ಮನೆ ಮಾಲೀಕ ಎದ್ದರೆ ಆತನನ್ನು ಹೊಡೆಯಲು ಕೈಯಲ್ಲಿ ಕಬ್ಬಿಣದ ರಾಡು ಹಿಡಿದಿರುವ ಕಳ್ಳ 
ದೇಶ

Indore: ಭಯಾನಕ ಮನೆಗಳ್ಳತನ; ಮಲಗಿರುವ ಮಾಲೀಕನ ಎದುರು ಕಬ್ಬಿಣದ ರಾಡು ಹಿಡಿದು ನಿಂತ ಕಳ್ಳ! ಮುಂದೇನಾಯ್ತು? Video ನೋಡಿ...

ಆಘಾತಕಾರಿ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಬ್ಬ ಕಳ್ಳನ ಕೈಯಲ್ಲಿ ರಾಡ್ ಹಿಡಿದು ಕಾವಲು ನಿಂತಿದ್ದು, ಮತ್ತೊಬ್ಬ ಅಲ್ಮೇರಾದಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾನೆ.

ಇಂದೋರ್: ಇಂದೋರ್‌ನ ವಿಜಯನಗರದಲ್ಲಿರುವ ನಿವೃತ್ತ ನ್ಯಾಯಮೂರ್ತಿ ರಮೇಶ್ ಗಾರ್ಗ್ ಅವರ ನಿವಾಸದಲ್ಲಿ ಭಯಾನಕ ರೀತಿಯ ಮನೆ ಕಳ್ಳತನ ನಡೆದಿದೆ.ಮೂವರು ಅಪರಿಚಿತ ಕಳ್ಳರು ಸುಮಾರು ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.

ಕೇವಲ ನಾಲ್ಕು ನಿಮಿಷ ಮತ್ತು ಹತ್ತು ಸೆಕೆಂಡ್‌ಗಳಲ್ಲಿಯೇ ಇಷ್ಟೇಲ್ಲಾ ದರೋಡೆ ಮಾಡಿದ್ದಾರೆ. ಮುಂಜಾನೆ 3-30ರ ವೇಳೆಯಲ್ಲಿ ಈ ದರೋಡೆ ನಡೆದಿದ್ದು, ಮುಖವಾಡ ಧರಿಸಿದ್ದ ಕಳ್ಳರು, ಮುಖ್ಯ ಗೇಟ್‌ನ ಬೀಗವನ್ನು ಮುರಿದು ಬಂಗಲೆ ನುಗಿದ್ದು, ಅಲ್ಮೇರಾ ತೆರೆದು ಬೆಲೆಬಾಳುವ ವಸ್ತುಗಳೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಆಘಾತಕಾರಿ ಕಳ್ಳತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಬ್ಬ ಕಳ್ಳನ ಕೈಯಲ್ಲಿ ರಾಡ್ ಹಿಡಿದು ಕಾವಲು ನಿಂತಿದ್ದು, ಮತ್ತೊಬ್ಬ ಅಲ್ಮೇರಾದಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾನೆ.

ಭಾನುವಾರ ಬೆಳಗ್ಗೆ ಮನೆಯವರು ಮಲಗಿದ್ದಾಗ ನಡೆದಿರುವ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರಾದರೂ ಅಪರಿಚಿತರು ಬಂದರೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದ್ದರೂ ನ್ಯಾಯಮೂರ್ತಿ ಗಾರ್ಗ್ ಅವರ ಮಗ ರಿತ್ವಿಕ್ ಗಾಡ ನಿದ್ರೆಗೆ ಜಾರಿದ್ದಾರೆ. ಇವರು ಎದ್ದರೆ ಅವರನ್ನು ಹೊಡೆಯಲು ಒಬ್ಬ ಕಳ್ಳ ಕೈಯಲ್ಲಿ ರಾಡ್ ಹಿಡಿದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕಳ್ಳರು ಕಬ್ಬಿಣದ ಕಿಟಕಿಯ ಗ್ರಿಲ್ ಕತ್ತರಿಸಿ ಬಂಗಲೆಗೆ ನುಗ್ಗಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ರಿತ್ವಿಕ್‌ನ ಹೆಂಡತಿ ಮತ್ತು ಮಕ್ಕಳಿಗೆ ಕಳ್ಳತನದ ಬಗ್ಗೆ ಗೊತ್ತೇ ಆಗಿಲ್ಲ. ಇದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಮೂಡಿಸಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT