ಸಾಂದರ್ಭಿಕ ಚಿತ್ರ  
ದೇಶ

ಅಧಿಕ ಉಪ್ಪು ಸೇವನೆ ಸದ್ದಿಲ್ಲದೆ ರೋಗಕ್ಕೆ ಆಹ್ವಾನ ನೀಡುತ್ತದೆ: ICMR ಎಚ್ಚರಿಕೆ!

ಈ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳು ಸಮುದಾಯ ನೇತೃತ್ವದ ಉಪ್ಪು ಸೇವನೆ ಕಡಿತ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ, ಕಡಿಮೆ ಸೋಡಿಯಂ ಉಪ್ಪಿನ ಸೇವನೆಯನ್ನು ಜನರಲ್ಲಿ ಜನಪ್ರಿಯಗೊಳಿಸುವ ಬಗ್ಗೆ ಗಮನಹರಿಸುತ್ತಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳ ಪ್ರಕಾರ, ಅತಿಯಾದ ಉಪ್ಪು ಸೇವನೆಯು ಭಾರತದಲ್ಲಿ ಸದ್ದಿಲ್ಲದೆ ರೋಗ ಹೆಚ್ಚಳಕ್ಕೆ ಕಾರಣವಾಗುತ್ತಿದೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯ ಕಾಯಿಲೆ ಮತ್ತು ಮೂತ್ರಪಿಂಡದ ಅಸ್ವಸ್ಥತೆಗಳನ್ನು ಅಧಿಕ ಉಪ್ಪು ಸೇವನೆ ಹೆಚ್ಚಿಸುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳು ಸಮುದಾಯ ನೇತೃತ್ವದ ಉಪ್ಪು ಸೇವನೆ ಕಡಿತ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ, ಕಡಿಮೆ ಸೋಡಿಯಂ ಉಪ್ಪಿನ ಸೇವನೆಯನ್ನು ಜನರಲ್ಲಿ ಜನಪ್ರಿಯಗೊಳಿಸುವ ಬಗ್ಗೆ ಗಮನಹರಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವ್ಯಕ್ತಿಗೆ ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪು ಸೇವನೆ ಮಾಡಬೇಕೆಂದು ಶಿಫಾರಸು ಮಾಡಿದ್ದರೂ, ನಗರ ಪ್ರದೇಶದ ಜನರು ದಿನಕ್ಕೆ ಸುಮಾರು 9.2 ಗ್ರಾಂ ಸೇವಿಸುತ್ತಾರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಇದು ಸುಮಾರು 5.6 ಗ್ರಾಂಗಳಷ್ಟಿದೆ. ಇವೆರಡೂ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಇದಕ್ಕೆ ಪರಿಹಾರವೆಂದರೆ ಕಡಿಮೆ-ಸೋಡಿಯಂ ಉಪ್ಪು ಬಳಕೆಯಾಗಿದೆ. ಸೋಡಿಯಂ ಕ್ಲೋರೈಡ್‌ನ ಭಾಗವನ್ನು ಪೊಟ್ಯಾಸಿಯಮ್ ಅಥವಾ ಮೆಗ್ನೀಸಿಯಮ್ ಲವಣಗಳಿಗೆ ಬದಲಾಯಿಸುವ ಮಿಶ್ರಣಗಳು ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ (NIE) ಹಿರಿಯ ವಿಜ್ಞಾನಿ ಮತ್ತು ಅಧ್ಯಯನದ ಪ್ರಧಾನ ತನಿಖಾಧಿಕಾರಿ ಡಾ. ಶರಣ್ ಮುರಳಿ ಹೇಳಿದರು.

ಕಡಿಮೆ ಸೋಡಿಯಂ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಒಟ್ಟಾರೆ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ, ಕಡಿಮೆ ಸೋಡಿಯಂ ಉಪ್ಪಿಗೆ ಬದಲಾಯಿಸುವುದರಿಂದ ಸರಾಸರಿ 7/4 mmHg ರಷ್ಟು ರಕ್ತದೊತ್ತಡ ಕಡಿಮೆಯಾಗಬಹುದು. ಇದು ದೊಡ್ಡ ಪರಿಣಾಮ ಬೀರುವ ಒಂದು ಸಣ್ಣ ಬದಲಾವಣೆ ಎಂದು ಡಾ. ಮುರಳಿ ಹೇಳಿದರು.

ಹೆಚ್ಚಿನ ಉಪ್ಪು ಸೇವನೆಯ ಸಮಸ್ಯೆಯನ್ನು ನಿಭಾಯಿಸಲು, ಪಂಜಾಬ್ ಮತ್ತು ತೆಲಂಗಾಣದಲ್ಲಿ ICMR ಬೆಂಬಲದೊಂದಿಗೆ ಮೂರು ವರ್ಷಗಳ ಮಧ್ಯಸ್ಥಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಲ್ಲಿ ರಕ್ತದೊತ್ತಡ ಮತ್ತು ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ (HWCs) ಆರೋಗ್ಯ ಕಾರ್ಯಕರ್ತರು ನೀಡುವ ರಚನಾತ್ಮಕ ಉಪ್ಪು ಕಡಿತ ಸಮಾಲೋಚನೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವುದು ಗುರಿಯಾಗಿದೆ ಎಂದು NIE ಯ ಹಿರಿಯ ವಿಜ್ಞಾನಿ ಡಾ. ಗಣೇಶ್ ಕುಮಾರ್ ಹೇಳುತ್ತಾರೆ.

ನಾವು ಪ್ರಸ್ತುತ ಯೋಜನೆಯ ಮೊದಲ ವರ್ಷದಲ್ಲಿದ್ದೇವೆ, ಮೂಲ ಮೌಲ್ಯಮಾಪನಗಳು ಮತ್ತು ಕ್ಷೇತ್ರ ಸಿದ್ಧತೆಗಳ ಮೇಲೆ ಕೇಂದ್ರೀಕರಿಸಿದ್ದೇವೆ, ಮಧ್ಯಸ್ಥಿಕೆಗಳು ವಾಸ್ತವದಲ್ಲಿ ಆಧಾರವಾಗಿವೆ ಎಂದು ಖಚಿತಪಡಿಸಿಕೊಳ್ಳಲು, ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ(NIE) ಚೆನ್ನೈನ 300 ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರುಕಟ್ಟೆ ಸಮೀಕ್ಷೆಯನ್ನು ನಡೆಸಿತು, ಕಡಿಮೆ ಸೋಡಿಯಂ ಉಪ್ಪಿನ (LSS) ಲಭ್ಯತೆ ಮತ್ತು ಬೆಲೆಯನ್ನು ನಿರ್ಣಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ: SDPI, ಜಮಾತ್, ಸಂಘಟನೆಗಳ ಪಾತ್ರ ಪ್ರಶ್ನಿಸಿದ ಅಮಿತ್ ಶಾ!

ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು?': ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ನಡುವೆಯೇ ಹೊಸ ಮಾರುಕಟ್ಟೆಗಳತ್ತ ಭಾರತ ಕಣ್ಣು!

SCROLL FOR NEXT