ಸರ್ದಾರ್ ಪಟೇಲ್ ಮತ್ತು ನೆಹರು (ಸಂಗ್ರಹ ಚಿತ್ರ) 
ದೇಶ

'ಬಾಬರಿ ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ಹಣ ಬಳಸಲು ನೆಹರು ಬಯಸಿದ್ದರು; ಸರ್ದಾರ್ ವಲ್ಲಭಭಾಯಿ ಪಟೇಲ್ ತಡೆದಿದ್ದರು'!

ಗುಜರಾತ್‌ನ ಸೋಮನಾಥ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಎತ್ತಿದಾಗ, ದೇವಾಲಯದ ನವೀಕರಣಕ್ಕೆ ಬೇಕಾದ 30 ಲಕ್ಷ ರೂ.ಗಳನ್ನು ಸಾಮಾನ್ಯ ಜನರು ದಾನ ಮಾಡಿದ ಹಣದಿಂದ ಪುನರ್ ಸ್ಥಾಪಿಸಲಾಯಿತು.

ದೆಹಲಿ: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಬಾಬರಿ ಮಸೀದಿ ನಿರ್ಮಾಣಕ್ಕೆ ಸಾರ್ವಜನಿಕ ನಿಧಿ ಬಳಸಲು ಬಯಸಿದ್ದರು, ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ತೀವ್ರವಾಗಿ ವಿರೋಧಿಸಿ ತಡೆದಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಗುಜರಾತಿನ ವಡೋದರ ಹತ್ತಿರದ ಸಾಧ್ಲಿ ಗ್ರಾಮದಲ್ಲಿ ಸರ್ದಾರ್ ಪಟೇಲ್ 150ನೇ ಜಯಂತ್ಯೋತ್ಸವದ ‘ಯುನಿಟಿ ಮಾರ್ಚ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟೇಲ್ ನಿಜವಾದ ಸೆಕ್ಯುಲರ್ ನಾಯಕರಾಗಿದ್ದರು, ಯಾರನ್ನೂ ತೃಪ್ತಿಪಡಿಸುವ ರಾಜಕೀಯ ಮಾಡದೆ ಸಮಾನತೆಯ ಮೌಲ್ಯಗಳನ್ನು ಕಾಯ್ದುಕೊಂಡವರು ಎಂದು ಹೊಗಳಿದರು.

ನೆಹರೂ ಸಾರ್ವಜನಿಕ ಹಣದಿಂದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದರು. ಆದರೆ ಇದಕ್ಕೆ ಮೊದಲಿಗರಾಗಿ ಪಟೇಲ್ ವಿರೋಧ ವ್ಯಕ್ತಪಡಿಸಿದರು. ಅವರು ಆ ಯೋಜನೆ ಜಾರಿ ಆಗದಂತೆ ತಡೆದಿದ್ದರು, ಎಂದು ಸಿಂಗ್ ಹೇಳಿದ್ದಾರೆ.

ಗುಜರಾತ್‌ನ ಸೋಮನಾಥ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಎತ್ತಿದಾಗ, ದೇವಾಲಯದ ನವೀಕರಣಕ್ಕೆ ಬೇಕಾದ 30 ಲಕ್ಷ ರೂ.ಗಳನ್ನು ಸಾಮಾನ್ಯ ಜನರು ದಾನ ಮಾಡಿದ ಹಣದಿಂದ ಪುನರ್ ಸ್ಥಾಪಿಸಲಾಯಿತು. ಅದರ ನಿರ್ಮಾಣಕ್ಕೆ ಸರ್ಕಾರದ ಹಣವಲ್ಲ, ಸಾರ್ವಜನಿಕ ದೇಣಿಗೆಗಳನ್ನು ಮಾತ್ರ ಬಳಸಲಾಗಿತ್ತು, ಇದೇ ರೀತಿಯಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೂ ಯಾವುದೇ ಸರ್ಕಾರಿ ಹಣ ಕೊಡಲಾಗಿಲ್ಲ ಎಂದು ಹೇಳಿದರು. ಇದು ನಿಜವಾದ ಸೆಕ್ಯುಲರಿಸಂ, ಎಂದು ಅವರು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!