ತಹವ್ವೂರ್ ರಾಣಾ ತನಿಖೆಗೆ ಎನ್ಐಎ ತಂಡ 
ದೇಶ

26/11 Mumbai attack: Tahawwur Rana ವಿಚಾರಣೆಗೆ 12 ಅಧಿಕಾರಿಗಳ ಉನ್ನತ ಮಟ್ಟದ ತಂಡ ರಚಿಸಿದ NIA!

ತನಿಖೆಗೆ ಸಂಬಂಧಿಸಿದ 12 ಸದಸ್ಯರು ಮಾತ್ರ ರಾಣಾ ನನ್ನು ಇರಿಸಲಾಗುವ ಹೈ ಸೆಕ್ಯುರಿಟಿ ಸೆಲ್ ಗೆ ಪ್ರವೇಶ ಪಡೆದಿರುತ್ತಾರೆ.

ನವದೆಹಲಿ: 26/11 ಮುಂಬೈ ಉಗ್ರ ದಾಳಿಯ ಸಂಚುಕೋರ ತಹವ್ವೂರ್ ರಾಣಾ(Tahawwur Rana)ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ಆತನ ತನಿಖೆಗಾಗಿ ಎನ್ಐಎ 12 ಅಧಿಕಾರಿಗಳ ಉನ್ನತ ಮಟ್ಟದ ತಂಡ ರಚಿಸಿದೆ.

ಮೂಲಗಳ ಪ್ರಕಾರ ತಹವೂರ್ ರಾಣಾ ತನಿಖೆಗಾಗಿ ಎನ್‌ಐಎ ಮುಖ್ಯಸ್ಥರಲ್ಲದೆ ಇಬ್ಬರು ಇನ್ಸ್‌ಪೆಕ್ಟರ್ ಜನರಲ್‌ಗಳು (ಐಜಿಗಳು), ಒಬ್ಬ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮತ್ತು ಒಬ್ಬ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಸೇರಿದಂತೆ 12 NIA ಸಿಬ್ಬಂದಿಯ ಉನ್ನತ ಮಟ್ಟದ ತಂಡ ರಚಿಸಲಾಗಿದೆ.

ತನಿಖೆಗೆ ಸಂಬಂಧಿಸಿದ 12 ಸದಸ್ಯರು ಮಾತ್ರ ರಾಣಾ ನನ್ನು ಇರಿಸಲಾಗುವ ಹೈ ಸೆಕ್ಯುರಿಟಿ ಸೆಲ್ ಗೆ ಪ್ರವೇಶ ಪಡೆದಿರುತ್ತಾರೆ. ಅವರಲ್ಲಿ ಎನ್‌ಐಎ ಮಹಾನಿರ್ದೇಶಕ (ಡಿಜಿ) ಸದಾನಂದ ದಾತೆ, ಐಜಿ ಆಶಿಶ್ ಬಾತ್ರಾ, ಡಿಐಜಿ ಜಯಾ ರಾಯ್ ಸೇರಿದಂತೆ ಇತರರು ಸೇರಿದ್ದಾರೆ. ಬೇರೆ ಯಾರಾದರೂ ರಾಣಾನನ್ನು ಭೇಟಿ ಮಾಡಲು ಬಯಸಿದರೆ, ಅವರಿಗೆ ಪೂರ್ವಾನುಮತಿ ಅಗತ್ಯವಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ರೆಕಾರ್ಡ್ ಮಾಡಿದ ಧ್ವನಿ ಮಾದರಿಗಳು, ಫೋಟೋಗಳು, ವೀಡಿಯೊಗಳು ಮತ್ತು ಇಮೇಲ್‌ಗಳು ಸೇರಿದಂತೆ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳನ್ನು ರಾಣಾಗೆ ತೋರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ರಾಣಾ ಶಾಮೀಲುದಾರಿಕೆ ಮತ್ತು ಪಾಕಿಸ್ತಾನಿ ಸೇನೆ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆಗಿನ ಸಂಪರ್ಕಗಳು ಸೇರಿದಂತೆ ಪ್ರಕರಣದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವಲ್ಲಿ ಈ ಪುರಾವೆಗಳು ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಭಯೋತ್ಪಾದಕ ದಾಳಿಯ ಸಮಯದಲ್ಲಿ ಭಾರತದಲ್ಲಿದ್ದರು ಎಂದು ವರದಿಯಾಗಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಾಜಿದ್ ಮಿರ್ ಅವರೊಂದಿಗಿನ ಅವರ ಸಂಬಂಧಗಳು ಮತ್ತು ಸಂವಹನಗಳ ಬಗ್ಗೆ ವಿವರಗಳಿಗಾಗಿ ಉಗ್ರ ದಾಳಿ ರೂವಾರಿ ರಾಣಾ ನನ್ನು ತನಿಖೆ ವೇಳೆ ಒತ್ತಾಯಿಸಲಾಗುವುದು ಎನ್ನಲಾಗಿದೆ.

