ಸಾಂದರ್ಭಿಕ ಚಿತ್ರ 
ದೇಶ

ಹುಡುಗಿಯೊಂದಿಗಿನ ಬರೀ ಸ್ನೇಹದಿಂದ ಪುರುಷನಿಗೆ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ನಡೆಸುವ ಹಕ್ಕಿಲ್ಲ: ದೆಹಲಿ ಹೈಕೋರ್ಟ್

ಅಪ್ರಾಪ್ತೆಯ ವಿಷಯಕ್ಕೆ ಬಂದಾಗ ಆಕೆಯ ಒಪ್ಪಿಗೆಯೂ ಸಹ ಕಾನೂನುಬದ್ಧವಲ್ಲ ಎಂದು ಎತ್ತಿ ತೋರಿಸಿ, ಬಾಲಕಿಯೊಂದಿಗೆ ಒಪ್ಪಿಗೆಯ ಸಂಬಂಧವನ್ನು ಹೊಂದಿದ್ದಾನೆ ಎಂಬ ವ್ಯಕ್ತಿಯ ಹೇಳಿಕೆಯನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ತಿರಸ್ಕರಿಸಿದರು.

ನವದೆಹಲಿ: ಹುಡುಗಿಯೊಂದಿಗಿನ ಸ್ನೇಹವು ಒಪ್ಪಿಗೆಯಿಲ್ಲದೆ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದುವ ಹಕ್ಕನ್ನು ಪುರುಷನಿಗೆ ನೀಡುವುದಿಲ್ಲ ಎಂದಿರುವ ದೆಹಲಿ ಹೈಕೋರ್ಟ್, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಅಪ್ರಾಪ್ತೆಯ ವಿಷಯಕ್ಕೆ ಬಂದಾಗ ಆಕೆಯ ಒಪ್ಪಿಗೆಯೂ ಸಹ ಕಾನೂನುಬದ್ಧವಲ್ಲ ಎಂದು ಎತ್ತಿ ತೋರಿಸಿ, ಬಾಲಕಿಯೊಂದಿಗೆ ಒಪ್ಪಿಗೆಯ ಸಂಬಂಧವನ್ನು ಹೊಂದಿದ್ದಾನೆ ಎಂಬ ವ್ಯಕ್ತಿಯ ಹೇಳಿಕೆಯನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ತಿರಸ್ಕರಿಸಿದರು.

'ಹುಡುಗಿ ಒಬ್ಬ ಹುಡುಗನೊಂದಿಗೆ ಸ್ನೇಹ ಬೆಳೆಸುತ್ತಾಳೆ ಎಂಬ ಕಾರಣಕ್ಕಾಗಿ, ಆಕೆಯ ಒಪ್ಪಿಗೆಯಿಲ್ಲದೆ ಆಕೆಯೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಸ್ವಾತಂತ್ರ್ಯ ನೀಡುವುದಿಲ್ಲ. ಇದಲ್ಲದೆ, ಅಪ್ರಾಪ್ತೆಯಾಗಿರುವುದರಿಂದ ಆಕೆಯ ಒಪ್ಪಿಗೆ ಕೂಡ ಈ ಪ್ರಕರಣದಲ್ಲಿ ಕಾನೂನುಬದ್ಧವಾಗುವುದಿಲ್ಲ' ಎಂದು ಜುಲೈ 24 ರಂದು ಆದೇಶ ಹೊರಡಿಸಿದೆ.

ನ್ಯಾಯಾಲಯವು ಎಫ್‌ಐಆರ್‌ನಲ್ಲಿ ಸಂತ್ರಸ್ತೆಯ ನಿರ್ದಿಷ್ಟ ಆರೋಪಗಳನ್ನು ಮತ್ತು ಆಕೆಯ ವಿರೋಧದ ಹೊರತಾಗಿಯೂ ಆಕೆಯ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಆಕೆಯ ಸಾಕ್ಷ್ಯವನ್ನು ಪರಿಗಣಿಸಿದೆ.

'ಆರೋಪಿ/ಅರ್ಜಿದಾರನು ತನ್ನ ಸಿಹಿ ಮಾತುಗಳಿಂದ ಅವಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಪ್ರಾಸಿಕ್ಯೂಟರ್ ಹೇಳಿದ್ದರಿಂದಲೇ ಇದನ್ನು ಸಮ್ಮತಿಯ ಸಂಬಂಧದ ಪ್ರಕರಣವೆಂದು ಒಪ್ಪಲು ಸಾಧ್ಯವಿಲ್ಲ. ಆರೋಪಿಗೆ ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

2023ರ ಏಪ್ರಿಲ್‌ನಲ್ಲಿ ವಿಕಾಸಪುರಿಯ ಎನ್‌ಡಿಎಂಸಿ ಅಪಾರ್ಟ್‌ಮೆಂಟ್‌ಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಪ್ರಾಪ್ತಳೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಕೃತ್ಯವನ್ನು ಯಾರಿಗೂ ತಿಳಿಸದಂತೆ ಬಾಲಕಿಯನ್ನು ಬೆದರಿಸಲಾಗಿದ್ದು, ಆ ವ್ಯಕ್ತಿ 2023ರ ನವೆಂಬರ್‌ವರೆಗೆ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದನು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಘಟನೆಯ ಸಮಯದಲ್ಲಿ ಹುಡುಗಿ ಮೇಜರ್ ಆಗಿದ್ದಳು ಮತ್ತು ಒಪ್ಪಿಗೆಯ ಮೂಲಕ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.

ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಬಾಲಕಿಯ ತಾಯಿ ಹೇಳಿದ ಸಾಕ್ಷ್ಯದಿಂದ ಆಯ್ದ ಒಂದೇ ಒಂದು ಸಾಲನ್ನು ಪರಿಗಣಿಸಿ, ಉಳಿದ ಪುರಾವೆಗಳು ಮತ್ತು ದಾಖಲೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ, ಆಕೆಯ ಶೈಕ್ಷಣಿಕ ದಾಖಲೆಗಳನ್ನು ನೋಡಿ ಆಕೆ ಅಪ್ರಾಪ್ತೆ ಎಂದು ಪರಿಗಣಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT