ಏರ್ ಇಂಡಿಯಾ  
ದೇಶ

ಪ್ರಯಾಣಿಕರೇ ಗಮನಿಸಿ: ಎಂಟು Air India ವಿಮಾನಗಳ ಹಾರಾಟ ರದ್ದು, ಇಲ್ಲಿದೆ ಮಾಹಿತಿ...!

ಜೂನ್ 12 ರಂದು 270 ಜನರ ಸಾವಿಗೆ ಕಾರಣವಾದ ಡ್ರೀಮ್ಲೈನರ್ನ ವಿಮಾನ ಅಪಘಾತದ ನಂತರ ನಿಯಂತ್ರಕ ಪರಿಶೀಲನೆ ಮತ್ತು ನಡೆಯುತ್ತಿರುವ ಸುರಕ್ಷತಾ ಪರಿಶೀಲನೆಗಳ ಹಿನ್ನೆಲೆಯಲ್ಲಿ ಈ ವಿಮಾನಗಳ ಹಾರಾಟ ರದ್ದಾಗಿದೆ.

ನವದೆಹಲಿ: ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರಣಗಳನ್ನು ನೀಡಿರುವ ಏರ್ ಇಂಡಿಯಾ ಶುಕ್ರವಾರ ಕನಿಷ್ಠ ಎಂಟು ಅಂತರರಾಷ್ಟ್ರೀಯ ಹಾಗೂ ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ.

ಜೂನ್ 12 ರಂದು 270 ಜನರ ಸಾವಿಗೆ ಕಾರಣವಾದ ಡ್ರೀಮ್ಲೈನರ್ನ ವಿಮಾನ ಅಪಘಾತದ ನಂತರ ನಿಯಂತ್ರಕ ಪರಿಶೀಲನೆ ಮತ್ತು ನಡೆಯುತ್ತಿರುವ ಸುರಕ್ಷತಾ ಪರಿಶೀಲನೆಗಳ ಹಿನ್ನೆಲೆಯಲ್ಲಿ ಈ ವಿಮಾನಗಳ ಹಾರಾಟ ರದ್ದಾಗಿದೆ.

ಅಂತರರಾಷ್ಟ್ರೀಯ ವಿಮಾನ

  • AI906 (ದುಬೈ-ಚೆನ್ನೈ)

  • AI308 (ದೆಹಲಿ-ಮೆಲ್ಬೋರ್ನ್)

  • AI309 (ಮೆಲ್ಬೋರ್ನ್-ದೆಹಲಿ)

  • AI2204 (ದುಬೈ-ಹೈದರಾಬಾದ್)

ದೇಶೀಯ ವಿಮಾನ

  • AI874 (ಪುಣೆ-ದೆಹಲಿಗೆ)

  • AI456 (ಅಹಮದಾಬಾದ್-ದೆಹಲಿಗೆ)

  • AI2872 (ಹೈದರಾಬಾದ್-ಮುಂಬೈಗೆ)

  • AI571 (ಚೆನ್ನೈ-ಮುಂಬೈಗೆ)

ಈ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಗೊಂಡಿವೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಏರ್ ಇಂಡಿಯಾ ಕ್ಷಮೆಯಾಚಿಸಿದ್ದು, ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ಹೇಳಿದೆ.

ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಅರಿಯಲು http://airindia.com/in/en/manage/flight-status.html ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಅಥವಾ 011 69329333, 011 69329999 ಈ ಗ್ರಾಹಕ ಸೇವಾ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. http://airindia.com ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದೆ.

ಇದಕ್ಕೂ ಮೊದಲು, ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ಹಾರಾಟದಲ್ಲಿ ಶೇಕಡಾ 15 ರಷ್ಟು ಕಡಿತವನ್ನು ಘೋಷಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಲು ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ, ತಿರುಗೇಟು ನೀಡಲು ಸಿಎಂ ಪ್ರತಿತಂತ್ರ

SCROLL FOR NEXT