ಅಂತೆಯೇ NIA ತನ್ನ ಆರೋಪ ಪಟ್ಟಿಯಲ್ಲಿ ರಾಣಾ ತನ್ನ ವಲಸೆ ಸಲಹಾ ವ್ಯವಹಾರದ ಮೂಲಕ ದಾಳಿಗಳಿಗೆ ವಿಚಕ್ಷಣವನ್ನು ಒದಗಿಸಿದ್ದಾರೆ ಎಂದು ಆರೋಪಿಸಿದೆ. ಇದನ್ನು ಪ್ರಸ್ತುತ ಅಮೆರಿಕದ ಜೈಲಿನಲ್ಲಿರುವ ಪಾಕಿಸ್ತಾನಿ ಅಮೆರಿಕನ್ ಡೇವಿಡ್ ಕೋಲ್ಮನ್ ಹೆಡ್ಲಿ ನಡೆಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ NIA ಅಧಿಕಾರಿಗಳು ಹೆಚ್ಚಾಗಿ ರಾಣಾ ಹೆಡ್ಲಿಯೊಂದಿಗೆ ನಡೆಸಿದ ವ್ಯಾಪಕ ಸಂವಹನದ ಮೇಲೆ ಕೇಂದ್ರೀಕರಿಸಲಿದ್ದಾರೆ, ಅವರು 2006 ಮತ್ತು 2008 ರ ನಡುವೆ ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಭಯೋತ್ಪಾದಕ ಜಾಲ ಮತ್ತು ಪಾಕಿಸ್ತಾನದ ನಡುವಿನ ಸಂಪರ್ಕಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

NIA ಮೂಲದ ಪ್ರಕಾರ, ಸೆಪ್ಟೆಂಬರ್ 14, 2006 ರಂದು, ಹೆಡ್ಲಿ ಮೊದಲ ಬಾರಿಗೆ ಮುಂಬೈಗೆ ವರದಿ ನೀಡಲು ಭೇಟಿ ನೀಡಿದಾಗ, ಅವನು ರಾಣಾಗೆ 32 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದನು. ಭಯೋತ್ಪಾದಕ ದಾಳಿಯ ಮೊದಲು ಭಾರತಕ್ಕೆ ಎಂಟು ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಹೆಡ್ಲಿ ರಾಣಾ ಜೊತೆ ಸಂಪರ್ಕದಲ್ಲಿದ್ದನು ಮತ್ತು 231 ಬಾರಿ ಕರೆ ಮಾಡಿದ್ದನು ಎಂದು ಹೇಳಲಾಗಿದೆ.

ನವೆಂಬರ್ 26, 2008 ರಂದು, 10 ಲಷ್ಕರ್-ಎ-ತೈಬಾ (LeT) ಭಯೋತ್ಪಾದಕರು ಮುಂಬೈನ 12 ಸ್ಥಳಗಳಲ್ಲಿ ಸಂಘಟಿತ ಭಯೋತ್ಪಾದಕ ದಾಳಿಗಳನ್ನು ನಡೆಸಿ 166 ಜನರನ್ನು ಕೊಂದು ಹಾಕಿದ್ದರು. ಭಯೋತ್ಪಾದಕರಲ್ಲಿ ಒಬ್ಬನಾದ ಅಜ್ಮಲ್ ಕಸಬ್‌ನನ್ನು ಅಂದು ಬೃಹತ್ ಕಾರ್ಯಾಚರಣೆ ನಡೆಸಿ ಬಂಧಿಸಗಿತ್ತು. ನಂತರ 2012 ರಲ್ಲಿ ಪುಣೆ ಜೈಲಿನಲ್ಲಿ ಆತನನ್ನು ಗಲ್ಲಿಗೇರಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT