ಒಮರ್ ಅಬ್ದುಲ್ಲಾ  online desk
ದೇಶ

"ಗಾಂಧಿ ಕೊಂದವರನ್ನು ನೀವು ಸಂಭ್ರಮಿಸುತ್ತೀರಾ...": ಹುತಾತ್ಮರ ದಿನ ಆಚರಿಸದಂತೆ ತಡೆ ಬಗ್ಗೆ ಒಮರ್ ಅಬ್ದುಲ್ಲಾ ಆಕ್ರೋಶ; Video

ಬಿಜೆಪಿ ಕಾಶ್ಮೀರಿ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಅಬ್ದುಲ್ಲಾ ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಬಲಪ್ರಯೋಗಕ್ಕೆ ಅಧಿಕಾರ ನೀಡಿದವರನ್ನು "ಮೂರ್ಖರು" ಎಂದು ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಜುಲೈ 13, 1931 ರಂದು ಮಹಾರಾಜ ಹರಿ ಸಿಂಗ್ ಅವರ ಡೋಗ್ರಾ ಪಡೆಗಳಿಂದ ಕೊಲ್ಲಲ್ಪಟ್ಟ ಕಾಶ್ಮೀರಿ ಪ್ರತಿಭಟನಾಕಾರರಿಗೆ ಗೌರವ ಸಲ್ಲಿಸಲು ಶ್ರೀನಗರದ ಹುತಾತ್ಮರ ಸ್ಮಶಾನಕ್ಕೆ ಪ್ರವೇಶಿಸುವುದನ್ನು ತಡೆದ ಹಿನ್ನೆಲೆಯಲ್ಲಿ ಸಿಎಂ ಒಮರ್ ಅಬ್ದುಲ್ಲಾ ಗೇಟ್ ಹಾರಿರುವುದು ಈಗ ವ್ಯಾಪಕ ಸುದ್ದಿಯಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಉನ್ನತ ನಾಯಕರು ಹುತಾತ್ಮರ ಸ್ಮಶಾನ ಅಥವಾ ಮಜರ್-ಎ-ಶುಹಾದಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು.

"ನಿನ್ನೆ ಇಲ್ಲಿ ಫಾತಿಹಾ ಓದಲು ನಮಗೆ ಅವಕಾಶವಿರಲಿಲ್ಲ. ಜನರನ್ನು ಅವರ ಮನೆಗಳಿಗೆ ಸೀಮಿತಗೊಳಿಸಲಾಗಿತ್ತು. ಗೇಟ್‌ಗಳನ್ನು ತೆರೆದಾಗ ಮತ್ತು ನಾನು ಇಲ್ಲಿಗೆ ಬರಲು ಬಯಸುತ್ತೇನೆ ಎಂದು ನಿಯಂತ್ರಣ ಕೊಠಡಿಗೆ ತಿಳಿಸಿದಾಗ, ನನ್ನ ಗೇಟ್‌ನ ಮುಂದೆ ಒಂದು ಬಂಕರ್ ನ್ನು ಸ್ಥಾಪಿಸಲಾಯಿತು ಮತ್ತು ತಡರಾತ್ರಿಯವರೆಗೂ ಅದನ್ನು ತೆಗೆದುಹಾಕಲಾಗಿಲ್ಲ. ಇಂದು ನಾನು ಅವರಿಗೆ ಏನನ್ನೂ ಹೇಳಲಿಲ್ಲ. ಅವರಿಗೆ ಹೇಳದೆ, ನಾನು ಕಾರಿನಲ್ಲಿ ಕುಳಿತು ಇಲ್ಲಿಗೆ ಬಂದೆ" ಎಂದು ಅವರು ಸ್ಮಾರಕದಲ್ಲಿ ಗೌರವ ಸಲ್ಲಿಸಿದ ನಂತರ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ತಮ್ಮನ್ನು ಹಾಗೂ ತಮ್ಮ ಸಹೋದ್ಯೋಗಿಗಳನ್ನು ಕಾಶ್ಮೀರಿ ಪ್ರತಿಭಟನಾಕಾರರಿಗೆ ಗೌರವ ಸಲ್ಲಿಸುವುದರಿಂದ ತಡೆದದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಒಮರ್ ಅಬ್ದುಲ್ಲಾ, ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪಕ್ಷ 'ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಂಭ್ರಮಿಸುತ್ತದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಕಾಶ್ಮೀರಿ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಅಬ್ದುಲ್ಲಾ ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಬಲಪ್ರಯೋಗಕ್ಕೆ ಅಧಿಕಾರ ನೀಡಿದವರನ್ನು "ಮೂರ್ಖರು" ಎಂದು ವಾಗ್ದಾಳಿ ನಡೆಸಿದ್ದಾರೆ.

"ಇದು ನನಗೆ ಅಥವಾ ನನ್ನ ಸಚಿವ ಸಹೋದ್ಯೋಗಿಗಳಿಗೆ ಏನಾಯಿತು ಎಂಬುದರ ಬಗ್ಗೆ ಅಲ್ಲ. ಇದು ನೀವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಕಳುಹಿಸುತ್ತಿರುವ ವಿಶಾಲ ಸಂದೇಶದ ಕುರಿತ ವಿಷಯವಾಗಿದೆ. ನೀವು ಅವರ ಧ್ವನಿ ಅಪ್ರಸ್ತುತ ಎಂದು ಹೇಳುತ್ತಿದ್ದೀರಿ" ಎಂದು ಅಬ್ದುಲ್ಲಾ ಮಾಧ್ಯಮಗಳೆದುರು ಆಕ್ರೋಶ ಹೊರಹಾಕಿದ್ದಾರೆ.

"ಜಮ್ಮು ಮತ್ತು ಕಾಶ್ಮೀರದ ಜನರು 'ಶಕ್ತಿಹೀನರು' ಎಂದು ಹೇಳಲು ನೀವು ನಿಮ್ಮ ದಾರಿಯಿಂದ ಹೊರಡುತ್ತಿದ್ದೀರಿ... ಆದರೆ ಅವರು ಹಾಗಲ್ಲ. ಮುಂದೆ ಏನಾಗುತ್ತದೆಯೋ ಅದಕ್ಕೆ ನಮ್ಮನ್ನು ದೂಷಿಸಬೇಡಿ," ಎಂದು ಅಬ್ದುಲ್ಲಾ ಕೋಪದಿಂದ ಹೇಳಿದರು, "ಅವರು ನಮ್ಮನ್ನು ಸದ್ದಿಲ್ಲದೆ ಪ್ರಾರ್ಥನೆ ಸಲ್ಲಿಸಲು ಬಿಟ್ಟಿದ್ದರೆ... ಯಾರಿಗೂ ಸಮಸ್ಯೆಯಾಗುತ್ತಿರಲಿಲ್ಲ" ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT