ಬಾಂಗ್ಲಾದೇಶಿ ಮಹಿಳೆ TNIE
ದೇಶ

ಗುಜರಾತ್‌: 15 ಸಾವಿರ ಕೊಟ್ಟು ಗಡಿದಾಟಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಮಹಿಳೆ ಬಂಧನ!

ರಸಿದಾ ಬೇಗಂ ಜಹಾಂಗೀರ್ ಅಲಿ ಶೇಖ್ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಆರಂಭದಲ್ಲಿ ಒಂದು ವರ್ಷ ಮುಂಬೈನಲ್ಲಿ ವಾಸವಾಗಿದ್ದು ನಂತರ ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿದ್ದು ಅಲ್ಲಿ ಆಕೆ ವಿವಿಧ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು.

ಅಹಮದಾಬಾದ್: ಬಾಂಗ್ಲಾದೇಶದ ಏಜೆಂಟ್‌ಗೆ ಕೇವಲ 15,000 ರೂ. ನೀಡಿ ಗಡಿ ದಾಟಿ ಭಾರತಕ್ಕೆ ಬಂದು ಕೆಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮೂಲದ ಮಹಿಳೆಯೊಬ್ಬರನ್ನು ಸೂರತ್‌ನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ರಸಿದಾ ಬೇಗಂ ಜಹಾಂಗೀರ್ ಅಲಿ ಶೇಖ್ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಆರಂಭದಲ್ಲಿ ಒಂದು ವರ್ಷ ಮುಂಬೈನಲ್ಲಿ ವಾಸವಾಗಿದ್ದು ನಂತರ ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿದ್ದು ಅಲ್ಲಿ ಆಕೆ ವಿವಿಧ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು.

ನಕಲಿ ದಾಖಲೆಗಳನ್ನು ಬಳಸಿ, ರಸಿದಾ ಹೆಸರಲ್ಲಿ ಆಧಾರ್ ಕಾರ್ಡ್ ಮತ್ತು ಇತರ ಭಾರತೀಯ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ವಾಸಿಸುತ್ತಿದ್ದಳು. ರಸಿದಾ ಬಂಧನದ ವೇಳೆ ಪೊಲೀಸರು ಆಕೆ ಬಾಂಗ್ಲಾದೇಶಿ ಪ್ರಜೆ ಎಂದು ಗುರುತಿಸುವ ದಾಖಲೆಯನ್ನು ಸಹ ವಶಪಡಿಸಿಕೊಂಡಿದ್ದಾರೆ.

ನಾನು ಭಾರತಕ್ಕೆ ಬರಲು ಏಜೆಂಟ್‌ಗೆ 15,000 ಬಾಂಗ್ಲಾದೇಶದ ಟಾಕಾವನ್ನು ನೀಡಿದ್ದೇನೆ ಎಂದು ಸೂರತ್‌ನ ಎಸ್‌ಒಜಿ ವಿಚಾರಣೆಯ ಸಮಯದಲ್ಲಿ ಆಕೆ ಬಹಿರಂಗಪಡಿಸಿದಳು. ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದೇಗೆ, ನಂತರ ರೈಲಿನಲ್ಲಿ ಮುಂಬೈಗೆ ಪ್ರಯಾಣ ಅಂತಿಮವಾಗಿ ಸೂರತ್‌ಗೆ ತಲುಪಿದ್ದು ಅಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾಳೆ.

ರಾಸಿದಾ ಬಾಂಗ್ಲಾದೇಶದ ಬರಂಗಾ ಗ್ರಾಮದವಳು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಜೆಸ್ಸೋರ್ ಜಿಲ್ಲೆಯ ಸಮೀಪವಿರುವ ನಿರ್ಬಂಧಿತ ಗಡಿಯನ್ನು ದಾಟಲು ಆಕೆ ಏಜೆಂಟರನ್ನು ಅನ್ನು ಬಳಸಿಕೊಂಡು ಪಶ್ಚಿಮ ಬಂಗಾಳದ ಬ್ಯಾಂಗನ್ ಮೂಲಕ ಭಾರತವನ್ನು ಪ್ರವೇಶಿಸಿದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT