ರಾಹುಲ್ ಗಾಂಧಿ 
ದೇಶ

'ಟ್ರಂಪ್ ಶರಣಾಗು ಎಂದರು, ಅದಕ್ಕೆ ಮೋದಿ ಯೆಸ್ ಸರ್ ಎಂದರು': ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಅಮೆರಿಕದ ಬೆದರಿಕೆಯ ಹೊರತಾಗಿಯೂ ಭಾರತ 1971 ರಲ್ಲಿ ಪಾಕಿಸ್ತಾನವನ್ನು ಮಣಿಸಿದೆ ಎಂದು ರಾಹುಲ್ ಹೇಳಿದ್ದಾರೆ.

ಭೋಪಾಲ್‌: ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿದ್ದೇನೆ ಎಂದು ವಾಷಿಂಗ್ಟನ್ ಹೇಳಿಕೊಂಡ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಫೋನ್ ಕರೆ ನಂತರ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ "ಶರಣಾಗಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ, "ಟ್ರಂಪ್ ಅವರಿಂದ ಕರೆ ಬಂದಿತು ಮತ್ತು ಮೋದಿ ಜಿ ತಕ್ಷಣವೇ ಶರಣಾದರು; ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ. ಇದು ಬಿಜೆಪಿ-ಆರ್‌ಎಸ್‌ಎಸ್‌ನ ಗುಣ; ಅವರು ಯಾವಾಗಲೂ ತಲೆಬಾಗುತ್ತಾರೆ" ಎಂದು ಟೀಕಿಸಿದರು.

ಅಮೆರಿಕದ ಬೆದರಿಕೆಯ ಹೊರತಾಗಿಯೂ ಭಾರತ 1971 ರಲ್ಲಿ ಪಾಕಿಸ್ತಾನವನ್ನು ಮಣಿಸಿದೆ ಎಂದು ರಾಹುಲ್ ಹೇಳಿದ್ದಾರೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕ್ರಮಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "1971 ರಲ್ಲಿ ಅಮೆರಿಕದ ಏಳನೇ ನೌಕಾಪಡೆ ಬಂದರೂ ಇಂದಿರಾ ಗಾಂಧಿ ಜಿ 'ನಾನು ಮಾಡಬೇಕಾದ್ದನ್ನು ಮಾಡುತ್ತೇನೆ' ಎಂದು ಹೇಳಿದ್ದರು" ಎಂದರು.

"ಕಾಂಗ್ರೆಸ್ ಪಕ್ಷ ಶರಣಾಗುವುದಿಲ್ಲ. ಗಾಂಧೀಜಿ, ನೆಹರೂಜಿ, ಸರ್ದಾರ್ ಪಟೇಲ್‌ಜಿ - ಇವರು ಎಂದಿಗೂ ಶರಣಾಗುವವರಲ್ಲ. ಅವರು ಮಹಾಶಕ್ತಿಗಳ ವಿರುದ್ಧ ಹೋರಾಡುವ ಜನ" ಎಂದು ರಾಹುಲ್ ಗಾಂಧಿ ಹೇಳಿದರು.

"ನನಗೆ ಬಿಜೆಪಿ-ಆರ್‌ಎಸ್‌ಎಸ್ ಜನರ ಬಗ್ಗೆಯೂ ಗೊತ್ತು. ನೀವು ಸ್ವಲ್ಪ ಅವರ ಮೇಲೆ ಒತ್ತಡ ಹೇರಿ, ಸ್ವಲ್ಪ ಒತ್ತಾಯ ಮಾಡಿದರೆ ಅವರು ಭಯದಿಂದ ಓಡಿಹೋಗುತ್ತಾರೆ" ಎಂದು ವಾಗ್ದಾಳಿ ನಡೆಸಿದರು.

"ಡೊನಾಲ್ಡ್ ಟ್ರಂಪ್ ಅಲ್ಲಿಂದ ಕರೆ ಮಾಡಿ 'ನರೇಂದರ್... ಶರಣಾಗತಿ' ಎಂದು ಹೇಳಿದರು. ಇಲ್ಲಿ ನರೇಂದ್ರ ಮೋದಿ ಟ್ರಂಪ್ ಅವರ ಸನ್ನೆಯನ್ನು ಅನುಸರಿಸಿ 'ಯೆಸ್ ಸರ್' ಎಂದು ಶರಣಾದರು" ಎಂದು ರಾಹುಲ್ ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