ಎನ್ ಆರ್ ನಾರಾಯಣ ಮೂರ್ತಿ  
ದೇಶ

ಉದ್ಯೋಗಿಗಳನ್ನು ಮನುಷ್ಯರನ್ನಾಗಿ ನೋಡಿ, ಅವರಿಗೂ ಕಂಪನಿಯ ಲಾಭ ಹಂಚಿ: Infosys Narayana Murthy

ನಿಮ್ಮ ಉದ್ಯೋಗಿಗಳನ್ನು ಹೊಗಳುವಾಗ ಸಾರ್ವಜನಿಕವಾಗಿಯೇ ಹೊಗಳಿ. ಅದೇ ರೀತಿ, ಟೀಕಿಸುವ ಸಂದರ್ಭ ಬಂದಾಗ ಟೀಕೆಗಳು ಖಾಸಗಿಯಾಗಿರಲಿ.

ಮುಂಬೈ: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ ಈಗ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಮಾತನಾಡಿ ಸುದ್ದಿಯಲ್ಲಿದ್ದಾರೆ.

ಈಗ ಕಂಪನಿಗಳಿಗೆ ಸಲಹೆ ನೀಡಿರುವ ನಾರಾಯಣಮೂರ್ತಿ, ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮಾತ್ರವಲ್ಲದೆ, ಸಂಸ್ಥೆಯಲ್ಲಿರುವ ವೇತನದ ಅಂತರವನ್ನೂ ಕಡಿಮೆ ಮಾಡಿ ಎಂದು ಹೇಳಿದ್ದಾರೆ.

TiE Con Mumbai 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಪೊರೇಟ್‌ ಉದ್ಯೋಗಿಯ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯಬೇಕು ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ನಿಮ್ಮ ಉದ್ಯೋಗಿಗಳನ್ನು ಹೊಗಳುವಾಗ ಸಾರ್ವಜನಿಕವಾಗಿಯೇ ಹೊಗಳಿ. ಅದೇ ರೀತಿ, ಟೀಕಿಸುವ ಸಂದರ್ಭ ಬಂದಾಗ ಟೀಕೆಗಳು ಖಾಸಗಿಯಾಗಿರಲಿ. ಸಂಸ್ಥೆಯ ಲಾಭವನ್ನು ಆದಷ್ಟು ನ್ಯಾಯಯುತವಾಗಿ ಉದ್ಯೋಗಿಗಳಿಗೆ ಹಂಚಿಕೆ ಮಾಡಿ' ಎಂದು ಮೂರ್ತಿ ಹೇಳಿದ್ದಾರೆ.

ಬಡತನ ನಿರ್ಮೂಲನೆಗೆ ಪರಿಹಾರ

ಭಾರತದ ಭವಿಷ್ಯದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯು ಸಹಾನುಭೂತಿಯಿಂದ ಬಂಡವಾಳಶಾಹಿಯನ್ನು ಸ್ವೀಕರಿಸುವ ವ್ಯವಹಾರಗಳ ಮೇಲೆ ಅವಲಂಬಿತವಾಗಿದೆ ಎಂದು ನಂಬುವುದಾಗಿ ನಾರಾಯಣಮೂರ್ತಿ ಹೇಳಿದ್ದಾರೆ.

"ಬಂಡವಾಳಶಾಹಿ ಎಂದರೆ ಜನರು ತಮಗಾಗಿ ಮತ್ತು ತಮ್ಮ ಹೂಡಿಕೆದಾರರಿಗೆ ಸಂಪತ್ತನ್ನು ಸೃಷ್ಟಿಸಲು, ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆ ಮೂಲಕ ಬಡತನವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಒಳ್ಳೆಯ ಕೆಲಸಗಳು ನಡೆಯಲು ತೆರಿಗೆಗಳಿಗೆ ಕೊಡುಗೆ ನೀಡಲು ಹೊಸ ಆಲೋಚನೆಗಳೊಂದಿಗೆ ಹೊರಬರಲು ಅವಕಾಶಗಳನ್ನು ಒದಗಿಸುವುದು" ಎಂದು ನಾರಾಯಣ ಮೂರ್ತಿ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT