ಶಶಿ ತರೂರ್ 
ದೇಶ

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರುವುದು ಭಾರತಕ್ಕೆ ಒಳ್ಳೆಯದು: ಶಶಿ ತರೂರ್ ಕೊಟ್ಟ ಕಾರಣ ಇಷ್ಟು...!

ಟ್ರಂಪ್ ಅಧಿಕಾರಕ್ಕೆ ಬಂದಿರುವುದರೊಂದಿಗೆ ವಲಸೆ, ವ್ಯಾಪಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ

ನವದೆಹಲಿ: ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷರಾಗಿರುವುದರೊಂದಿಗೆ ಭಾರತ- ಯುಎಸ್ ಸಂಬಂಧ ಮುಂದುವರೆಯುತ್ತದೆ. ಅವರು ಚೀನಾದ ವಿರುದ್ಧ ಕಠಿಣವಾಗಿರುವುದು ನಮಗೆ ಒಳ್ಳೆಯದು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ.

ಟ್ರಂಪ್ ಅಧಿಕಾರಕ್ಕೆ ಬಂದಿರುವುದರೊಂದಿಗೆ ವಲಸೆ, ವ್ಯಾಪಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ವಿಚಾರಗಳಲ್ಲಿ ಟ್ರಂಪ್ ಅವರ ವ್ಯವಹಾರಿಕ ಮನೋಭಾವನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಬುಧವಾರ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ನಿಜವಾಗಿಯೂ ಅಶ್ಚರ್ಯವೇನಿಲ್ಲ. ಏಕೆಂದರೆ ಬುದ್ದಿವಂತರು ಸ್ವಲ್ಪ ಸಮಯದವರೆಗೆ ತೆರೆದ ಪುಸ್ತಕವಾಗಿರುತ್ತಾರೆ. ಟ್ರಂಪ್ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು, ಆದ್ದರಿಂದ ಅವರೊಂದಿಗೆ ವ್ಯವಹರಿಸಿದ ಅನುಭವವಿದೆ. ಅವರು ವಿವಿಧ ವಿಷಯಗಳ ಬಗ್ಗೆ ಸಾಕಷ್ಟು ಮುಕ್ತವಾಗಿ ಮಾತನಾಡುತ್ತಾರೆ ಎಂದರು.

ಅನೇಕ ವಿಚಾರಗಳಲ್ಲಿ ಟ್ರಂಪ್ ವ್ಯವಹಾರದ ಮನೋಭಾವವುಳ್ಳವರಾಗಿದ್ದಾರೆ. ಏನನ್ನಾದರೂ ಮಾಡಲು ನಿರ್ಧರಿಸುವ ಮುನ್ನವೇ ನೀವು ನನಗಾಗಿ ಏನು ಮಾಡುತ್ತೀರಿ ಎಂದು ಹೇಳುತ್ತಾರೆ. ಅವರು ವ್ಯಾಪಾರದ ಬಗ್ಗೆ ತುಂಬಾ ಕಠಿಣವಾದ ನಿಲುವು ಹೊಂದಿದ್ದು, ಭಾರತದ ಸುಂಕಗಳನ್ನು ಟೀಕಿಸಿದ್ದಾರೆ. ಭಾರತ ಸುಂಕಗಳನ್ನು ಹೆಚ್ಚಿಸಿದರೆ ನಾವು ಭಾರತಕ್ಕೆ ಸುಂಕವನ್ನು ಹೆಚ್ಚಿಸುತ್ತೇವೆ' ಎಂದು ಹೇಳಿದ್ದರು. ಅದು ನಾವು ಗಮನಿಸಬೇಕಾದ ಸಂಗತಿಯಾಗಿದೆ ಏಕೆಂದರೆ ಇದು ಕಂಪನಿಗಳು ಅಮೆರಿಕಕ್ಕೆ ರಫ್ತು ಮಾಡುವ ಕಾರ್ಯಸಾಧ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಶಶಿ ತರೂರ್ ಹೇಳಿದರು.

ವಲಸೆ ವಿಚಾರದಲ್ಲಿ ಟ್ರಂಪ್ ಕಠಿಣ ನಿಲುವು ತಳೆದಿದ್ದಾರೆ. ಇದು ಕಾನೂನು ವಲಸಿಗರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ. ಕಾನೂನುಬದ್ಧ ವಲಸಿಗರ ಸಂಖ್ಯೆಗಳು ಕಡಿಮೆಯಾಗಬಹುದು ಮತ್ತು ನಮ್ಮ ಕೆಲವು ಪ್ರಜೆಗಳಿಗೆ ಕುಟುಂಬ ಪುನರ್ಮಿಲನ ಸಮಸ್ಯೆಗಳು ಉದ್ಭವಿಸಬಹುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Goa Nightclub Tragedy: ನೈಟ್‌ಕ್ಲಬ್‌ ಮ್ಯಾನೇಜರ್‌ ಬಂಧನ, ಮಾಲೀಕನ ವಿರುದ್ಧ ವಾರಂಟ್‌ ಜಾರಿ

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನ, ತನಿಖೆಗೆ ಆದೇಶ

'ಮದುವೆ ರದ್ದಾಗಿದೆ': ಪಲಾಶ್ ಮುಚ್ಚಲ್ ಜೊತೆಗಿನ ವಿವಾಹದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!

'ಮುಂದುವರಿಯಲು ನಿರ್ಧರಿಸಿದ್ದೇನೆ': ಸ್ಮೃತಿ ಮಂಧಾನ ಬಳಿಕ ಮದುವೆ ರದ್ದಾದ ಬಗ್ಗೆ ಪಲಾಶ್ ಮುಚ್ಚಲ್ ಮಾತು!

500 ಕೋಟಿ ರು ಕೊಟ್ಟು ಪಂಜಾಬ್ CM ಕುರ್ಚಿಯಲ್ಲಿ ಕುಳಿತುಕೊಳ್ಳಲು ನಮ್ಮ ಬಳಿ ಹಣವಿಲ್ಲ; ನವಜೋತ್ ಸಿಧು ಪತ್ನಿ ಹೇಳಿಕೆ

SCROLL FOR NEXT