ಸಾಂದರ್ಭಿಕ ಚಿತ್ರ 
ದೇಶ

LPG ಸಬ್ಸಿಡಿ: ತೈಲ ಕಂಪನಿಗಳಿಗೆ 30,000 ಕೋಟಿ ರೂ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ಅಕ್ಟೋಬರ್ 2022 ರಲ್ಲಿ 22,000 ಕೋಟಿ ರೂ. ಅನುದಾನ ನೀಡಿದ ನಂತರ ಸರ್ಕಾರವು ಒದಗಿಸಿದ ಎರಡನೇ ಪ್ರಮುಖ ಪರಿಹಾರ ಇದಾಗಿದೆ.

ನವದೆಹಲಿ: ನಿಯಂತ್ರಿತ ಬೆಲೆಯಲ್ಲಿ ದೇಶೀಯ ಎಲ್‌ಪಿಜಿ ಮಾರಾಟ ಮಾಡುವುದರಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಶುಕ್ರವಾರ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ(ಒಎಂಸಿ) 30,000 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ.

ಈ ಪರಿಹಾರವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್)ಗೆ ವಿಸ್ತರಿಸಲಾಗುವುದು ಸರ್ಕಾರ ತಿಳಿಸಿದೆ.

ಅಕ್ಟೋಬರ್ 2022 ರಲ್ಲಿ 22,000 ಕೋಟಿ ರೂ. ಅನುದಾನ ನೀಡಿದ ನಂತರ ಸರ್ಕಾರವು ಒದಗಿಸಿದ ಎರಡನೇ ಪ್ರಮುಖ ಪರಿಹಾರ ಇದಾಗಿದೆ. ಈ ಹಂಚಿಕೆಯೊಂದಿಗೆ, ಒಎಂಸಿಗಳಿಗೆ ಒಟ್ಟು ಆರ್ಥಿಕ ನೆರವು ಈಗ 52,000 ಕೋಟಿ ರೂ. ಏರಿಕೆಯಾಗಿದೆ.

ಈ ನಿರ್ಧಾರವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಪರಿಹಾರವು ಒಎಂಸಿಗಳು ಕಚ್ಚಾ ಮತ್ತು ಎಲ್‌ಪಿಜಿ ಸಂಗ್ರಹಣೆ, ಸಾಲ ಸೇವೆ ಮತ್ತು ಬಂಡವಾಳ ವೆಚ್ಚದಂತಹ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸರ್ಕಾರದ ಪ್ರಕಾರ, ದೇಶೀಯ LPG ಅನ್ನು ಸಾರ್ವಜನಿಕ ವಲಯದ OMC ಗಳು ನಿಯಂತ್ರಿತ ಬೆಲೆಯಲ್ಲಿ ಪೂರೈಸುತ್ತವೆ. ಆದಾಗ್ಯೂ, 2024–25ನೇ ಹಣಕಾಸು ವರ್ಷದಲ್ಲಿ, ಅಂತರರಾಷ್ಟ್ರೀಯ LPG ಬೆಲೆಗಳು ಹೆಚ್ಚುತ್ತಲೇ ಇದ್ದವು ಮತ್ತು ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ. ಇದರ ಪರಿಣಾಮವಾಗಿ IOCL, BPCL ಮತ್ತು HPCL ಗೆ ಗಮನಾರ್ಹ ನಷ್ಟವಾಗಿದೆ.

"ಈ ನಷ್ಟಗಳ ಹೊರತಾಗಿಯೂ, ಸಾರ್ವಜನಿಕ ವಲಯದ OMC ಗಳು LPG ಕೈಗೆಟುಕುವ ದರದಲ್ಲಿ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರೆಸಿದವು" ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 3 ವರ್ಷ ವಯೋಮಿತಿ ಸಡಿಲಿಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಟ್ರಂಪ್ ಹುಚ್ಚಾಟ: ಇದೀಗ ವಿದೇಶಿ ಸಿನಿಮಾಗಳ ಮೇಲೆ ಶೇ. 100ರಷ್ಟು ಸುಂಕ; ಕಾಂತಾರ 2 ಚಿತ್ರದ ಕಥೆಯೇನು?

New Drama! ಭಾರತಕ್ಕೆ ಏಷ್ಯಾ ಕಪ್‌ ನೀಡಲು ಹೊಸ ಷರತ್ತು ಹಾಕಿದ ನಖ್ವಿ, ಹೇಳಿದ್ದೇನು?

'Naqvi vs 3rd umpire': ಭಾರತ ಕ್ರಿಕೆಟ್ ತಂಡ ಅಭಿನಂದಿಸದ ಕಾಂಗ್ರೆಸ್; ಬಿಜೆಪಿ ಟೀಕೆಗೆ ಹೆಂಗಿದೆ ತಿರುಗೇಟು?

Ceasefire offer: ನಕ್ಸಲೀಯರೊಂದಿಗೆ 'ಕದನ ವಿರಾಮ' ಘೋಷಣೆಗೆ ಕೇಂದ್ರ ಸರ್ಕಾರವೇಕೆ ಒಪ್ಪುತ್ತಿಲ್ಲ?- ಡಿ. ರಾಜಾ

SCROLL FOR NEXT