ದಟ್ಟ ಮಂಜು ಕವಿವದ ವಾತಾವರಣದಲ್ಲಿ ರೈಲು  online desk
ದೇಶ

ರೈಲು ಹರಿದು ಮಹಾಕುಂಭ ಮೇಳ ಭಕ್ತಾದಿಗಳು ಸಾವು!

ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪಾಟ್ನ: ರೈಲು ಹರಿದು ಇಬ್ಬರು ಮಹಾಕುಂಭಮೇಳ ಭಕ್ತಾದಿಗಳು ಸಾವನ್ನಪ್ಪಿರುವ ಘಟನೆ ಫೆ.06 ರಂದು ನಡೆದಿದೆ.

ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ರಾಮ್ ರುಚಿ ದೇವಿ (65), ಅಮಿತ್ ಕುಮಾರ್ (41) ಮತ್ತು ಉಷಾ ದೇವಿ (61) ಎಂದು ಗುರುತಿಸಲಾಗಿದೆ, ಇವರು ಮಹಾ ಕುಂಭ ಮೇಳದಲ್ಲಿ ಸಂಗಮ (ಪ್ರಯಾಗ್ ರಾಜ್) ನಲ್ಲಿ ಪವಿತ್ರ ಸ್ನಾನ ಮಾಡಿ ಮನೆಗೆ ಹಿಂತಿರುಗುತ್ತಿದ್ದರು.

ಪೂರ್ವ ಮಧ್ಯ ರೈಲ್ವೆಯ ಜಮಾಲ್ಪುರ್-ಸುಲ್ತಾಂಗಂಜ್ ರೈಲ್ವೆ ವಿಭಾಗದ ಋಷಿಕುಂಡ್ ರೈಲ್ವೆ ನಿಲುಗಡೆಯ ಬಳಿ ಬಲಿಪಶುಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿ ದಾಟುವಾಗ ಗಯಾ-ಹೌರಾ ಎಕ್ಸ್‌ಪ್ರೆಸ್ ವೇಗವಾಗಿ ಬಂದಿದ್ದು ಭಕ್ತಾದಿಗಳು ಸಾವನ್ನಪ್ಪಿದ್ದಾರೆ ದು ಸ್ಥಳೀಯರು ಹೇಳಿದ್ದಾರೆ. ದಟ್ಟವಾದ ಮಂಜಿನಿಂದಾಗಿ ಕಳಪೆ ಗೋಚರತೆಯೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಘಟನೆಯ ನಂತರ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆಯವರು ಗುಂಪನ್ನು ಚದುರಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT