತ್ತ್ವಶಾಸ್ತ್ರ ಅಥವಾ ಕಾರ್ಯವಿಧಾನಕ್ಕಾಗಿ ಯಾವುದೇ ಪಕ್ಷಪಾತವನ್ನು ಹೊಂದಿಲ್ಲ ಎಂದರು.

ನ್ಯಾಯಾಧೀಶರಾಗಿ 14 ವರ್ಷಗಳ ನಂತರ ಇಂದು ನಿವೃತ್ತರಾಗಿರುವ ಜಸ್ಟೀಸ್ ದಾಶ್, ಒರಿಸ್ಸಾ ಹೈಕೋರ್ಟ್‌ನಿಂದ ಕೋಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆಯ ಮೂಲಕ ಬಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT