ಶಶಿ ತರೂರ್ 
ದೇಶ

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರುವುದು ಭಾರತಕ್ಕೆ ಒಳ್ಳೆಯದು: ಶಶಿ ತರೂರ್ ಕೊಟ್ಟ ಕಾರಣ ಇಷ್ಟು...!

ಟ್ರಂಪ್ ಅಧಿಕಾರಕ್ಕೆ ಬಂದಿರುವುದರೊಂದಿಗೆ ವಲಸೆ, ವ್ಯಾಪಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ

ನವದೆಹಲಿ: ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿರುವುದರೊಂದಿಗೆ ಭಾರತ- ಯುಎಸ್ ಸಂಬಂಧ ಮುಂದುವರೆಯುತ್ತದೆ. ಅವರು ಚೀನಾದ ವಿರುದ್ಧ ಕಠಿಣವಾಗಿರುವುದು ನಮಗೆ ಒಳ್ಳೆಯದು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ.

ಟ್ರಂಪ್ ಅಧಿಕಾರಕ್ಕೆ ಬಂದಿರುವುದರೊಂದಿಗೆ ವಲಸೆ, ವ್ಯಾಪಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ವಿಚಾರಗಳಲ್ಲಿ ಟ್ರಂಪ್ ಅವರ ವ್ಯವಹಾರಿಕ ಮನೋಭಾವನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಬುಧವಾರ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ನಿಜವಾಗಿಯೂ ಅಶ್ಚರ್ಯವೇನಿಲ್ಲ. ಏಕೆಂದರೆ ಬುದ್ದಿವಂತರು ಸ್ವಲ್ಪ ಸಮಯದವರೆಗೆ ತೆರೆದ ಪುಸ್ತಕವಾಗಿರುತ್ತಾರೆ. ಟ್ರಂಪ್ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು, ಆದ್ದರಿಂದ ಅವರೊಂದಿಗೆ ವ್ಯವಹರಿಸಿದ ಅನುಭವವಿದೆ. ಅವರು ವಿವಿಧ ವಿಷಯಗಳ ಬಗ್ಗೆ ಸಾಕಷ್ಟು ಮುಕ್ತವಾಗಿ ಮಾತನಾಡುತ್ತಾರೆ ಎಂದರು.

ಅನೇಕ ವಿಚಾರಗಳಲ್ಲಿ ಟ್ರಂಪ್ ವ್ಯವಹಾರದ ಮನೋಭಾವವುಳ್ಳವರಾಗಿದ್ದಾರೆ. ಏನನ್ನಾದರೂ ಮಾಡಲು ನಿರ್ಧರಿಸುವ ಮುನ್ನವೇ ನೀವು ನನಗಾಗಿ ಏನು ಮಾಡುತ್ತೀರಿ ಎಂದು ಹೇಳುತ್ತಾರೆ. ಅವರು ವ್ಯಾಪಾರದ ಬಗ್ಗೆ ತುಂಬಾ ಕಠಿಣವಾದ ನಿಲುವು ಹೊಂದಿದ್ದು, ಭಾರತದ ಸುಂಕಗಳನ್ನು ಟೀಕಿಸಿದ್ದಾರೆ. ಭಾರತ ಸುಂಕಗಳನ್ನು ಹೆಚ್ಚಿಸಿದರೆ ನಾವು ಭಾರತಕ್ಕೆ ಸುಂಕವನ್ನು ಹೆಚ್ಚಿಸುತ್ತೇವೆ' ಎಂದು ಹೇಳಿದ್ದರು. ಅದು ನಾವು ಗಮನಿಸಬೇಕಾದ ಸಂಗತಿಯಾಗಿದೆ ಏಕೆಂದರೆ ಇದು ಕಂಪನಿಗಳು ಅಮೆರಿಕಕ್ಕೆ ರಫ್ತು ಮಾಡುವ ಕಾರ್ಯಸಾಧ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಶಶಿ ತರೂರ್ ಹೇಳಿದರು.

ವಲಸೆ ವಿಚಾರದಲ್ಲಿ ಟ್ರಂಪ್ ಕಠಿಣ ನಿಲುವು ತಳೆದಿದ್ದಾರೆ. ಇದು ಕಾನೂನು ವಲಸಿಗರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ. ಕಾನೂನುಬದ್ಧ ವಲಸಿಗರ ಸಂಖ್ಯೆಗಳು ಕಡಿಮೆಯಾಗಬಹುದು ಮತ್ತು ನಮ್ಮ ಕೆಲವು ಪ್ರಜೆಗಳಿಗೆ ಕುಟುಂಬ ಪುನರ್ಮಿಲನ ಸಮಸ್ಯೆಗಳು ಉದ್ಭವಿಸಬಹುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT