ಅಲ್ಪೇಶ್ ಠಾಕೂರ್ TNIE
ದೇಶ

ಕ್ರೈಂ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ: ಸ್ವಪಕ್ಷ ಸರ್ಕಾರದ ವಿರುದ್ಧವೇ ಗುಜರಾತ್ BJP ಶಾಸಕ ಅಲ್ಪೇಶ್ ಠಾಕೂರ್ ವಾಗ್ದಾಳಿ!

ಅಹಮದಾಬಾದ್ ಮೂರು ದಿನಗಳ ಹಿಂದೆ ಕಗ್ಡಾಪಿತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರ ಹತ್ಯೆಗೆ ಸಾಕ್ಷಿಯಾಯಿತು. ಅಲ್ಲಿ ಮೆಹ್ಸಾನಾದ ಪಲವಸ್ನಾ ಗ್ರಾಮದ ಯುವಕ ಠಾಕೋರ್ ಅಲ್ಪೇಶ್ ಹತ್ಯೆಯಾಗಿದ್ದನು.

ಅಹಮದಾಬಾದ್: ಗುಜರಾತ್‌ನಲ್ಲಿ ಬಿಜೆಪಿಯ ಶಾಸಕರೇ ಈಗ ಸರ್ಕಾರಕ್ಕೆ ವಿರೋಧ ಪಕ್ಷದವರಾಗಿದ್ದಾರೆ. ಗಾಂಧಿನಗರ ದಕ್ಷಿಣದ ಬಿಜೆಪಿ ಶಾಸಕ ಅಲ್ಪೇಶ್ ಠಾಕೂರ್ ಅವರು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಕೊಲೆಯನ್ನು ಉಲ್ಲೇಖಿಸಿ ಲಂಚ ಮತ್ತು ಅಪರಾಧವನ್ನು ಪೋಷಿಸಲು ಭ್ರಷ್ಟ ನಾಯಕರು ಮತ್ತು ಅಧಿಕಾರಿಗಳನ್ನು ದೂಷಿಸಿದ್ದು ಅಲ್ಲದೆ ವ್ಯವಸ್ಥೆಯ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.

ಅಹಮದಾಬಾದ್ ಮೂರು ದಿನಗಳ ಹಿಂದೆ ಕಗ್ಡಾಪಿತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರ ಹತ್ಯೆಗೆ ಸಾಕ್ಷಿಯಾಯಿತು. ಅಲ್ಲಿ ಮೆಹ್ಸಾನಾದ ಪಲವಸ್ನಾ ಗ್ರಾಮದ ಯುವಕ ಠಾಕೋರ್ ಅಲ್ಪೇಶ್ ಹತ್ಯೆಯಾಗಿದ್ದರು. ಇಂದು ಅವರ ಸ್ವಗ್ರಾಮದಲ್ಲಿ ಸಂತಾಪ ಸೂಚಕ ಸಭೆ ನಡೆದಿದ್ದು, ಶಾಸಕ ಅಲ್ಪೇಶ್ ಠಾಕೂರ್ ಉಪಸ್ಥಿತರಿದ್ದರು.

ದುಃಖತಪ್ತ ಕುಟುಂಬವನ್ನು ಭೇಟಿ ಮಾಡಿದ ಶಾಸಕರು 1 ಲಕ್ಷ ರೂಪಾಯಿ ಧನಸಹಾಯ ಮಾಡಿದರು. ಹೆಚ್ಚುತ್ತಿರುವ ಅಪರಾಧಗಳ ಕುರಿತಂತೆ ತನ್ನ ಆಕ್ರೋಶ ವ್ಯಕ್ತಪಡಿಸಿದ ಠಾಕೋರ್, ಲಂಚ ಮತ್ತು ಕಾನೂನುಬಾಹಿರತೆಯ ಸಂಸ್ಕೃತಿಯನ್ನು ಬೆಳೆಸಲು ಭ್ರಷ್ಟ ನಾಯಕರು ಮತ್ತು ಅಧಿಕಾರಿಗಳನ್ನು ದೂಷಿಸಿದರು.

ಗುಜರಾತ್‌ನ ಯುವಕರಲ್ಲಿ ವ್ಯಸನದ ವಿರುದ್ಧ ಹೋರಾಡುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು. ವ್ಯಸನವನ್ನು ನಿರ್ಮೂಲನೆ ಮಾಡಬೇಕು. ಗುಜರಾತ್‌ನ ಯುವಕರು ಎಲ್ಲಾ ರೀತಿಯ ವ್ಯಸನದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು. ಸಮಸ್ಯೆಯನ್ನು ಪರಿಹರಿಸುವುದು ವೈಯಕ್ತಿಕ ಜವಾಬ್ದಾರಿಯಲ್ಲ, ಸಾಮೂಹಿಕ ಜವಾಬ್ದಾರಿ ಎಂದು ಠಾಕೋರ್ ಒತ್ತಿ ಹೇಳಿದ್ದು ಇದು ನಮ್ಮ ಸಮಾಜದ ಯೋಗಕ್ಷೇಮ ಮತ್ತು ಸ್ವಾತಂತ್ರ್ಯದ ಬಗ್ಗೆ ಎಂದು ಅಲ್ಪೇಶ್ ಹೇಳಿದರು.

ವ್ಯವಸ್ಥಿತ ಭ್ರಷ್ಟಾಚಾರದ ಕುರಿತಂತೆ ವಾಗ್ದಾಳಿ ನಡೆಸಿದ ಅವರು, ನಾಯಕರು ಜನರೊಂದಿಗೆ ನಿಂತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಬೇಕು. ಆದರೆ, ಭ್ರಷ್ಟ ಅಧಿಕಾರಿಗಳು ಮತ್ತು ಮುಖಂಡರು ಸುಲಿಗೆ ಮತ್ತು ಅಪರಾಧವನ್ನು ಸಕ್ರಿಯಗೊಳಿಸುವುದನ್ನು ಮುಂದುವರೆಸಿದ್ದಾರೆ. ಇದರ ವಿರುದ್ಧ ನಾನು ಸಮರ ಸಾರಿದ್ದು ನಾನು ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT