ಸಾಂದರ್ಭಿಕ ಚಿತ್ರ  
ದೇಶ

26ನೇ ಕಾರ್ಗಿಲ್ ವಿಜಯ ದಿವಸ: ರಾಷ್ಟ್ರಪತಿ, ಪ್ರಧಾನಿ ಮೋದಿ, ರಕ್ಷಣಾ ಸಚಿವರು ಸೇರಿದಂತೆ ಸೇನಾಪಡೆಯಿಂದ ಗೌರವ

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಕೂಡ ವೀರ ಯೋಧರನ್ನು ಸನ್ಮಾನಿಸಿದರು.

ಕಾರ್ಗಿಲ್ ಪರ್ವತಗಳಿಂದ ಪಾಕಿಸ್ತಾನದಿಂದ ಒಳನುಗ್ಗುವವರನ್ನು ಹೊರಹಾಕುವಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸನ್ನು ಗುರುತಿಸುವ ಕಾರ್ಗಿಲ್ ವಿಜಯ ದಿವಸದ 26 ನೇ ವಾರ್ಷಿಕೋತ್ಸವ ದಿನವಾದ ಇಂದು ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸ್ಮರಿಸಿದ್ದಾರೆ.

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಕೂಡ ವೀರ ಯೋಧರನ್ನು ಸನ್ಮಾನಿಸಿದರು.

ಕಾರ್ಗಿಲ್ ವಿಜಯ ದಿವಸ ದೇಶದ ಯೋಧರ ಅಸಾಧಾರಣ ಶೌರ್ಯ ಮತ್ತು ದೃಢ ನಿಶ್ಚಯವನ್ನು ಸಂಕೇತಿಸುತ್ತದೆ. 1999 ರ ಕಾರ್ಗಿಲ್ ಸಂಘರ್ಷ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರಿಗೆ ಗೌರವ ನಮನಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ದೇಶಕ್ಕಾಗಿ ಸೈನಿಕರ ಸಮರ್ಪಣೆ ಮತ್ತು ಸರ್ವೋಚ್ಚ ತ್ಯಾಗವು ನಮ್ಮ ನಾಗರಿಕರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾರ್ಗಿಲ್ ದಿವಸದ ಇತಿಹಾಸ ಮತ್ತು ಮಹತ್ವ

ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುವ ಕಾರ್ಗಿಲ್ ವಿಜಯ್ ದಿವಸ್, 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತವು ಕಠಿಣ ಪರಿಶ್ರಮದಿಂದ ಗಳಿಸಿದ ವಿಜಯವನ್ನು ಗೌರವಿಸುತ್ತದೆ. ಪಾಕಿಸ್ತಾನಿ ಪಡೆಗಳು, ಉಗ್ರಗಾಮಿಗಳಂತೆ ವೇಷ ಧರಿಸಿ, ಭಾರತದ ಕಾರ್ಗಿಲ್ ಪ್ರದೇಶದಲ್ಲಿ ಪ್ರಮುಖ ಎತ್ತರದ ಸ್ಥಾನಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡಾಗ ಸಂಘರ್ಷವು ಮೇ 1999 ರಲ್ಲಿ ಪ್ರಾರಂಭವಾಯಿತು.

ಪ್ರದೇಶದ ನಿಯಂತ್ರಣ ಮರಳಿ ಪಡೆಯಲು, ಭಾರತೀಯ ಸೇನೆಯು ಆಪರೇಷನ್ ವಿಜಯ್ ನ್ನು ಪ್ರಾರಂಭಿಸಿತು. ಇದು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಈ ಅಪಾಯಕಾರಿ ಪರ್ವತ ಶಿಖರಗಳನ್ನು ಮರಳಿ ವಶಪಡಿಸಿಕೊಳ್ಳುವ ಸವಾಲಿನ ಕಾರ್ಯಾಚರಣೆಯಾಗಿದೆ.

ಸುಮಾರು ಎರಡು ತಿಂಗಳ ತೀವ್ರ ಹೋರಾಟದ ನಂತರ, ಭಾರತವು ಯಶಸ್ವಿಯಾಗಿ ಒಳನುಸುಳುವವರನ್ನು ಹೊರಹಾಕಿ ಜುಲೈ 26, 1999 ರಂದು ವಿಜಯವನ್ನು ಘೋಷಿಸಿತು, ಆದರೂ ಈ ಗೆಲುವು 527 ಧೈರ್ಯಶಾಲಿ ಸೈನಿಕರ ತ್ಯಾಗ ಕಂಡಿತು.

ಈ ದಿನವು, ಭಾರತೀಯ ಸಶಸ್ತ್ರ ಪಡೆಗಳ ಯುದ್ಧತಂತ್ರದ ಕೌಶಲ್ಯ ಮತ್ತು ಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ ಮತ್ತು ದೇಶಭಕ್ತಿಯನ್ನು ತನ್ನ ಗಡಿಗಳನ್ನು ರಕ್ಷಿಸುವ ಭಾರತದ ದೃಢಸಂಕಲ್ಪದ ಬಲವಾದ ಲಾಂಛನವಾಗಿ ಪ್ರೇರೇಪಿಸುತ್ತದೆ.

ಈ ಸಂದರ್ಭವು ದೇಶದ ಹೆಮ್ಮೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ದೇಶಕ್ಕೆ ನೆನಪಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ ಅವರ ಮನೋಭಾವವು ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.

ಕಾಶ್ಮೀರ ಮತ್ತು ಲಡಾಖ್ ನಡುವಿನ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿರುವ ಪಾಕಿಸ್ತಾನಿ ಪಡೆಗಳು ಕಾರ್ಗಿಲ್‌ನ ಪರ್ವತಗಳಲ್ಲಿನ ಕಾರ್ಯತಂತ್ರದ ಸ್ಥಾನಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡಿದ್ದವು. ಭಾರತದ ಸೈನಿಕರು ಅವರನ್ನು ಹೊರಹಾಕಲು 'ಆಪರೇಷನ್ ವಿಜಯ್' ನ್ನು ಪ್ರಾರಂಭಿಸಿ ಯಶಸ್ಸು ಸಾಧಿಸಿತು.

ಜುಲೈ 26, 1999 ರಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್ ದ ಯಶಸ್ವಿ ಪರಾಕಾಷ್ಠೆಯನ್ನು ಘೋಷಿಸಿತು, ಲಡಾಖ್‌ನ ಕಾರ್ಗಿಲ್‌ನ ಹಿಮಾವೃತ ಶಿಖರಗಳಲ್ಲಿ ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧದ ನಂತರ ವಿಜಯವನ್ನು ಘೋಷಿಸಿತು.

ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯದ ಸ್ಮರಣಾರ್ಥ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT