ಅಬ್ದುಲ್ಲಾ ಅಜಂ ಖಾನ್ 
ದೇಶ

ಒಂದೂವರೆ ವರ್ಷದ ನಂತರ ಎಸ್‌ಪಿ ನಾಯಕ ಅಬ್ದುಲ್ಲಾ ಅಜಂ ಖಾನ್ ಜೈಲಿನಿಂದ ಬಿಡುಗಡೆ

ಅಬ್ದುಲ್ಲಾ ಅಜಂ ಖಾನ್ ಅವರು ರಾಂಪುರದಲ್ಲಿರುವ ಸುವಾರ್ ಕ್ಷೇತ್ರದ ಮಾಜಿ ಶಾಸಕರು ಮತ್ತು ಸದ್ಯ ಜೈಲಿನಲ್ಲಿರುವ ಹಿರಿಯ ಎಸ್‌ಪಿ ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್ ಅವರ ಪುತ್ರ.

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಬ್ದುಲ್ಲಾ ಅಜಂ ಖಾನ್ ಅವರು 17 ತಿಂಗಳ ನಂತರ ಮಂಗಳವಾರ ಉತ್ತರ ಪ್ರದೇಶದ ಹಾರ್ದೋಯ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರ ಪಕ್ಷದ ನಾಯಕರು ಮತ್ತು ಬೆಂಬಲಿಗರು ಅಬ್ದುಲ್ಲಾ ಅಜಂ ಖಾನ್ ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ ನೆರೆದಿದ್ದರು.

ಅಬ್ದುಲ್ಲಾ ಅಜಂ ಖಾನ್ ಅವರು ರಾಂಪುರದಲ್ಲಿರುವ ಸುವಾರ್ ಕ್ಷೇತ್ರದ ಮಾಜಿ ಶಾಸಕರು ಮತ್ತು ಸದ್ಯ ಜೈಲಿನಲ್ಲಿರುವ ಹಿರಿಯ ಎಸ್‌ಪಿ ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್ ಅವರ ಪುತ್ರ.

ಜೈಲಿನಿಂದ ಹೊರಬಂದ ನಂತರ ಅಬ್ದುಲ್ಲಾ ಖಾನ್ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಆದರೆ ಅವರ ವಕೀಲ ಸತ್ನಾಮ್ ಸಿಂಗ್ ನಟ್ಟು ಮಾತನಾಡಿ, "ಇಡೀ ದೇಶಕ್ಕೆ ತಿಳಿದಿರುವಂತೆ, ಮೊಹಮ್ಮದ್ ಅಜಂ ಖಾನ್ ಮತ್ತು ಅವರ ಕುಟುಂಬಕ್ಕೆ ಕಿರುಕುಳ ನೀಡಲು ಜೈಲಿನಲ್ಲಿರಿಸಲಾಯಿತು ಎಂದರು.

ಇಂದು, ಅಬ್ದುಲ್ಲಾ ಭಾಯಿ ಬಿಡುಗಡೆಗೆ ದಾರಿ ಮಾಡಿಕೊಟ್ಟಿದ್ದಕ್ಕಾಗಿ ನಾವು ದೇವರು, ಅಲ್ಲಾ ಮತ್ತು ವಾಹೆಗುರು ಅವರಿಗೆ ಧನ್ಯವಾದ ಹೇಳುತ್ತೇವೆ. ಅವರು ಅಂತಿಮವಾಗಿ ಆರೋಪ ಮುಕ್ತರಾಗಿ ಬರುತ್ತಾರೆ" ಎಂದರು.

ಮಾಜಿ ಶಾಸಕರ ಬಿಡುಗಡೆಯ ಸುದ್ದಿ ಹರಡುತ್ತಿದ್ದಂತೆ, ಮೊರಾದಾಬಾದ್ ಸಂಸದ ಮತ್ತು ಎಸ್‌ಪಿ ನಾಯಕ ರುಚಿ ವೀರಾ ಅವರೊಂದಿಗೆ ಅವರ ಬೆಂಬಲಿಗರು ಜೈಲಿನ ಹೊರಗೆ ಜಮಾಯಿಸಿದ್ದರು.

ಜೈಲಿನಿಂದ ಬಿಡುಗಡೆಯಾದ ನಂತರ, ಅಬ್ದುಲ್ಲಾ ಅಜಂ ಖಾನ್ ತಮ್ಮ ಬೆಂಬಲಿಗರ ಬೆಂಗಾವಲು ಪಡೆಯೊಂದಿಗೆ ಸಂಜೆ 4.10 ಕ್ಕೆ ಜೈಲು ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆರಳಿದರು.

2020 ರಲ್ಲಿ ದಾಖಲಾಗಿದ್ದ ಶತ್ರು ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಬ್ದುಲ್ಲಾ ಅಜಂ ಖಾನ್ ಅವರಿಗೆ ಸಂಸದ/ಶಾಸಕರ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟ್ ಇತ್ತೀಚೆಗೆ ಅಬ್ದುಲ್ಲಾ ಅಜಂ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಯಂತ್ರ ಕಳ್ಳತನ ಪ್ರಕರಣ ಸೇರಿದಂತೆ 45 ಪ್ರಕರಣಗಳು ಅಬ್ದುಲ್ಲಾ ಅಜಂ ಖಾನ್ ವಿರುದ್ಧ ದಾಖಲಾಗಿದ್ದು, ಅವರು ಆ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT